Close Menu
ತುಳುನಾಡ ಸೂರ್ಯತುಳುನಾಡ ಸೂರ್ಯ
    What's Hot

    ಅಕ್ರಮ ಮರಳು ಸಂಗ್ರಹ : ಪೊಲೀಸರಿಂದ ದಾಳಿ…!!

    15 May 2025

    ಮಂಗಳೂರು : ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

    15 May 2025

    ಕೋಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು..!

    15 May 2025
    Facebook WhatsApp Telegram
    Trending
    • ಅಕ್ರಮ ಮರಳು ಸಂಗ್ರಹ : ಪೊಲೀಸರಿಂದ ದಾಳಿ…!!
    • ಮಂಗಳೂರು : ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
    • ಕೋಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು..!
    • ಕಾರ್ಕಳ : ಶಸ್ತ್ರ ಚಿಕಿತ್ಸೆ ವೇಳೆ ಮಹಿಳೆ ಮೃತ್ಯು : ವೈದ್ಯರ ವಿರುದ್ಧ ಸಂಬಂಧಿಕರ ಆಕ್ರೋಶ…!!
    • ಮೇ 16 ರಂದು ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ
    • ಕಡಲು ಕೊರೆತ ಕಾಮಗಾರಿ:ಸ್ಥಳೀಯರ ವಿಶ್ವಾಸ ತೆಗೆದುಕೊಳ್ಳಲು ಸ್ಪೀಕರ್ ಸೂಚನೆ
    • ಎಳನೀರು-ದಿಡುಪೆ ರಸ್ತೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವರಿಂದ ಮುಖ್ಯಮಂತ್ರಿಗಳಿಗೆ ಮನವಿ
    • ಡಾ.ಸದಾಶಿವ ಶೆಟ್ಟಿಯವರಿಂದ ಯಕ್ಷಧ್ರುವ ಪಟ್ಲ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆ
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಕ್ರೀಡೆ
    Facebook YouTube
    ತುಳುನಾಡ ಸೂರ್ಯತುಳುನಾಡ ಸೂರ್ಯ
    Sunday, May 18
    • ಮುಖ ಪುಟ
    • ಸ್ಥಳೀಯ
    • ರಾಜ್ಯ
    • ದೇಶ-ವಿದೇಶ
    • ಮನೋರಂಜನೆ
    • ಅಪರಾಧ
    • ತಂತ್ರಜ್ಞಾನ
    • ಕ್ರೀಡೆ
    • ಇತರೆ
    • ಬ್ರೇಕಿಂಗ್ ನ್ಯೂಸ್ 🔥
    ತುಳುನಾಡ ಸೂರ್ಯತುಳುನಾಡ ಸೂರ್ಯ
    Home » ಬಜಪೆ ಪೊಲೀಸ್ ಠಾಣೆಯ ಎ ಎಸ್ ಐ ರಾಮ ಪೂಜಾರಿ ಅವರಿಗೆ ರಾಷ್ಟ್ರಪತಿ ಸೇವಾ ಪದಕ

    ಬಜಪೆ ಪೊಲೀಸ್ ಠಾಣೆಯ ಎ ಎಸ್ ಐ ರಾಮ ಪೂಜಾರಿ ಅವರಿಗೆ ರಾಷ್ಟ್ರಪತಿ ಸೇವಾ ಪದಕ

    Tulunada SuryaBy Tulunada Surya25 January 2024Updated:11 November 2024 ಕ್ರೀಡೆ No Comments2 Mins Read
    Share
    Facebook WhatsApp
    Share on:

