ಇರಾನ್ನಲ್ಲಿ ನಡೆಯುತ್ತಿರುವ ನಿರಂತರ ಯುದ್ಧದಿಂದ ಉಡುಪಿ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರಿನ ಸಮಸ್ಯೆ ಉಲ್ಬಣಿಸುತ್ತಿದೆ. ಸಾಮಾನ್ಯ ಜನರ ಜೀವನಕ್ಕೂ ಇದರ ಬಿಸಿ ತಟ್ಟುತ್ತಿದೆ. ಈವರೆಗೆ ಗೃಹ ಬಳಕೆಯ ಸಿಲಿಂಡರ್ ಆದರೂ ಸಿಗುತ್ತಿತ್ತು. ಈಗ ಅದರ ಲಭ್ಯತೆಯು ಇಲ್ಲದಂತಾಗಿ ಜನಸಾಮಾನ್ಯರಿಗೂ ಸಹ ಅಡುಗೆ ಮಾಡಲಾಗದೆ ಪರಿತಪಿಸುವಂತಾಗಿದೆ. ಸಣ್ಣ ಹೋಟೆಲ್ಗಳು, ದೊಡ್ಡ ಹೋಟೆಲ್ಗಳು, ಲಾಡ್ಜ್ಗಳು, ಸ್ವಂತ ಮನೆಯಲ್ಲಿ ವಾಸಿಸುವವರು, ಬಾಡಿಗೆ ಮನೆಯಲ್ಲಿರುವ ಜನಸಾಮಾನ್ಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸಹ ಸಿಲಿಂಡರಿನ ಸಮಸ್ಯೆಗೆ ಸಿಲುಕಿದ್ದಾರೆ. ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ವರ್ಷವೂ ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ, ವಿವಾಹ ಮುಂತಾದ ಸಮಾರಂಭ ನಡೆಯುವ ಕಾಲವಾಗಿದ್ದು, ಈಗ ಅದಕ್ಕೂ ಅನಿಲ ಪೂರೈಕೆಯ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ಸಭೆ ಸಮಾರಂಭವವನ್ನು ನಡೆಸಲಾಗದೆ ಸಿಲಿಂಡರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಗಮನಹರಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಇವರ ವಿನಂತಿ.
Trending
- ಬೆಳ್ಮಾರು ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯಗಳ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ
- ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ,ನಾರಾಯಣ ಗುರು ಕಾಲೇಜು ಹಳೆ ವಿದ್ಯಾರ್ಥಿ ಸಂಘದಿಂದ ಶೈಕ್ಷಣಿಕ ಪ್ರೋತ್ಸಾಹ
- ದ್ವೇಷ ಮತ್ತು ವೈಮನಸ್ಸು ಪ್ರಚೋದನೆ ಆರೋಪ: ಯೂಟ್ಯೂಬ್ ವಿಡಿಯೊ ವಿರುದ್ಧ ಪೊಲೀಸ್ ಕ್ರಮ
- ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳ ಮಹಾ ಸಭೆ ಯಶಸ್ವಿಸಂಘಟನೆ ಬಲವರ್ಧನೆಗೆ ಮಹತ್ವದ ನಿರ್ಣಯಗಳು
- ಪ್ರಕೃತಿಯೊಂದಿಗೆ ವಿನಯ ಮತ್ತು ಸಹಬಾಳ್ವೆಯ ಬದುಕು ಅಗತ್ಯ: ಮಾತಾ ಅಮೃತಾನಂದಮಯಿ ದೇವಿ
- ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಗಳೂರು, ಉಪ್ಪಿನಂಗಡಿ, ಸುರತ್ಕಲ್ ಠಾಣೆಗಳ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಕೊನೆಗೂ ಪೊಲೀಸರ ವಶಕ್ಕೆ
- ಕರ್ನಾಟಕ ರಾಜಕೀಯದಲ್ಲಿ ಅಸ್ಥಿರತೆ ಹೆಚ್ಚಳ: ಸಿದ್ದರಾಮಯ್ಯ ರಾಜಿನಾಮೆ ಕಾಂಗ್ರೆಸ್ ಒಳಜಗಳದ ಪರಾಕಾಷ್ಠೆಯೇ?
- ಮೇ 30ರಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ ಮಹಾ ಸಭೆ ಪಕ್ಷ ಸಂಘಟನೆ ಬಲವರ್ಧನೆ,ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆ ಹಾಗೂ ಜನಪರ ಹೋರಾಟಗಳ ಕುರಿತು ಮಹತ್ವದ ಚರ್ಚೆ

