ತುಳುನಾಡು ರಕ್ಷಣಾ ವೇದಿಕೆ ಸಂಘಟನೆಗೆ ಹಲವಾರು ಕನ್ನಡಪರ ಸಂಘಟನೆಗಳಿಂದ ಸೇರ್ಪಡೆ
ದಿನಾಂಕ 17.3 20 24ರಂದು ಮಧ್ಯಾಹ್ನ 3:00 ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಗೆ ಕನ್ನಡ ಪರ ಸಂಘಟನೆ ಮುಖಂಡರುಗಳಾದ ಕುಶಲ್ ಅಮೀನ್ ಜಯ ಪೂಜಾರಿ ರೋಷನ್ ಬಂಗೇರ , ಸುಲತಾ , ಲಲಿತಾ, ರವೀಜಾ, ಉಮಾವತಿ, ಸವಿತಾ ಮತ್ತಿತರ ಹಲವಾರು ಪ್ರಮುಖರು ಸಾರ್ವಜನಿಕರ ಮೇಲೆ ಬಾಷೆ ಹೇರಿಕೆ ಮತ್ತು ಕನ್ನಡ ಬೋರ್ಡ್ ಅಳವಡಿಸಲು ವ್ಯಾಪಾರಸ್ಥರ ಮೇಲೆ ಬಲವಂತದ ಒತ್ತಡ ಹೇರುತ್ತಿರುವ ಕ್ರಮವನ್ನು ವಿರೋಧಿಸಿ ತುಳುನಾಡು ರಕ್ಷಣಾ ವೇದಿಕೆಗೆ ಸೇರ್ಪಡೆ ಗೊಂಡರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಸಂಘಟನೆಯ ಸಾಲು ಮತ್ತು ಹೂವನ್ನು ನೀಡಿ ಸಂಘಟನೆಗೆ ಬರಮಾಡಿಕೊಂಡರು.
![](https://tulunadasurya.com/wp-content/uploads/2024/03/IMG-20240317-WA0114-1024x768.jpg)
![](https://tulunadasurya.com/wp-content/uploads/2024/03/IMG-20240317-WA0111-1024x768.jpg)
![](https://tulunadasurya.com/wp-content/uploads/2024/03/IMG-20240317-WA0110-1024x768.jpg)
![](https://tulunadasurya.com/wp-content/uploads/2024/03/IMG-20240317-WA0108-1024x768.jpg)
![](https://tulunadasurya.com/wp-content/uploads/2024/03/IMG-20240317-WA0109-1024x768.jpg)
![](https://tulunadasurya.com/wp-content/uploads/2024/03/IMG-20240317-WA0106-1-1024x768.jpg)
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿ’ಸೋಜ , ಉಡುಪಿ ಜಿಲ್ಲಾ ಅಧ್ಯಕ್ಷರಾದ ಕೃಷ್ಣಕುಮಾರ್ , ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಮಹಿಳಾ ಅಧ್ಯಕ್ಷರಾದ ಶೋಭಾ ಪಂಗಳಾ, ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ , ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಷ್ ಸುಧನ್ , ಸಾಮಾಜಿಕ ಜಾಲತಾಣ ಸಂಚಾಲಕರಾದ ರೋಷನ್ , ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಕಾಪು ಘಟಕ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಬ್ರಹ್ಮವರ ಘಟಕ ಅಧ್ಯಕ್ಷರಾದ ಸತೀಶ್ ಪೂಜಾರಿ, ಮಹಿಳಾ ಉಪಾಧ್ಯಕ್ಷರಾದ ಶಾಂಭವಿ, ಸಾಂಸ್ಕೃತಿಕ ಕಾರ್ಯದರ್ಶಿ, ವಿಜಯಲಕ್ಷ್ಮಿ ಸಂಘಟನೆ ಮುಖಂಡರುಗಳಾದ ಪ್ರೀತಂ , ಉಷಾ ಹೆಜಮಾಡಿ, ಸುನಂದ ಕೋಟ್ಯಾನ್, ಸುಲತಾ, ಸಂಗೀತ ಶೆಟ್ಟಿ, ಶ್ರೇಹಾ ಉಪಸ್ಥಿತರಿದ್ದರು.
![](https://tulunadasurya.com/wp-content/uploads/2024/03/IMG-20240317-WA0113-1024x768.jpg)