ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರಗಾಮಿ ದಾಳಿ ಮಾನವೀಯತೆಯ ಮೇಲೆ ನಡೆದ ಘೋರ ದಾಳಿಯಾಗಿದೆ. ತುಳುನಾಡ ರಕ್ಷಣಾ ವೇದಿಕೆ ಇದನ್ನು ತೀವ್ರ ಕಠಿಣವಾಗಿ ಖಂಡಿಸುತ್ತದೆ.
*ಕಾಶ್ಮೀರ ಕಣಿವೆ ಸಹಜತೆಗೆ ಮರಳಿದೆ ಎಂಬ ಧೈರ್ಯ ವಿಶ್ವಾಸ ಹೆಚ್ಚಾಗುತ್ತಿರುವ ಮಧ್ಯೆಯೇ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ನಿಸ್ಸಹಾಯಕ ಮಹಿಳೆ ಮತ್ತು ಮಕ್ಕಳೆದುರು ಅವರ ತಂದೆಯನ್ನು , ಪತ್ನಿ ಮುಂದೆ ಗಂಡಂದಿರನ್ನು ಕೊಲ್ಲುವವರು ಮನುಷ್ಯರೇ ಅಲ್ಲ.
ಕಾಶ್ಮೀರದಲ್ಲಿ ಪ್ರವಾಸೋದ್ಯಮ ನಂಬಿ ಬದುಕುವ ಜನರು ಇಂತಹ ಘಟನೆಯಿಂದ ಕಂಗಾಲಾಗಿದ್ದಾರೆ. ಬದುಕಿನ ಕೆಲ ದಿನಗಳನ್ನು ಸಂತೋಷ ಮೋಜು ಮಾಡಲು ದೇಶ ವಿದೇಶಗಳಿಂದ ಬರುವ ಭೂಲೋಕದ ಸ್ವರ್ಗ ಎಂಬ ಖ್ಯಾತಿಯ ಕಾಶ್ಮೀರದಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೇಂದ್ರ ಸರಕಾರ ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು ಎಂದು ತುಳುನಾಡ ರಕ್ಷಣಾ ವೇದಿಕೆ ಪ್ರಕಟನೆ ತಿಳಿಸಿದೆ
Trending
- ದಕ್ಷಿಣ ಕನ್ನಡದಲ್ಲಿ ಮಳೆಯ ಅಬ್ಬರ ಮುಂದುವರಿಕೆ: ಆಗಸ್ಟ್ 4ರಂದು ಅಂಗನವಾಡಿ, ಶಾಲೆಗಳಿಗೆ ಮತ್ತೆ ರಜೆ
- ಶಿಕ್ಷಣ, ಕಲಾ ಹಾಗೂ ಸಮಾಜಸೇವೆಗೆ ಯು.ಆರ್. ಶೆಟ್ಟಿಗೆ ‘ಸ್ವಾಮಿ ವಿವೇಕಾನಂದ ಪ್ರಶಸ್ತಿ’ ಪ್ರದಾನ
- ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಬದುಕಿನ ಅನಾವರಣ: ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆ
- ಕ್ರಿಸ್ಟಲ್ ಪ್ಯೂರ್ ಹರ್ಬಲ್ ಬ್ಯೂಟಿ & ವೆಲ್ನೆಸ್ ಉತ್ಪನ್ನಗಳ ಭವ್ಯ ಅನಾವರಣ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರಿಗೆ ಸನ್ಮಾನ
- ಉಡುಪಿ: ಬಾರ್-ಪಬ್ಗಳ ಮೇಲೆ ಪೊಲೀಸರ ವಿಶೇಷ ದಾಳಿ; ಅಪ್ರಾಪ್ತರು ಮದ್ಯ ಸೇವನೆ ವೇಳೆ ಪತ್ತೆ
- ಕಾಪು ತಾಲೂಕು–ಬೈರಂಪಳ್ಳಿ ಘಟಕದ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರ ಸ್ನೇಹ ಸಮ್ಮಿಲನ ಯಶಸ್ವಿ ,ಹಲವರು ಸದಸ್ಯತ್ವ ಪಡೆದು ಸಂಘಟನೆಗೆ ಸೇರ್ಪಡೆ – ತುಳುನಾಡಿನ ಭಾಷೆ, ಸಂಸ್ಕೃತಿ ಉಳಿವಿಗೆ ಯುವಜನತೆಗೆ ಯೋಗಿಶ್ ಶೆಟ್ಟಿ ಜಪ್ಪು ಕರೆ
- ಉಳ್ಳಾಲ – ಭಗವತೀ ಕ್ಷೇತ್ರ ವಿವಾದದಲ್ಲಿ ಬೆದರಿಕೆ ಆರೋಪ: ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್ ಆಡಿಯೋ ಕುರಿತು ಪೊಲೀಸರಿಗೆ ದೂರು
- ಕುಂದಾಪುರ ಶೂಟೌಟ್ ಪ್ರಕರಣ: ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾ ಬಂಧನ

