- ಮಂಗಳೂರು ಲೋಕೋಪಯೋಗಿ ಇಲಾಖೆಯ ಎಸ್ಡಿಎ ಲಂಚ ಸ್ವೀಕರಿಸುವಾಗ ಕರ್ನಾಟಕ ಲೋಕಾಯುಕ್ತ ಬಲೆಗೆ
- ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳರ್ಪಾಡಿ ಗ್ರಾಮದ ಕ್ರೀಡಾಂಗಣಕ್ಕಾಗಿ ಸರಕಾರಿ ಜಾಗ ಮೀಸಲಿರಿಸುವಂತೆ ಕಾಪು ತುಳುನಾಡ ರಕ್ಷಣಾ ವೇದಿಕೆ ಮನವಿ
- ಹರಿಹರಪುರದಲ್ಲಿ’ಜಾಬಾಲಿ – ನಂದಿನಿ’ ಯಕ್ಷಗಾನ ತಾಳ ಮದ್ದಳೆ
- ಕುಂದಾಪುರ: ಹೊಸಂಗಡಿ ಟ್ರೆಕ್ಕಿಂಗ್ ವೇಳೆ ಕುಂದಾಪುರದ ಮೆಡಿಕಲ್ ಶಾಪ್ನ ಮಾಲಕಿ ನದಿಯಲ್ಲಿ ಮುಳುಗಿ ದುರ್ಮರಣ
- ಅಯತೊಲ್ಲಾ ಅಲಿ ಖಮೇನಿ ಅವರ ಮಧ್ಯಂತರ ಉತ್ತರಾಧಿಕಾರಿಯಾಗಿ ಅಯತೊಲ್ಲಾ ಅಲಿ ರೆಜಾ ಅರಾಫಿ ಅವರು ನೇಮಕ
- ಶ್ರೀ ಶಿವದುರ್ಗಂಭ ಮಠ, ಶಿವಗಿರಿ – ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ನಿಧಿ ಸಂಗ್ರಹ ಕಾರ್ಯಕ್ರಮ ಯಶಸ್ವಿ
- ಸಮಾಜದ ಸಮಗ್ರತೆ ಇಂದಿನ ತುರ್ತು ಅವಶ್ಯಕತೆ: ಮೂಡಬಿದ್ರೆ ಶ್ರೀಗಳು
- ಖ್ಯಾತ ಸಾಹಿತಿ ಮತ್ತು ಚಿಂತಕ ಎಂ ಜಿ ಹೆಗಡೆ ಅವರ “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಕೃತಿಯ ಬಿಡುಗಡೆ ಹಾಗೂ “ಗಾಂಧಿಮನೆಯ ಅವಲಕ್ಕಿಸರ” ಪುಸ್ತಕ ಪರಿಚಯ ಕಾರ್ಯಕ್ರಮ
Author: Tulunada Surya
ಮಂಗಳೂರು, ಮಾ.02: ದ.ಕ ಜಿಲ್ಲೆಯಲ್ಲಿ ಲಂಚದ ಆರೋಪದ ಮೇರೆಗೆ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ಮತ್ತೊಂದು ಯಶಸ್ವಿ ಬಲೆ ಬೀಸಿದ್ದಾರೆ. ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ಫಿರ್ಯಾದುದಾರರು 2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಗಳ ಬಿಲ್ ಪಾವತಿಗಾಗಿ 4 ಶೇಕಡಾ ಪ್ರಮಾಣದಲ್ಲಿ ರೂ.22,600/- ಲಂಚ ನೀಡುವಂತೆ ಮಂಗಳೂರು ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್ಡಿಎ ಸಂಪತ್ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಕುರಿತು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ಇಂದು (02.03.2026) ಆರೋಪಿತ ಎಸ್ಡಿಎ ಸಂಪತ್ ಅವರು ಫಿರ್ಯಾದುದಾರರಿಂದ ರೂ.22,600/- (ಇಪ್ಪತ್ತೆರಡು ಸಾವಿರದ ಆರು ನೂರು) ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಈ…
