ವಿಟ್ಲ: ಪತ್ನಿ ಮನೆಗೆ ತೆರಳಿದ್ದ ಕಂಬಳೆಬೆಟ್ಟುವಿನ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಂಬಳಬೆಟ್ಟು ಸಮೀಪದ ನೆಕ್ಕರೆ ನಿವಾಸಿ ಖಾದರ್ ಎಂಬವರ ಮಗ ಅಶ್ರಫ್(35) ಮೃತರು. ಇವರು ನಿನ್ನೆ ಸಂಜೆ ಪತ್ನಿಯ ಮನೆಗೆ ತೆರಳಿದ್ದರು ಎನ್ನಲಾಗಿದೆ. ರಾತ್ರಿ ಅಲ್ಲಿ ವಿಪರೀತ ಎದೆನೋವು ಕಾಣಿಸಿಕೊಂಡಿದ್ದು ಮರುಕ್ಷಣವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.