
ಉಡುಪಿ:ದಿನಾಂಕ 01-06-2025 ರಂದು ಉಡುಪಿ ಅಕ್ಷಯ ಟವರ್ ನಲ್ಲಿ ಹಿರಿಯ ಸಾಹಿತಿ ನಾಟಕಕಾರ ಚಲನಚಿತ್ರ ನಿರ್ದೇಶಕ ನಿರ್ಮಾಪಕ ನಟ ಸುಧಾಕರ್ ಬನ್ನಂಜೆ ಯವರಿಗೆ ಉಡುಪಿ ಜಿಲ್ಲಾ ಘಟಕ ವತಿಯಿಂದ
ಸನ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಮಂಡಳಿ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರು ಸುಧಾಕರ್ ಬನ್ನಂಜೆ ರವರ ತುಳು ಭಾಷೆ,ಸಾಹಿತ್ಯ, ನಾಟಕ, ಚಲನಚಿತ್ರ ನೀಡಿದ ಕೊಡುಗೆ ಅಪಾರ ಎಂದರು. ಗಂಟ್ ಕಲ್ವೆರ್ ತುಳು ಚಲನಚಿತ್ರ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ವೀಕ್ಷಿಸಿ ಪ್ರೋತ್ಸಾಹಿಸಲು ವಿನಂತಿಸಿದರು. ಸನ್ಮಾನ ಸ್ವೀಕರಿಸಿ ಸುಧಾಕರ್ ಬನ್ನಂಜೆ ಮಾತನಾಡುತ್ತಾ ತುಳು ಪಂಚ ದ್ರಾವಿಡ ಭಾಷೆಯಲ್ಲಿ ಹಿರಿಯ ಭಾಷೆಯಾಗಿದ್ದು ತಮಿಳು ಭಾಷೆಯು ತುಳು ಭಾಷೆಯಿಂದ ಉಗಮವಾದದ್ದು ಎಂದರು . ತುಳು ಭಾಷೆ ಸಾಹಿತ್ಯ ಮತ್ತು ತುಳುನಾಡಿನ ಸಾಮಾಜಿಕ ಅಭಿವೃದ್ಧಿಗಾಗಿ ಹೋರಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವನ್ನು ಕೊಂಡಾಡಿದರು.

ಸಭೆಯ ಅಧ್ಯಕ್ಷತೆಯನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ , ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಅಧ್ಯಕ್ಷೆ ಸುನಂದ ಕೋಟ್ಯಾನ್
ಉಡುಪಿ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಬ್ರಹ್ಮಾವರ, ಹಿರಿಯ ಉಪಾಧ್ಯಕ್ಷ ಜಯರಾಮ್ ಪಾತ್ರಿ , ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸುನಿಲ್ ಫೆರ್ನಾಂಡಿಸ್, ಕಾಪು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ ,
ಉಡುಪಿ ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷ ಕುಶಲ್ ಅಮೀನ್ ಬೇಂಗ್ರೆ, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ , ರೋಷನ್ ಬಂಗೇರ , ಹರಿಣಾಕ್ಷಿ ಉಚ್ಚಿಲ ,ಭಾಸ್ಕರ್ ಉಪ್ಪುರು , ಶ್ರೀನಿಧಿ , ಮಮತಾ , ರಂಜಿತಾ ಶೆಟ್ಟಿ , ಸವಿತಾ ಶೆಟ್ಟಿ , ಸಂಗೀತ , ಧನವತಿ , ಅಶ್ವಿನಿ, ಮೈನಾ ಶೆಟ್ಟಿ , ಶಶಿಕಲ ಶೆಟ್ಟಿ , ರಜನಿ ರಾಜೀವಿ ಶಿರ್ವ , ಶಕುಂತಲ ಶೆಟ್ಟಿ ಮತ್ತಿತರರು ಉಪಸಿತರಿದ್ದರು.