ಕಾಪು: ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದ ಪಂಚಾಯತ್ ವ್ಯಾಪ್ತಿಯ ಸರ್ವೇ ನಂ. 82/3 ರಲ್ಲಿರುವ ಬೆಳ್ಳರ್ಪಾಡಿ ಮಾಣೈ ಹರಿಖಂಡಿಗೆ ರಸ್ತೆ ಪಕ್ಕ ಸುಂದರ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ಅವರ ಮನೆಗಳ ಸಮೀಪದ 0.79 ಎಕರೆ ಸರಕಾರಿ ಜಾಗವನ್ನು ಶಾಲಾ ಮಕ್ಕಳ ಹಾಗೂ ಗ್ರಾಮಸ್ಥರ ಕ್ರೀಡಾಂಗಣವಾಗಿ ಶಾಶ್ವತವಾಗಿ ಕಾಯ್ದಿರಿಸಲು ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಸುಮಾರು 35 ವರ್ಷಗಳಿಂದ ಮಾತ್ರ ಫ್ರೆಂಡ್ಸ ಸಹಯೋಗದೊಂದಿಗೆ ಈ ಜಾಗವನ್ನು ಗ್ರಾಮಸ್ಥರು ಕ್ರೀಡಾಂಗಣವಾಗಿ ಉಪಯೋಗಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ಮಕ್ಕಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕ ಕ್ರೀಡಾ ಚಟುವಟಿಕೆಗಳಿಗೆ ಈ ಮೈದಾನ ಅತ್ಯಂತ ಅಗತ್ಯವಾಗಿದೆ. ಗ್ರಾಮದಲ್ಲಿ ಪ್ರತ್ಯೇಕ ಕ್ರೀಡಾಂಗಣದ ವ್ಯವಸ್ಥೆ ಇಲ್ಲದಿರುವುದರಿಂದ ಈ ಜಾಗವೇ ಎಲ್ಲರಿಗೂ ಏಕೈಕ ಮೈದಾನವಾಗಿದ್ದು, ಗ್ರಾಮಸ್ಥರ ಹಿತದೃಷ್ಟಿಯಿಂದ ಇದನ್ನು ಶಾಶ್ವತವಾಗಿ ಕ್ರೀಡಾಂಗಣವಾಗಿ ಉಳಿಸಬೇಕೆಂದು ಒತ್ತಾಯಿಸಲಾಗಿದೆ. ಈ ಸಂಬಂಧ ಬೈರಂಪಳ್ಳಿ ಗ್ರಾಮ ಪಂಚಾಯತ್ 17.07.2014 ರಂದು ನಡೆದ ಸಭೆಯಲ್ಲಿ ನಿರ್ಣಯ ಸಂಖ್ಯೆ 3/14-15 ರಂತೆ…
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕು ಹರಿಹರಪುರದಲ್ಲಿರುವ ಕಾಳನಾಯ್ಕನ ಕಟ್ಟೆ ಶ್ರೀ ರಕ್ತೇಶ್ವರಿ, ವರ್ತೆ ಪಂಜುರ್ಲಿ, ಮರ್ಲು ಚಿಕ್ಕು ದೇವಸ್ಥಾನದ 23ನೇ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ವಿಶೇಷ ತಾಳಮದ್ದಳೆ ಕೂಟವನ್ನು ಏರ್ಪಡಿಸಲಾಗಿತ್ತು. ಯಕ್ಷ ವೇದಿಕೆ ಹರಿಹರಪುರ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು. ಜಾಬಾಲಿ – ನಂದಿನಿ:ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಿಂದ ಆಯ್ದ ‘ಜಾಬಾಲಿ – ನಂದಿನಿ’ ಆಖ್ಯಾನವನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಕಲಾವಿದರು ಪ್ರಸ್ತುತಪಡಿಸಿದರು. