ಇರಾನ್ನಲ್ಲಿ ನಡೆಯುತ್ತಿರುವ ನಿರಂತರ ಯುದ್ಧದಿಂದ ಉಡುಪಿ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರಿನ ಸಮಸ್ಯೆ ಉಲ್ಬಣಿಸುತ್ತಿದೆ. ಸಾಮಾನ್ಯ ಜನರ ಜೀವನಕ್ಕೂ ಇದರ ಬಿಸಿ ತಟ್ಟುತ್ತಿದೆ. ಈವರೆಗೆ ಗೃಹ ಬಳಕೆಯ ಸಿಲಿಂಡರ್ ಆದರೂ ಸಿಗುತ್ತಿತ್ತು. ಈಗ ಅದರ ಲಭ್ಯತೆಯು ಇಲ್ಲದಂತಾಗಿ ಜನಸಾಮಾನ್ಯರಿಗೂ ಸಹ ಅಡುಗೆ ಮಾಡಲಾಗದೆ ಪರಿತಪಿಸುವಂತಾಗಿದೆ. ಸಣ್ಣ ಹೋಟೆಲ್ಗಳು, ದೊಡ್ಡ ಹೋಟೆಲ್ಗಳು, ಲಾಡ್ಜ್ಗಳು, ಸ್ವಂತ ಮನೆಯಲ್ಲಿ ವಾಸಿಸುವವರು, ಬಾಡಿಗೆ ಮನೆಯಲ್ಲಿರುವ ಜನಸಾಮಾನ್ಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸಹ ಸಿಲಿಂಡರಿನ ಸಮಸ್ಯೆಗೆ ಸಿಲುಕಿದ್ದಾರೆ. ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ವರ್ಷವೂ ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ, ವಿವಾಹ ಮುಂತಾದ ಸಮಾರಂಭ ನಡೆಯುವ ಕಾಲವಾಗಿದ್ದು, ಈಗ ಅದಕ್ಕೂ ಅನಿಲ ಪೂರೈಕೆಯ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ಸಭೆ ಸಮಾರಂಭವವನ್ನು ನಡೆಸಲಾಗದೆ ಸಿಲಿಂಡರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಗಮನಹರಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಇವರ ವಿನಂತಿ.
Trending
- ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಗಾಗಿ ಉಪಯೋಗಿಸಿಕೊಳ್ಳುತ್ತಿದೆ :ನಿಖಿಲ್ ಕುಮಾರಸ್ವಾಮಿ
- ಜನರೊಂದಿಗೆ ಜನತಾದಳ” ಅಭಿಯಾನಕ್ಕೆ ಕಡೂರುನಲ್ಲಿ ಭಾರೀ ಸ್ಪಂದನೆ: ಕಾರ್ಯಕರ್ತರ ಮಹಾಸಂಗಮ
- ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 39ನೇ ಫನ್ನೀರ್ ವಾರ್ಡಿನ ಸೆಮಿನರಿ ವೀವ್ 1ನೇ ಅಡ್ಡರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ
- ಜೆಡಿಎಸ್. ದ .ಕ. ಜಿಲ್ಲಾ ಘಟಕದ ನೂತನ ಕಾರ್ಯಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ ಕೊಳಂಬೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ಸೇರಿದಂತೆ ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇಮಕ
- ಯಾದಗಿರಿ ದುರಂತ | ಮುಖಾಮುಖಿ ಡಿಕ್ಕಿಗೆ ಬೆಂಕಿ – 9 ಮಂದಿ ಸಾವು
- ವೈಟ್ ಸ್ಟೋನ್ ಶರೀಫ್ ಹಾಜಿಗೆ ಅರ್ಥಪೂರ್ಣ ಸನ್ಮಾನ — ಮನಸೂರೆಗೊಂಡ ಕಾರ್ಯಕ್ರಮ
- ಬೆಂಗಳೂರು ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡ ಎಂ.ಬಿ.ಎ ವಿದ್ಯಾರ್ಥಿ ಡಾ. ಆರ್ಥಿಕ್ ಕೆದಂಬಾಡಿ
- ಜೆಡಿಎಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ನಮನ