ಹೆಸರು: ಸುಧಾಕರ ಬನ್ನಂಜೆ
ವೃತ್ತಿ: ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಸಾಹಿತಿ ,ನಟ, ನಾಟಕಕಾರ,
,ಪತ್ರಕರ್ತ
ವಿಳಾಸ: ಸುಧಾಕರ ಬನ್ನಂಜೆ3ನೇ ಮುಖ್ಯ ರಸ್ತೆ
ಸಿ ಬ್ಲಾಕ್
ಗಾಯತ್ರಿ ನಗರ
ಬೆಂಗಳೂರು 560021
ತಾಯಿ: ಸುಶೀಲಾ ಬನ್ನಂಜೆ
ತಂದೆ: ಮೂಲ್ಕಿ ತಿರುಮಲೆಗುತ್ತು ಅಚ್ಚಣ್ಣ ಭಂಡಾರಿ
ಹೆಂಡತಿ: ಮಮತಾ ಎಸ್ ಬನ್ನಂಜೆ
ಮಕ್ಕಳು; ಪ್ರಾರ್ಥನ್ ಎಸ್ ಬನ್ನಂಜೆ
ಪ್ರೇರಣ್ ಎಸ್ ಬನ್ನಂಜೆ
ನಿರ್ದೇಶನ ಮಾಡಿದ ಚಿತ್ರ ಗಳು: ಹೀಗೊಂದು ಪ್ರೇಮಕತೆ ( 1988 – ನಾಯಕ ನಟ ,ನಿರ್ಮಾಪಕ ,ಸಾಹಿತಿ)
ಧರ್ಮಯೋಧರು ( 2003- ನಾಯಕ ನಟ,ಸಾಹಿತಿ)
ದೇವೆರ್ ( ತುಳು.2010- ಪೋಷಕ ನಟ,ಸಾಹಿತಿ)
ನಾನು ಹೇಮಂತ್ ಅವಳು ಸೇವಂತಿ ( 2014- ನಿರ್ಮಾಪಕ, ಸಾಹಿತಿ, ಪೋಷಕ ನಟ)
ಪ್ರೇರಣೆ ( 2015- ನಿರ್ಮಾಪಕ, ಸಾಹಿತಿ ,ಪೋಷಕ ನಟ)
ರಣರಣಕ ( 2017- ಸಾಹಿತಿ.ನಟ )
ನಟಿಸಿದ ಇತರ ಚಿತ್ರ ಗಳು: ಇಂದ್ರ ಧನುಷ್ (2000)
ಬದಿ (2011) ಪೊನ್ನಮ್ಮ ( 2013) ಶಾಲೆ ( 2013) ಯಕ್ಷ( 2013)ಒಲವಿನ ಪಯಣ (2024),ಶಾನುಭೋಗರ ಮಗಳು ( 2014) ಅನಾಸಿನ್ ( 2015) ಪಾಠಶಾಲೆ ( 2015)
ಸಂಭಾಷಣೆ ಹಾಡು ಬರೆದ ಚಿತ್ರ ಗಳು: ತುಡರ್ ( ತುಳು. 1998 )
ಐದೊಂದ್ಲ ಐದು ( 2010)
ಬದಿ( ತುಳು. 2011)
ಪೊನ್ನಮ್ಮ( ಕೊಡವ.2012)
ಕೋಟಿ ಚೆನ್ನಯ ( ತುಳು- 2012)
ಕಾಜಾರ್ ( ಕೊಂಕಣಿ -2013)
ಶಾಲೆ( 2014)
ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ( ತುಳು- 2016)