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಂದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಜಾಬಾಲಿ) ಮತ್ತು ವಿಜಯ ಶಂಕರ ಆಳ್ವ ಮಿತ್ತಳಿಕೆ (ನಂದಿನಿ) ಅರ್ಥಧಾರಿಗಳಾಗಿ ಭಾಗವಹಿಸಿದರು. ಉಳಿದ ಪಾತ್ರಗಳಲ್ಲಿ ಸ್ಥಳೀಯ ಕಲಾವಿದರಾದ ಅರವಿಂದ ಸೋಮಯಾಜಿ (ದೇವೇಂದ್ರ), ಕೆ.ಎಸ್. ಮಂಜುನಾಥ ಹರಿಹರಪುರ (ಶ್ರೀದೇವಿ) ಮತ್ತು ಶ್ರವಣಕುಮಾರ್ (ಪುರಜನರು) ಪಾಲ್ಗೊಂಡರು.ಹಿಮ್ಮೇಳದಲ್ಲಿ ಕಿಗ್ಗ ಹಿರಣ್ಣಾಚಾರ್ ಮತ್ತು ವೆಂಕಟರಮಣ ಮೂರ್ತಿ ಕೊಪ್ಪ ಭಾಗವತರಾಗಿದ್ದರು. ವೆಂಕಟೇಶ ಕೊಗ್ರೆ ಮದ್ದಳೆ ನುಡಿಸಿದರು.ಕಾರ್ಯಕ್ರಮ ಸಂಘಟಕರಾದ ಕೆ. ಎಸ್. ಮಂಜುನಾಥ…
ಕುಂದಾಪುರ, ಮಾ.1: ಹೊಸಂಗಡಿಯ ಭಾಗಿಮನೆ ಸಮೀಪ ಟ್ರೆಕ್ಕಿಂಗ್ಗೆ ತೆರಳಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಭವಿಸಿದೆ. ಮೃತರನ್ನು ಶುಭಶ್ರೀ ಕಾರಂತ್ (53) ಎಂದು ಗುರುತಿಸಲಾಗಿದೆ. ಅವರು ಸ್ಥಳೀಯವಾಗಿ ಪರಿಚಿತ ಉದ್ಯಮಿಯಾಗಿದ್ದರು ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ, ಕುಂದಾಪುರದಿಂದ ಸುಮಾರು 8–10 ಜನರ ತಂಡ ರವಿವಾರ ಬೆಳಗ್ಗೆ ಹೊಸಂಗಡಿಯ ಮೆಟ್ಕಲ್ ಗುಡ್ಡ ಪ್ರದೇಶಕ್ಕೆ ಟ್ರೆಕ್ಕಿಂಗ್ಗೆ ತೆರಳಿತ್ತು. ಟ್ರೆಕ್ಕಿಂಗ್ ಮುಗಿದ ಬಳಿಕ ಸಮೀಪದ ನದಿಯ ಬಳಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈಜಲು ನದಿಗೆ ಇಳಿದ ವೇಳೆ ಅಥವಾ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಂಡದ ಸದಸ್ಯರು ತಕ್ಷಣ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರೂ, ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆ ಪೊಲೀಸರು…
ಟೆಹ್ರಾನ್: ಹತ್ಯೆಗೀಡಾದ ಅಯತೊಲ್ಲಾ ಅಲಿ ಖಮೇನಿ ಅವರ ಮಧ್ಯಂತರ ಉತ್ತರಾಧಿಕಾರಿಯಾಗಿ ಅಯತೊಲ್ಲಾ ಅಲಿ ರೆಜಾ ಅರಾಫಿ ಅವರನ್ನು ನೇಮಿಸಲಾಗಿದೆ. ಅಲಿ ರೆಜಾ ಅರಾಫಿ ಹಿರಿಯ ಧಾರ್ಮಿಕ ವಿದ್ವಾಂಸರು. 67 ವರ್ಷದ ಅಯತೊಲ್ಲಾ ಅಲಿ ರೆಜಾ ಅರಾಫಿ ಅವರು ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತ ಸಹಾಯಕರೂ ಆಗಿದ್ದಾರೆ. ಹೊಸ ಸರ್ವೋಚ್ಚ ನಾಯಕ ಆಯ್ಕೆಯಾಗುವವರೆಗೆ ಅಲಿ ರೆಜಾ ನೇತೃತ್ವದ ಮೂವರು ಸದಸ್ಯರ ಆಡಳಿತ ಮಂಡಳಿಯು ಆಡಳಿತ ನಡೆಸಲಿದೆ. ಇರಾನ್ನ ಸಾಂವಿಧಾನಿಕ ವ್ಯವಸ್ಥೆಯಡಿಯಲ್ಲಿ, ಮಧ್ಯಂತರ ಮಂಡಳಿಯಲ್ಲಿ ಅಯತೊಲ್ಲಾ ಅಲಿರೆಜಾ ಅರಾಫಿ ಜೊತೆಗೆ, ದೇಶದ ಅಧ್ಯಕ್ಷ ಮಸೌದ್ ಪೆಸೆಕಿಯನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್-ಹೊಸೇನ್ ಮೊಹ್ಸೆನ್-ಎಜೆಯ್ ಸೇರಿದ್ದಾರೆ. ಅರಾಫಿ ಪ್ರಸ್ತುತ ಇರಾನ್ನ ಪ್ರಬಲ ಗಾರ್ಡಿಯನ್ ಕೌನ್ಸಿಲ್ನ ಉಪಾಧ್ಯಕ್ಷರಾಗಿದ್ದಾರೆ, ಇದು ಚುನಾವಣೆಗಳು ಮತ್ತು ಸಂಸತ್ತು ಅಂಗೀಕರಿಸಿದ ಕಾನೂನುಗಳಿಗೆ ಅಭ್ಯರ್ಥಿಗಳನ್ನು ಪರಿಶೀಲಿಸುತ್ತದೆ. ಅವರು ಇರಾನ್ನ ಸೆಮಿನರಿ ವ್ಯವಸ್ಥೆಯ ಮುಖ್ಯಸ್ಥರೂ ಆಗಿದ್ದಾರೆ ತಂತ್ರಜ್ಞರಾದ ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಅವರು…
ಕೋಟೆಕಾರು :ಮಾಡೂರು ಮಾರಿಯಣ್ಣ ಪಾಲ್ ನ ಶ್ರೀ ಶಿವದುರ್ಗಂಭ ಮಠದಲ್ಲಿ ದಿನಾಂಕ 01-03-2026 ರಂದು ಬೆಳಿಗ್ಗೆ 11 ಗಂಟೆಗೆ ಮಠದ ಜೀರ್ಣೋದ್ಧಾರ ಕಾರ್ಯ ನಿಮಿತ್ತ ಭಕ್ತಾದಿಗಳ ಸಹಕಾರದಿಂದ ನಿಧಿ ಸಂಗ್ರಹ ಕಾರ್ಯಕ್ರಮವು ಮಠದ ಅವರಣದಲ್ಲಿ ಸಭಾಂಗಣದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಿತು. ಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆಯನ್ನು ಉದ್ದೇಶಿಸಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಬೋಳಿಯಾರ್ ಅವರು ಸ್ವಾಗತ ಭಾಷಣ ಮಾಡಿದರು. ಮಠದ ಇತಿಹಾಸ, ಅದರ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು. ಮಠ ಆಡಳಿತ ಮುಕ್ತೇಶರಾದ ಚಂದ್ರಶೇಖರ್ ಉಚ್ಚಿಲ ಅವರು ಮಾತನಾಡಿ, ಮಠವು ಅನೇಕ ವರ್ಷಗಳಿಂದ ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದು, ಭೌತಿಕ ಸೌಕರ್ಯಗಳ ಅಭಿವೃದ್ಧಿ ಅವಶ್ಯಕತೆಯಾಗಿದೆ ಎಂದರು. ಟ್ರಸ್ಟಿ ಯಶವಂತ ಆಳ್ವ ಅವರು ಮಠದ ಭವಿಷ್ಯ ರೂಪರೇಖೆಯನ್ನು ವಿವರಿಸಿ, ದಾನಿಗಳ ಸಹಕಾರದಿಂದ ಶೀಘ್ರದಲ್ಲೇ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಜೀರ್ಣೋದ್ಧಾರ…
