Author: Tulunada Surya

ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಗಡಿಭಾಗದ ಪ್ರತಿಷ್ಠಿತ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ರವರ ಗೆಲುವಿಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ ಪರಿಸರ, ಕುಂಬ್ಳೆ ಪಂಚಾಯತ್ ವ್ಯಾಪ್ತಿಯ ಕುಂಟಗೇರಡ್ಕದ ಪರಿಶಿಷ್ಟ ಪಂಗಡ ಕಾಲೋನಿ, ಗುಡ್ಡೆಕೇರಿ, ಬಡಾಜೆ ಪ್ರದೇಶಗಳು ಸೇರಿದಂತೆ ಹಲವು ಮನೆಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಸಾಧನೆಗಳನ್ನು ತಿಳಿಸಿ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮಂಜೇಶ್ವರದಲ್ಲಿ ಈ ಬಾರಿ ತಾವರೆ ಅರಳುವುದು ಶತ ಸಿದ್ದವಾಗಿದ್ದು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದರು. ಪ್ರಮುಖರಾದ ರಮೇಶ್ ಹೆಗ್ಡೆ, ಪ್ರಶಾಂತ್ ಪೈ, ಪೂಜಾ ಪೈ, ವರುಣ್ ಅಂಬಟ್, ಯಾದವ ಬಡಾಜೆ, ಆದರ್ಶ್, ಹರೀಶ್ಚಂದ್ರ ಮಂಜೇಶ್ವರ, ಸೇರಿದಂತೆ ಕ್ಷೇತ್ರದ ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಮಂಗಳೂರು ಇದರ ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವು ರೋಟರಿ ಕ್ಲಬ್ ಬಜ್ಪೆ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜ್ಪೆ, ಕರಂಬಾರು ಹಾಗೂ ಎನ್.ಜಿ.ಒ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಭವನದಲ್ಲಿ ನಡೆಯಿತು.ಈ ಶಿಬಿರವನ್ನು ಎನ್.ಜಿ.ಒ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ಸದಸ್ಯರಾದ ಶ್ರೀಮತಿ ಲಿಲ್ಲಿ ಮೇರಿ ಅವರು ಉದ್ಘಾಟಿಸಿ ಮಾತನಾಡಿ, “ಆರೋಗ್ಯದ ರಕ್ಷಣೆಯು ತುಂಬಾ ಮಹತ್ವದ್ದಾಗಿದೆ. ನಾವು ಆರೋಗ್ಯವಾಗಿದ್ದರೆ ಎಲ್ಲವನ್ನೂ ಸಂಪಾದಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ನೇತೃತ್ವದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ಜನರ ಆರೋಗ್ಯದ ಬಗ್ಗೆ…