ಜನ್ಮನಕ್ಷತ್ರ( 2017)
ಎಂಕ್ಲ್ ಗ್ ಬದ್ಕೆರೆ ಬುಡ್ಲೆ (2017)
ಧಾರಾವಾಹಿಗಳು:
ದೂರದರ್ಶನ ದಲ್ಲಿ “ನಾಗರೀಕ”,ನೀ ಮುಡಿದ ಮಲ್ಲಿಗೆ,ಭಾವನಾ ,ಗುರುದೇವೋಭವ ನಿರ್ದೇಶನ
ಈ ಟಿವಿ “ಮನಸು” ಕಿರುಚಿತ್ರ ನಿರ್ದೇಶನ
ಉದಯ ಟಿವಿ ಮೇಕಿಂಗ್ ಆಫ್ ಕೇರಾಫ್ ಪುಟ್ಪಾತ್ ನಿರ್ದೆಶನ
ಝೀ ಟಿವಿ. ಮದುವೆ ಧಾರಾವಾಹಿ ನಿರ್ದೇಶನ
ಸುವರ್ಣ ಟಿವಿ .ಪುಣಾಣಿ ಪವರ್,ಗೊತ್ತಾನಗ ಪೊರ್ತಾಂಡ್ ಧಾರಾವಾಹಿ ನಿರ್ದೇಶನ
ಕಸ್ತೂರಿ ಟಿವಿ.ಕಂಜುಸ್ ಕಮಂಗಿರಾಯ ಧಾರಾವಾಹಿ ನಿರ್ದೇಶನ
ಪ್ರಸಕ್ತ : ಗಂಟ್ ಕಲ್ವೆರ್ ತುಳು ಚಿತ್ರ ತೆರೆ ಕಾಣಲು ಸಿದ್ದವಾಗಿದೆ.
ಇತರ:
ನಾಟಕ ರಚನೆ
64 – ತುಳುನಾಟಕಗಳು:-
ಭೂಲೋಕೊಡು ನಾರದೆ,ತುಳಸಿ.
ದಲ್ಲಾಳಿ ಶೀನಣ್ಣೆ,ನಾಗಬನ
ಮಿತ್ತ್ ದೆರ್ಪಿ,ಅಪ್ಪೆ ದಾಂತಿ ಜೋಕ್ಲು
ಕೆಂಪು ನೆತ್ತೆರ್,ಕಿಲಕಿಲ ಕೃಷ್ಣೆ
ಬದ್ಕುನ ಸಾದಿ.ಬಾಲೆ ಸರಪೆ,ಪೊಸ ಸಂಕ,ಬೀಡಿದ ಬ್ರಾಂಚ್,ಕೊದಿನ ನೆತ್ತೆರ್, ಎನ್ನ ಮೆಗ್ಯೆ
ಬಂಗಾರ್ದ ಬಿಸತ್ತಿ ಬೊಲ್ಲ ,ಒಂಜಪ್ಪೆ ಜೋಕುಲು,ಅಜ್ಜಿನ ಪುಲ್ಲಿ,ಕಾಣಿಕೆ ಡಬ್ಬ,ಪಿಂಗಾರ,ನ್ಯಾಷನಲ್ ಹೈವೇ ಪದಿನೇಲ್,ಆಟದ ಅಣ್ಣಪ್ಪೆ,ನಂದಾದೀಪ, ಕಿತ್ತೂರ್ದ ಚೆನ್ನಮ್ಮ,ಕೊದಿನ ನೆತ್ತೆರ್,ತುದೆಬದಿ,ಅಣ್ಣಯ್ಯ ಮಾಸ್ಟ್ರು ಕರಿಮಣಿಸರ,ಕಾಲಚಕ್ರ,ತುಳು ರಾನಿ ಅಬ್ಬಕ್ಕ,ಮಾಮು ಮಗಲ್ ಮಾಲತಿ