ಮೂಡಬಿದ್ರೆ,:ಸಂಕುಚಿತ ಮನೋಭಾವಗಳಿಂದ ಸಮಾಜ ವಿಭಜನೆಯ ಅಂಚಿನತ್ತ ಸಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಸಮಗ್ರತೆ, ಸಹಭಾಗಿತ್ವ ಮತ್ತು ಧಾರ್ಮಿಕ ಮೌಲ್ಯಗಳ ಅಳವಡಿಕೆ ಅತ್ಯಂತ ಅಗತ್ಯವೆಂದು ಸ್ವಸ್ತಿ ಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಮೂಡಬಿದ್ರೆಯ ಶ್ರೀ ಮಹಾವೀರ ಭವನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ತೌಳವ ಇಂದ್ರ ಸಮಾಜದ ಆಶ್ರಯದಲ್ಲಿ ನಡೆದ ಇಂದ್ರ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ಹಾಗೂ ಜೈನ ಸಮಾಜದ ಮಕ್ಕಳಿಗೆ ವೃತೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ತೌಳವ ಇಂದ್ರ ಸಮಾಜವು ಯಾವುದೇ ಭೇದಭಾವವಿಲ್ಲದೆ ಜೈನ ಬಾಲಕ–ಬಾಲಕಿಯರನ್ನು ಒಟ್ಟುಗೂಡಿಸಿ ಧರ್ಮಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಸಂಸ್ಕಾರಮೂಲಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಜೈನ ಸಮಾಜದ ಏಳಿಗೆಗೆ ಇದು ಹೊಸ ನಾಂದಿ ಆಗಬೇಕು. ಜೈನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಇಂತಹ ಸಂಘಟಿತ ಪ್ರಯತ್ನಗಳು ಅವಶ್ಯಕವೆಂದು ಶ್ರೀಗಳು ತಿಳಿಸಿದರು. ವಟುಗಳಿಗೆ ಧರ್ಮೋಪದೇಶ ನೀಡಿದ ಅವರು, ಜೈನ ಆಚಾರ್ಯರು ನಿರೂಪಿಸಿದ ನಾಲ್ಕು ಅನುಯೋಗಗಳಲ್ಲಿ…
ಮಂಗಳೂರು: ನಗರದ ಸಹೋದಯ ಹಾಲ್ ನಲ್ಲಿ ಖ್ಯಾತ ಸಾಹಿತಿ ಮತ್ತು ಚಿಂತಕ ಎಂ ಜಿ ಹೆಗಡೆ ಅವರ “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಕೃತಿಯ ಬಿಡುಗಡೆ ಹಾಗೂ “ಗಾಂಧಿಮನೆಯ ಅವಲಕ್ಕಿಸರ” ಪುಸ್ತಕ ಪರಿಚಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾಹಿತ್ಯಾಸಕ್ತರು, ಚಿಂತಕರು, ಸಮಾಜಮುಖಿ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಚಿಂತನೆಗೆ ದಾರಿಯಾದ ಒಂದು ಮಹತ್ವದ ವೇದಿಕೆಯಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಬಿ. ರಾಮಾನಾಥ್ ರೈ ಅವರು “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ದೇಶದ ಸಂವಿಧಾನಿಕ ಮೌಲ್ಯಗಳು, ಧರ್ಮನಿರಪೇಕ್ಷತೆಯ ಪರಂಪರೆ ಮತ್ತು ಸಮಾನತೆಯ ಆಧಾರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಲೇಖಕರ ಚಿಂತನೆಗಳು ಸಮಾಜದಲ್ಲಿ ವಿಚಾರಮಂಥನಕ್ಕೆ ಕಾರಣವಾಗುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಅವರು ಸಾಹಿತ್ಯವು ಸಮಾಜದ ದಿಕ್ಕು ತೋರಿಸುವ ಶಕ್ತಿ ಎಂದು ಹೇಳಿ, ಇಂತಹ ಕೃತಿಗಳು ಕಾಲಪ್ರಜ್ಞೆಯ ಪ್ರಶ್ನೆಗಳನ್ನು ಎತ್ತಿ ಸಮಾಜದಲ್ಲಿ…