Read More

ಮಂಗಳೂರು / ಮುಂಬೈ: ಸಾಂಸ್ಕೃತಿಕ ವೈಭವ ಮತ್ತು ಸಮುದ್ರ ಪ್ರವಾಸದ ಅಪೂರ್ವ ಸಂಯೋಜನೆಯೊಂದಿಗೆ, Yakshadrva Patla Foundation Mangalore ಮತ್ತು Triranga Sangama Mumbai ಸಂಸ್ಥೆಗಳು ಸಂಯುಕ್ತವಾಗಿ ವಿಶಿಷ್ಟ ಸಮುದ್ರಯಾನ ಕಾರ್ಯಕ್ರಮವನ್ನು ಘೋಷಿಸಿವೆ. “ಸಮುದ್ರದ ಅಲೆಗಳ ಮೇಲೆ ಸಂಚರಿಸುವ ಭವ್ಯ ನೌಕೆ” ಎಂಬ ಶೀರ್ಷಿಕೆಯಲ್ಲಿ ನಡೆಯುವ ಈ ವಿಶೇಷ ಕ್ರೂಸ್‌ ಯಾತ್ರೆ, ಜೂನ್ 1 ರಿಂದ ಜೂನ್ 5, 2026 ರವರೆಗೆ ಮುಂಬೈ – ಲಕ್ಷದ್ವೀಪ – ಮುಂಬೈ ಮಾರ್ಗದಲ್ಲಿ ಆಯೋಜಿಸಲಾಗಿದೆ. ಯಾತ್ರೆಯ ವಿವರಗಳು: 🔹 ಜೂನ್ 1 (ಸೋಮವಾರ): ಮಧ್ಯಾಹ್ನ 11:30ರಿಂದ 2:30ರವರೆಗೆ ಚೆಕ್-ಇನ್. ಸಂಜೆ 4 ಗಂಟೆಗೆ ಮುಂಬೈನಿಂದ ನೌಕೆಯ ಪ್ರಯಾಣ ಪ್ರಾರಂಭ. ರಾತ್ರಿ ಮನರಂಜನಾ ಕಾರ್ಯಕ್ರಮಗಳು. 🔹 ಜೂನ್ 2 (ಮಂಗಳವಾರ): ಸಮುದ್ರದಲ್ಲೇ ಪೂರ್ಣ ದಿನ ಮನರಂಜನೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1:30ರವರೆಗೆ ಮೊದಲ ಯಕ್ಷಗಾನ ಪ್ರದರ್ಶನ. 🔹 ಜೂನ್ 3 (ಬುಧವಾರ): ಬೆಳಿಗ್ಗೆ 9:30ಕ್ಕೆ ಲಕ್ಷದ್ವೀಪ ತಲುಪುವುದು. ದ್ವೀಪ, ಕಡಲತೀರಗಳ ವೀಕ್ಷಣೆ. ಸಂಜೆ 5:30ಕ್ಕೆ ಮುಂಬೈಗೆ…

Read More

ಬ್ರಹ್ಮಾವರ, ಉಡುಪಿ: ವಸಂತ ಋತುವಿನ ವಿಶೇಷ ಖಗೋಳೀಯ ಘಟನೆಯಾದ ‘ಪಿಂಕ್ ಸೂಪರ್ ಮೂನ್’ ವೀಕ್ಷಣೆಗೆ ಕೊಳಲಗಿರಿಯಲ್ಲೊಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ವ್ಯಕ್ತವಾಯಿತು. ಕೊಳಲಗಿರಿಯ ವಿಹಂಗಮ ನೋಟ ಹೊಂದಿರುವ ಬ್ಯಾಂಕ್ ಆಫ್ ಬರೋಡಾ ಸಮೀಪದ ಮಂಜುನಾಥ್ ಕುಲಾಲ್ ಅವರ ಮನೆಯ ತಾರಸಿನ ಮೇಲೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಫ್ರಾಂಕಿ ಡಿಸೋಜ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಳುನಾಡಿನ ಹೆಮ್ಮೆ ಆಗಿರುವ ಆರ್. ಮನೋಹರ್ ಅವರ ಸಾಧನೆಯನ್ನು ಶ್ಲಾಘಿಸಿ, ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದ ದೂರದರ್ಶಕದ ಮೂಲಕ ಜನಸಾಮಾನ್ಯರಿಗೆ ‘ಪಿಂಕ್ ಸೂಪರ್ ಮೂನ್’ ಅನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಿರುವುದು ಅಭಿನಂದನೀಯ ಎಂದರು. ಆರ್. ಮನೋಹರ್ ಅವರ ವಿಶೇಷ ದೂರದರ್ಶಕದ ನೆರವಿನಿಂದ ಭಾಗವಹಿಸಿದವರು ಚಂದ್ರನ ಅದ್ಭುತ ದೃಶ್ಯವನ್ನು ಸಮೀಪದಿಂದ ವೀಕ್ಷಿಸಿ ಕಣ್ತುಂಬಿಕೊಂಡರು. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖಗೋಳ ವಿಜ್ಞಾನದ…

Read More

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಗಮ ಪ್ರದೇಶವಾದ ಕೆ.ಜಿ.ರೋಡ್ ಇಲ್ಲಿ ಸುಗಮ ಸಂಚಾರಕ್ಕಾಗಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದಿಂದ ಸಾರ್ವಜನಿಕರ ಪರವಾಗಿ ಮನವಿ… ಉಡುಪಿ: ಕೆ.ಜಿ. ರೋಡ್ ಪ್ರದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ ಹಾಗೂ ಅಪಘಾತಗಳ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಅಂಡರ್ ಪಾಸ್ ಮತ್ತು ಸರ್ವಿಸ್ ರೋಡ್ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದೆ. ಈ ಕುರಿತು ಪ್ರಕಟಣೆ ನೀಡಿದ ಸಂಘಟನೆಯ ಪದಾಧಿಕಾರಿಗಳು, ಕೆ.ಜಿ. ರೋಡ್ ರಾಜ್ಯದ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ನಡೆಯುತ್ತದೆ. ಆದರೆ ಮೂಲಭೂತ ರಸ್ತೆ ಸೌಕರ್ಯಗಳ ಕೊರತೆ, ಸಮರ್ಪಕ ಸರ್ವಿಸ್ ರೋಡ್ ವ್ಯವಸ್ಥೆಯ ಅಭಾವ ಮತ್ತು ಪಾದಚಾರಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಅಗತ್ಯವಾದ ಅಂಡರ್ ಪಾಸ್ ಇಲ್ಲದಿರುವುದು ಸಾರ್ವಜನಿಕರಿಗೆ ಗಂಭೀರ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ…

Read More

ಬಂಟ್ವಾಳ: ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಭಾರತಿ ಅವರು ತಮ್ಮ ಮಗಳೊಂದಿಗೆ ಮಾರ್ಚ್ 30ರಂದು ದಾಸರಗುಡ್ಡೆ ಪ್ರದೇಶಕ್ಕೆ ಗುಳಿಗಜ್ಜ ಕಟ್ಟೆಗೆ ಹಣ ಹಾಕುವ ಸಲುವಾಗಿ ಬೆಳಿಗ್ಗೆ ಬಂದಿದ್ದರು. ಈ ವೇಳೆ ಮೆಲ್ಕಾರ್–ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಿ ರಸ್ತೆ ಅಂಚಿಗೆ ತಲುಪುತ್ತಿದ್ದಾಗ, ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಬರುತ್ತಿದ್ದ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಭಾರತಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. 👉 ಸ್ಥಳೀಯರು ಈ ಹೆದ್ದಾರಿಯಲ್ಲಿ ವಾಹನಗಳ ವೇಗ…

Read More

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಬಾಬುಗುಡ್ಡೆಯಿಂದ ಮಾರ್ನಮಿಕಟ್ಟೆ ಮುಖ್ಯ ರಸ್ತೆಯವರೆಗೆ ರೂ.1.52 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು. ನಂತರ ಮಾತನಾಡಿದ ಶಾಸಕರು, ಇದು ಅನೇಕ ವರ್ಷಗಳಿಂದ ಬೇಡಿಕೆಯಿದ್ದ ಪ್ರಮುಖ ಕಾಮಗಾರಿಯಾಗಿದ್ದು ಇದೀಗ ಸಾಕಾರಗೊಳ್ಳುತ್ತಿದೆ. ಇಲ್ಲಿ ಕಾಂಕ್ರೀಟೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆಯಲಿದ್ದು ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿಯವರು ವಿಶೇಷ ಶ್ರಮ ವಹಿಸಿದ್ದಾರೆ. ಈ ಭಾಗವು ಹಲವು ಧಾರ್ಮಿಕ ಕೇಂದ್ರಗಳು, ಕುದ್ಮುಲ್ ರಂಗರಾವ್ ರವರ ಸಮಾಧಿ ಹಾಗೂ ಟ್ರಸ್ಟ್, ಮೆಸ್ಕಾಂ ಕಚೇರಿ ಸಹಿತ ಜನನಿಬಿಡ ಪ್ರದೇಶವಾಗಿದ್ದು, ಮುಖ್ಯ ರಸ್ತೆಯಾಗಿರುವ ಕಾರಣ ಕಾಮಗಾರಿ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹಕಾರವೂ ಬಹಳ ಮುಖ್ಯ ಎಂದರು. ಈ ವೇಳೆ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೆಶ್ ಕುಮಾರ್, ಪಶ್ಚಿಮ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ್ ಪೂಜಾರಿ, ವಾರ್ಡ್ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ,…

