ಶಿರ್ವ ಕಳತ್ತೂರು ಸಪ್ತಋಷಿ ಜ್ಞಾನ ಮಂಟಪದಲ್ಲಿ
ಚತುರ್ಥ ವಾರ್ಷಿಕ ಮಹಾಶಿವರಾತ್ರಿಯ ಶಿವ ಸಂಕೀರ್ತನೆ ಯು ಉತ್ತಮ ರೀತಿಯಲ್ಲಿ ದಿನಾಂಕ 26-032025 ರಂದು ನಡೆಯಿತು.
ತುಳು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಯೋಗಿಶ್ ಶೆಟ್ಟಿ ಜೆಪ್ಪು ದೀಪ ಬೆಳಗಿ ಚಾಲನೆ ನೀಡಿದರು.

ಗಣ್ಯರಾದ ಶ್ರೀ ರಾಘವೇಂದ್ರ ಭಟ್ ಕಳತ್ತೂರು, ಉದ್ಯಮಿ ಮಧು ಆಚಾರ್ಯ ಮೂಲ್ಕಿ, ಕುಣಿತ ಭಜನ ಸಂಯೋಜಕ ಶ್ರೀ ಶ್ರೀಧರ್ ಪಡುಬಿದ್ರಿ ದೀಪ ಬೆಳಗಲು ಜೊತೆಯಾದರು. ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ ಉಪಸ್ಥಿತರಿದ್ದರು.


ಮಾಜಿ ಸಂಸದ ವಿನಯಕುಮಾರ್ ಸೊರಕೆ, ವೇದ ಮೂರ್ತಿ ಶ್ರೀ ಕಳತ್ತೂರು ಶ್ರೀ ಉದಯ ತಂತ್ರಿಗಳು ಮಹಾಪೂಜೆ ನೇರವೆರಿಸಿದರು.


ಯುವ ಉದ್ಯಮಿ ಶ್ರೀ ಪ್ರಶಾಂತ್ ಕಾಮತ್ ಬೋಳ ಹಾಗೂ ಶಿರ್ವ ವ್ಯವಸಾಯ ಬ್ಯಾಂಕ್ ಅದ್ಯಕ್ಷರು ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು ಅನುಗ್ರಹ ಪ್ರಸಾದ ಪಡೆದರು.ಹಾಗೂ ಹಲವಾರು ಗಣ್ಯರು ಮತ್ತು ಭಕ್ತರು ಕೀರ್ತನ ಸೇವೆಯಲ್ಲಿ ಭಾಗಿಯಾದರು.