ಯಶೋದಾ,ಬೆರಿಬುಡಯೆ ಕೋರ್ದಟ್ಟ,ಮಾಮಿ,ತಿರ್ಮಲೆ ಗುತ್ತು,ಕೂಡಿನ ಇಲ್ಲ್,,ನೆರೆಲ್ ದಾಂತಿ ಮರ,ಕಂಬುಲ, ಸತ್ಯದ ಸಾದಿ,ಶೇಕುನ ಸೋಕು,ಮಾಜಂದಿ ಕುಂಕುಮ, ಶಿವಭಕ್ತೆ ಕಣ್ಣಪ್ಪೆ,ಕಲ್ಜಿಗದ ಸಾವಿತ್ರಿ, ಪುಣ್ಣಿಮೆ ಚಂದ್ರೆ, ದೇವೆರ್ ಓಲು ಉಲ್ಲೆರ್,ಮೋಕೆದ ಮರ್ಲ್ ,ಶಾಂತಿ, ಕೋಲ,ಗುರ್ಕಾರೆ,ಎಬಿಸಿ ಬ್ಯಾಂಕ್, ಒಪ್ಪ ಪುಟಿನಾಲ್,ತಪ್ಪು ಕಾಣಿಕೆ, ಕಾಲ ಕರಿಂಡ್ ,ತಾಳ ತತ್ತ್ಂಡ್,ಎಣ್ಣೆದಾಂತಿ ತುಡರ್,ಪಾಲ್,ಒಂತೆ ಉಂತುಲೆ,ಉಡಲ್ ಉರಿಂಡ್,ಜಾಲ್,ಅಮ್ಮೆರೆ ಗಂಟ್,ಎನ್ನ ತಮ್ಮಲೆ ಕಡಲಪ್ಪೆ ಬಾಲೆಲು,ಎಂಕ್ ಮದಿಮೆ ಆವೊಡು.
28 - ಕನ್ನಡ ನಾಟಕ:-
ಪ್ರಕೃತಿ, ಕಾಮರೂಪಿ, ಅಮರ್ ಅಶೋಕ್, ಮಾವನ ಮಗಳು, ಯಾರು ಹೊಣೆ,ಭಾವನಾ,ಪೋಲಿಸ್ ಪಾಪಮ್ಮ,ಸಿರಿದೇವಿ ,ಮದುಮಗ,ಕಲಿ ಭಗತ್ ಸಿಂಗ್,ಗೌಡರ ಅಳಿಯ,ಬಿರುಕು ಗೋಡೆ ನಾನೇನು,ಅಧ್ಯಾಹಾರ,ಒಂದು ಹೆಣ್ಣಿಗೆ ಒಂದೇ ಗಂಡೇ,ಚಂಚಲೆ,ವಸಂತಮಾಸ,ಅಪ್ಪನ ಗಂಟು,ಸಂಸಾರ,ಚಿತ್ತಾರ, ಧರ್ಮ ಸಂಗ್ರಾಮ,ನತದೃಷ್ಟ ಕರ್ಣ,,ಉಲ್ಲಾಳ ರಾಣಿ ಅಬ್ಬಕ್ಕ,,ಬೇಡರ ಕಣ್ಣಪ್ಪ,,ನ್ಯಾಯ ತೀರ್ಮಾನ,ನಾಗರಪಂಚಮಿ, ಶುಭಮಿಲನ,ಕಾನನದ ಮಲ್ಲಿಗೆ. ಈ ಎಲ್ಲಾ ನಾಟಕಗಳ ನಿರ್ದೇಶನ ಸಾವಿರಕ್ಕೂ ಮಿಕ್ಕಿ ಪ್ರಯೋಗ ಮತ್ತು ನಟನೆ.
ಯಕ್ಷಗಾನ ಕಲಾವಿದ.ಹಲವಾರು ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಆಗಿ ನೂರಾರು ಪ್ರದರ್ಶನ.
ಪತ್ರಿಕಾ ರಂಗ:- ಮುಂಗಾರು ದೈನಿಕದಲ್ಲಿ ಪುರವಣಿ ಸಂಪಾದಕ (1984)
ಬಯಲು( ಸಾಪ್ತಾಹಿಕ. ಸಂಪಾದಕ- 1982)
ಅಭಯವಾಣಿ ( ಸಾಪ್ತಾಹಿಕ .ಸಂಪಾದಕ- 1978)
ಜನವಾಣಿ (ಸಂಜೆ ಪತ್ರಿಕೆ ಸಹ ಸಂಪಾದಕ – 1978)
ಈ ವಾರ ( ವರದಿಗಾರ- 1988)