Read More

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಾಭಿಮಾನಿಗಳಿಗೆ ಇಂದು ಒಂದು ಸ್ಮರಣೀಯ ಕ್ಷಣ ಸಾಕ್ಷಿಯಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾದ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಭವ್ಯವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಾಹಿತ್ಯ, ಶಿಕ್ಷಣ ಮತ್ತು ಸಮಾಜಮುಖಿ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ ಡಾ. ಇ.ಕೆ.ಎ ಸಿದ್ದೀಕ್ ಅಡ್ಡೂರು ಅವರಿಗೆ ಪ್ರತಿಷ್ಠಿತ “ಕನ್ನಡ ಸಿರಿ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಡಾ. ಸಿದ್ದೀಕ್ ಅಡ್ಡೂರು ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ನೀಡಿದ ಕೊಡುಗೆ, ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಕನ್ನಡದ ಪ್ರಚಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ಅವರ ಸಾಹಿತ್ಯ ಸೇವೆ ಮತ್ತು ಸಮಾಜದ ಮೇಲಿನ ಬದ್ಧತೆ ಇತರರಿಗೆ ಪ್ರೇರಣೆಯಾಗಲಿದೆ ಡಾ. ಸಿದ್ದೀಕ್ ಅಡ್ಡೂರು ಅವರು ತುಳುನಾಡ ಸೂರ್ಯ ಪತ್ರಿಕೆ ಯಜೊತೆ ಮಾತಾಡುತ್ತಾ , “ಈ ಗೌರವ ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಕನ್ನಡವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಸಲ್ಲುತ್ತದೆ” ಎಂದು ಹೇಳಿ, ಕನ್ನಡ ಭಾಷೆಯ ಉಳಿವು…

Read More

ತುಳುನಾಡ ಸೂರ್ಯ: ಕರಾವಳಿಯಲ್ಲಿ ನಡೆದ ಸುದೀಪ್ ರೈ ಅವರ ನಿಗೂಢ ಸಾವಿನ ಪ್ರಕರಣವು ಕೇವಲ ಒಂದು ಕುಟುಂಬದ ದುರಂತವಲ್ಲ—ಇದು ಇಂದಿನ ಸಮಾಜದ ಸಂಬಂಧಗಳ ನಾಜೂಕಿನ ಚಿತ್ರಣವಾಗಿದೆ. ಮದುವೆಯಾಗಿ ಕೇವಲ ಒಂದು ತಿಂಗಳು ತುಂಬುವಷ್ಟರಲ್ಲಿ ಜೀವನ ಅಂತ್ಯವಾದುದು ನೋವು ಮಾತ್ರವಲ್ಲ, ಅನೇಕ ಪ್ರಶ್ನೆಗಳಿಗೂ ಕಾರಣವಾಗಿದೆ. 🔍 ಪ್ರಕರಣದ ಹಿನ್ನಲೆ: ಪ್ರೀತಿ – ಮದುವೆ – ದುರಂತ ಪ್ರೀತಿಯಿಂದ ಆರಂಭವಾದ ಈ ಸಂಬಂಧ, ಮದುವೆಯಾಗಿ ಕೆಲವೇ ದಿನಗಳಲ್ಲಿ ಕಲಹಕ್ಕೆ ತಿರುಗಿ, ಈಗ ನಿಗೂಢ ಸಾವಿನ ತನಕ ತಲುಪಿರುವುದು ಆತಂಕಕಾರಿ ಬೆಳವಣಿಗೆ.ಒಂದು ಮನೆಯ ಸಂತೋಷವು ಹೇಗೆ ಕೆಲವೇ ದಿನಗಳಲ್ಲಿ ಶೋಕವಾಗಿ ಮಾರ್ಪಡುತ್ತದೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ⚖️ ಆರೋಪ-ಪ್ರತ್ಯಾರೋಪಗಳ ಕಾದಾಟ ಈ ಪ್ರಕರಣದಲ್ಲಿ ಸತ್ಯ ಏನು ಎಂಬುದನ್ನು ಪತ್ತೆಹಚ್ಚುವುದು ಇದೀಗ ಪೊಲೀಸ್ ಇಲಾಖೆಗೆ ಸವಾಲಾಗಿದೆ. 🔸 ಪೋಷಕರ ಆರೋಪ:• ಪತ್ನಿ ಸೌಮ್ಯರಿಂದ ಮಾನಸಿಕ ಹಿಂಸೆ• ನಿರಂತರ ಕಿರುಕುಳ• ವಿಷ ನೀಡಿರುವ ಶಂಕೆ• ಮಾ.17ರಂದು ನಡೆದ ಗಲಾಟೆ ಪ್ರಮುಖ ತಿರುವು 🔸 ಪತ್ನಿ ಸೌಮ್ಯ ಪ್ರತಿಕ್ರಿಯೆ:•…