ಟೆಹ್ರಾನ್: ಮಧ್ಯಪೂರ್ವದಲ್ಲಿ ಉದ್ವಿಗ್ನತೆ ತೀವ್ರಗೊಳಿಸುವ ಬೆಳವಣಿಗೆಯಲ್ಲಿ, ಇರಾನ್ ಸರ್ವೋಚ್ಚ ನಾಯಕ Ayatollah Ali Khamenei ಅಮೆರಿಕ–ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ಅಧಿಕೃತವಾಗಿ ದೃಢಪಡಿಸಿದೆ. ಈ ಕುರಿತು ಅಮೆರಿಕ ಅಧ್ಯಕ್ಷ Donald Trump ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಇರಾನ್ ಮಾಧ್ಯಮವೂ ಹತ್ಯೆಯನ್ನ ದೃಢಪಡಿಸಿದೆ. ಇಸ್ಲಾಮಿಕ್ ಗಣರಾಜ್ಯದ ಮೇಲೆ ನಡೆದ ಈ ದಾಳಿ ಬಳಿಕ ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ. ಕುಟುಂಬ ಸದಸ್ಯರೂ ಬಲಿ? ಇರಾನ್ನ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, ಖಮೇನಿ ಅವರ ಮಗಳು, ಮೊಮ್ಮಗ ಹಾಗೂ ಅಳಿಯ ಸೇರಿ ನಾಲ್ವರು ಆಪ್ತ ಸಂಬಂಧಿಕರು ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಟಿವಿ ಘೋಷಣೆಯ ವೇಳೆ ಭಾವುಕ ಕ್ಷಣ ಈ ಸುದ್ದಿ ದೇಶದ ಟಿವಿ ವಾಹಿನಿಗಳಲ್ಲಿ…
Madikeri: ಮದೆನಾಡು ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ (17), ಮಡಿಕೇರಿಯ St. Michael’s School ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಸಂಜೆ ಸುಮಾರು 5:30ರ ವೇಳೆಗೆ, ಶಾಲೆಯಿಂದ ಬಸ್ ಮೂಲಕ ಬೆಟ್ಟತ್ತೂರು ತಲುಪಿದ ಪೂಜಾ, ಎಂದಿನಂತೆ ತನ್ನ ಮನೆಯನ್ನು ಕಡೆಗಣಿಸಿ ನಡೆದುಕೊಂಡು ಹೋಗುತ್ತಿದ್ದಾಗ, ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಅಚಾನಕ್ ನಡೆದ ಈ ದಾಳಿಯಲ್ಲಿ ಬಾಲಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿದರೂ, ಆ ವೇಳೆಗೆ ಪೂಜಾ ಜೀವ ಕಳೆದುಕೊಂಡಿದ್ದರು. ಮೃತದೇಹವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗ್ರಾಮಸ್ಥರ ಆಕ್ರೋಶ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದೆನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದೆ ಎಂದು ಅವರು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
