ರಾಷ್ಟ್ರೀಯ ವೈದ್ಯರ ದಿನಾಚರಣೆಯ ರಾಷ್ಟ್ರ ಪುರಸ್ಕಾರ ಡಾ ಕುಲಾಲ್ ಅವರಿಗೆ
ನೂರು ವರ್ಷಗಳ ಸಂಭ್ರಮದ ಹೊಸ್ತಿಲಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘ ತನ್ನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಮುದಾಯ ಸೇವಾ ಪುರಸ್ಕಾರಕ್ಕೆ
ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ಆಯ್ಕೆಮಾಡಿದ್ದು
ಅವರ ಒಡನಾಟದಲ್ಲಿ ಇರುವ ಕರಾವಳಿ ಮಲೆನಾಡು ಹಾಗು ರಾಜ್ಯದ ಎಲ್ಲಾ ವರ್ಗಗಳ ಹಿತೈಷಿಗಳಿಗೆ ಹೆಮ್ಮೆಯ ವಿಚಾರ
ಸಮಾಜ ಮುಖಿ ವೈದ್ಯಕೀಯ ಸೇವೆ, ವೈದ್ಯಕೀಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಸಿಡಿಲಬ್ಬರದ ಸಂಘಟಕ, ನೇರ ಮಿಂಚಿನ ಮಾತು, ದಿಟ್ಟ ಸ್ಪಷ್ಟ ಬರಹ, ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಟ ಮಾಡಬಲ್ಲ ವೈದ್ಯ ಎಂಬ ಖ್ಯಾತಿಯ ಡಾ ಕುಲಾಲ್, ಐಎಂಎ, ಕುಟುಂಬ ವೈದ್ಯರ ಸಂಘ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡಕಟ್ಟೆ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ವೈದ್ಯ ಬರಹಗಾರರ ಬಳಗ, ಯುವ ವೇದಿಕೆ ಸಹಿತ ನೂರಾರು ಸಂಘಟನೆಗಳ ಜೊತೆ ಸದ್ದಿಲ್ಲದೇ ದುಡಿಯುತ್ತಾ, ತನು ಮನ ಧನಗಳ ಸಹಕಾರ ನೀಡುತ್ತಾ, ಮುಗುಳ್ನಗುತ್ತಾ ಸದ್ದಿಲ್ಲದೇ ಸುದ್ದಿಯಾದವರು. ನಾಡಿನ ಶ್ರೇಷ್ಠ ಪುರಸ್ಕಾರ ವಾದ ದೇವರಾಜ ಅರಸು ಪುರಸ್ಕಾರ, ರಾಜ್ಯ
ಐಎಂಎ ರಾಜ್ಯ ಡಾ ಬಿ ಸಿ ರಾಯ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಹೊಯ್ಸಳ ಪುರಸ್ಕಾರ, ಅಂತರಾಷ್ಟ್ರೀಯ ಆರ್ಯಭಟ ಪುರಸ್ಕಾರ, ಮಂಗಳೂರು ಐಎಂಎ ಯಿಂದ ಜೀವ ಮಾನ ಸಾಧನ ಪುರಸ್ಕಾರ ಸಹಿತ ನೂರಾರು ಗೌರವ ಪಡೆದಿರುವ ಇವರು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಡಾ ಬಿ ಸಿ ರಾಯ್ ರಾಷ್ಟ್ರ ಪುರಸ್ಕಾರವನ್ನ ಹೊಸದೆಹಲಿಯಲ್ಲಿ ಜುಲೈ ೧೩ ರಂದು ಕೇಂದ್ರಸರಕಾರದ ಪ್ರತಿನಿಧಿ ಯವರ ಉಪಸ್ಥಿತಿ ಯಲ್ಲಿ ರಾಷ್ಟ್ರೀಯ ಐಎಂಎ ನಾಯಕರ ಕೈಯಿಂದ ಸ್ವೀಕರಿಸಲಿದ್ದಾರೆ ಎಂಬುದೇ ಅವರ ಹಿತೈಷಿ ಮಿತ್ರರುಗಳಿಗೆ ಹೆಮ್ಮೆ. ವೈದ್ಯಕೀಯ ವೃತ್ತಿ ಯಲ್ಲಿ ಜೀವ ಮಾನದ ಸಾಧನೆಗೆ ಪಡೆಯುವ ಈ ಪುರಸ್ಕಾರಕ್ಕೆ ಭಾಜನಾಗುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಡಾ ಕುಲಾಲ್ ಅತಿ ಕಿರಿಯ ವಯಸ್ಸಿನ ಸಾಧಕರು.
Trending
- ಬಂಟ ಕ್ರೀಡೋತ್ಸವದಿಂದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ: ಡಾ. ಶಿವಶರಣ್ ಶೆಟ್ಟಿ
- ಕರ್ತವ್ಯ ಲೋಪ, ನಿರ್ಲಕ್ಷ್ಯ ಆರೋಪ ಬಂಟ್ವಾಳ ಗ್ರಾಮಾಂತರ ಠಾಣೆಯ ಕಾನ್ಸ್ಟೇಬಲ್ ಅಮಾನತು
- ಜನರ ಕಾಲಬುಡಕ್ಕೆ ಸರ್ಕಾರಿ ಸೇವೆ ತಲುಪಬೇಕು ಮಧ್ಯವರ್ತಿಗಳ ಹಾವಳಿ ತಪ್ಪಿಸುವುದೇ ಪ್ರಜಾಸೇವೆ ಆಂದೋಲನದ ಗುರಿ: ಯು.ಟಿ. ಖಾದರ್
- ಅಮ್ಮುಂಜೆ ಸೆಕ್ರೇಡ್ ಹಾರ್ಟ್ ಶಾಲೆಯಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ
- ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಮಂಗಳೂರಿನಲ್ಲಿ ಸಂಚಾರ ಬದಲಾವಣೆ, ಮೊಸರುಕುಡಿಕೆ ಮೆರವಣಿಗೆ ಹಿನ್ನೆಲೆ; ಸೆ.5ರ ಸಂಜೆ 5ರಿಂದ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಸಾಧ್ಯತೆ
- ಮಹಿಳೆಯ ರಕ್ಷಣೆಗೆ ಧಾವಿಸಿದ ಬೀದಿ ನಾಯಿಗಳು! ಲೈಂಗಿಕ ದೌರ್ಜನ್ಯ ಯತ್ನಕ್ಕೆ ತಡೆ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ಆರೋಪಿ ಬಂಧನ
- ಬಿಪಿನ್ ರಾವತ್ ಸ್ವ ಸಹಾಯ ಸಂಘ ಹಾವಂಜೆ ಇದರ 5ನೇ ವರ್ಷದ ಕಾರ್ಯಕ್ರಮ
- ಮೊಟ್ಟೆಯಲ್ಲಿ ಹುಳ ಪತ್ತೆ ದೂರು: ಫಳ್ನೀರ್ನ ಬ್ಲಿಂಕಿಟ್ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