Read More

ಉಡುಪಿ: ಖಗೋಳಾಸಕ್ತರಿಗೆ ವಿಶೇಷ ಸಂತಸದ ಸುದ್ದಿ—ಏಪ್ರಿಲ್ 1ರಂದು ಆಕಾಶದಲ್ಲಿ ಅಪರೂಪದ ‘ಪಿಂಕ್ ಸೂಪರ್ ಮೂನ್’ ದರ್ಶನವಾಗಲಿದೆ. ಈ ಚಂದ್ರನು ಸಾಮಾನ್ಯ ಚಂದ್ರನಿಗಿಂತ ಸುಮಾರು 30% ಹೆಚ್ಚು ಪ್ರಕಾಶಮಾನವಾಗಿ ಹಾಗೂ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದು, ವಸಂತಕಾಲದ ಹೂವುಗಳ ಅರಳುವಿಕೆಯನ್ನು ಸಂಕೇತಿಸುವ ವಿಶೇಷತೆಯನ್ನು ಹೊಂದಿದೆ. ಈ ಅಪೂರ್ವ ಖಗೋಳ ಘಟನೆ ವೀಕ್ಷಿಸಲು ಕೊಳಲಗಿರಿಯಲ್ಲೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 1ರಂದು ಸಂಜೆ 6:30ರಿಂದ ಕೊಳಲಗಿರಿಯ ಎತ್ತರ ಪ್ರದೇಶವಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎದುರು (ಗೋ ಆಸ್ಪತ್ರೆ ಸಮೀಪ) ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವಿಶೇಷತೆ ಎಂದರೆ, ವಿಶ್ವ ದಾಖಲೆ ಮಾನ್ಯತೆ ಪಡೆದ ಮಣಿಪಾಲದ ಆರ್. ಮನೋಹರ್ ಅವರು ಆವಿಷ್ಕರಿಸಿದ ಶಕ್ತಿಶಾಲಿ ದೂರದರ್ಶಕದ ಮೂಲಕ ಚಂದ್ರನನ್ನು ನೇರವಾಗಿ ವೀಕ್ಷಿಸುವ ಅಪೂರ್ವ ಅವಕಾಶ ಲಭ್ಯವಾಗಲಿದೆ. ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉದ್ಯಮಿ ಪ್ರಕಾಶ್ ಭಂಡಾರಿ ಸಹ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಗಣೇಶ್ ರಾಜ್ ಸರಳಬೆಟ್ಟು ಹಾಗೂ ಜಯ ಶೆಟ್ಟಿ ಬನ್ನಂಜೆ…

Read More