    ಬಜಪೆ: 2024ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿಯವರ ಸೇವಾ ಪದಕವು ಬಜಪೆ ಪೊಲೀಸ್ ಠಾಣೆಯ ಎ ಎಸ್ ಐ ರಾಮ ಪೂಜಾರಿ ಅವರಿಗೆ ಲಭಿಸಿದೆ. ರಾಮ ಪೂಜಾರಿಯವರು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಪದಕ ಬಂದಿದ್ದು, ಇವರು 10 -11- 1993 ರಂದು ಪೊಲೀಸ್ ಇಲಾಖೆಗೆ ಸೇರಿದ್ದು, ಕಾರವಾರ ಪಿ.ಟಿ.ಎಸ್. ನಲ್ಲಿ ಮೂಲ ತರಬೇತಿ ಪಡೆದು, ಮಂಗಳೂರಿನಿಂದ ಕಾರವಾರಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಹೋಗುವಾಗ ಹೊನ್ನಾವರದ ಬಾರ್ಜ್ ನಲ್ಲಿ ನೀರಿನಲ್ಲಿ ಬಸ್ ಮುಳುಗಿ ಅದರಲ್ಲಿ ಸುಮಾರು 25 ಜನರ ಪ್ರಾಣವನ್ನು ಆರು ಜನ ಪೊಲೀಸರ ತಂಡ ರಕ್ಷಣೆ ಮಾಡಿದ ಕೀರ್ತಿ ಇವರದ್ದಾಗಿರುತ್ತದೆ. ಬ್ರಹ್ಮಾವರ, ಸುಳ್ಯ, ಎಸ್.ಪಿ. ವಿಶೇಷ ಪತ್ತೆ ದಳ. ಮೂಡಬಿದ್ರೆ. ಮುಲ್ಕಿ, ಮಂಗಳೂರು ಸಿ.ಸಿ.ಬಿ. ಘಟಕ ದಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪರಾಧ ಪತ್ತೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, 30 ವರ್ಷದ ಸೇವಾ ಅವಧಿಯಲ್ಲಿ 35 ಕೊಲೆ ಪ್ರಕರಣ, ಭೇದಿಸಿ ಪತ್ತೆ ಮಾಡಿರುತ್ತಾರೆ. ಅಲ್ಲದೇ ಕುಖ್ಯಾತ ಭೂಗತ ಪಾತಕಿಗಳು, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಭಯೋತ್ಪಾದಕರನ್ನು ಮಂಗಳೂರು, ಬೆಂಗಳೂರು, ಮುಂಬೈ ಮೂಲದ ಭೂಗತ ಪಾತಕಿಗಳ ಹಾಗೂ ಭೂಗತ ಜಗತ್ತಿನ ಅನೇಕ ಕ್ರಿಮಿನಲ್ ಗಳನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರವಾದಂತಹ ಮೂಡಬಿದ್ರಿ ಜೈನ ಬಸದಿಯ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಾಗೂ ಹಲವಾರು ಘೋರವರಾದ ಪ್ರಕರಣಗಳನ್ನು, ಹಾಗೂ ಹೆಂಗಸರ ಕುತ್ತಿಗೆಯಿಂದ ಸರ ದರೋಡೆ, ಮತ್ತು ಮನೆ ಕಳ್ಳತನ, ಅತ್ಯಾಚಾರ ಪ್ರಕರಣ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ರಾಮ ಪೂಜಾರಿಯವರು ಅತ್ಯುತ್ತಮ ಕೆಚ್ಚೆದೆಯ, ಸಮರ್ಪಕ, ಕ್ರಿಯಾತ್ಮಕ ಸಿಬ್ಬಂದಿಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ವೃತ್ತಿಪರ ಜ್ಞಾನವನ್ನು ಹೊಂದಿರುತ್ತಾರೆ.ಸಾರ್ವಜನಿಕ ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿರುತ್ತಾರೆ.ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿವರೊಂದಿಗೆ ಉತ್ತಮ ಗೌರವದಿಂದ ನಡೆದುಕೊಂಡಿದ್ದು, ಇವರು 2014 ನೇ ಇಸವಿಯಲ್ಲಿ ಮಾನ್ಯ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಯವರ ಗೌರವಯುತ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ. ಇಲಾಖೆಯಲ್ಲಿ ಅನೇಕ ಪ್ರಶಂಸನ ಪತ್ರ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಈ ಹಿಂದೆ ದಯಾನಂದ, ಐ.ಪಿ.ಎಸ್. ಜಯಂತ್ ವಿ. ಶೆಟ್ಟಿ. ಭಾಸ್ಕರ್ ರೈ. ವಿಶ್ವನಾಥ್ ಪಂಡಿತ್, ಗಂಗಿ ರೆಡ್ಡಿ, ಕೋದಂಡ ರಾಮ್. ವೆಲೆಂಟೈನ್ ಡಿ’ಸೋಜ, ಮಹೇಶ್ ಕುಮಾರ್,ಪ್ರಕಾಶ್, ಸುನಿಲ್ ನಾಯಕ್, ಪ್ರಮೋದ್ ಕುಮಾರ್. ರಾಜೇಂದ್ರ ಡಿ.ಎಸ್., ಶಾಂತರಾಮ್, ಶ್ಯಾಮ್ ಸುಂದರ್. ಕೆ.ಆರ್.ನಾಯಕ್. ಸಂದೇಶ್ ಇವರೊಂದಿಗೆ ಕೆಲಸ ಮಾಡಿದ ಉತ್ತಮ ಅನುಭವ ಹೊಂದಿರುತ್ತಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಐ.ಪಿ.ಎಸ್ , ಡಿ.ಸಿ.ಪಿ. ಸಿದ್ದಾರ್ಥ ಗೋಯಲ್, (ಕಾ. ಮತ್ತು ಸು.), ದಿನೇಶ್ ಕುಮಾರ್, ಅಪರಾಧ ಮತ್ತು ಸಂಚಾರ, ಹಾಗೂ ಮನೋಜ್ ಕುಮಾರ್, ಎ.ಸಿ.ಪಿ., ಉತ್ತರ ಉಪ ವಿಭಾಗ, ಪಣಂಬೂರು ಮತ್ತು ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಇವರ ಅನುಮೋದನೆಯಿಂದ ಇವರು ರಾಷ್ಟ್ರಪತಿಯವರ ಶ್ಲಾಘನಿಯ ಪದಕ ಪಡೆದಿರುತ್ತಾರೆ.

    Share on:

    Keep Reading

    ಡಾ.ಸದಾಶಿವ ಶೆಟ್ಟಿಯವರಿಂದ ಯಕ್ಷಧ್ರುವ ಪಟ್ಲ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆ

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ನಾಡು ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಹಿರಿದು: ಗುರ್ಮೆ ಸುರೇಶ್ ಶೆಟ್ಟಿ

    ತೌಲೊ ಜಿಯನ್ಸೂವಿನಲ್ಲಿ ಕು.ಮನ್ವಿತ ಮನೋಜ್ ಕುಮಾರ್ ಗೆ ಚಿನ್ನದ ಪದಕ

    Editors Picks
    Latest Posts
    Facebook YouTube

    News

    • ಅಪರಾಧ
    • ಇತರೆ
    • ಕ್ರೀಡೆ
    • ತಂತ್ರಜ್ಞಾನ
    • ದೇಶ-ವಿದೇಶ

    NEWS

    • ಬ್ರೇಕಿಂಗ್ ನ್ಯೂಸ್
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಮನೋರಂಜನೆ
    • ರಾಜ್ಯ

    TAGS

    • Featured
    • Top News

    Quick Links

    • Home
    • About
    • Contact Us
    • Privacy Policy
    • Terms & Conditions

    ©2024 Tulunada Surya. Developed by DMP

    Type above and press Enter to search. Press Esc to cancel.