ಮೂಡುಬಿದಿರೆ: ಶ್ರುತ ಪಂಚಮಿ ಜೈನರ ಪವಿತ್ರ ಹಬ್ಬವಾಗಿದೆ. ಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನವಾಗಿದೆ. ಆಚಾರ್ಯ ಧರಸೇನ ರು ತನ್ನ ಶಿಷ್ಯರಾದ ಭೂತಬಲಿ ಮತ್ತು ಪುಷ್ಪದಂತ ರಿoದ ಪ್ರಥಮ ಬಾರಿ ಗುಜರಾತ್ ಬಳಿ ಯ ಗಿರಿ ನಾರ್ ಸಿದ್ದ ಕ್ಷೇತ್ರ ದಲ್ಲಿ ಲಿಪಿ ಬದ್ದ ಗೊಳಿಸಿ ಅಂಕ ಲೇಶ್ವರ ದಲ್ಲಿ ಪೂರ್ತಿ ಗೊಳಿಸಿ ಪೂಜಿಸಿದ ದಂತಹ ಪವಿತ್ರ ದಿನ,ಷಟ್ ಖ oಡ ಆಗಮ ಪೂರ್ಣಗೊo ಡು ಅದರ ಏಕೈಕ ಟೀಕೆ ಕನ್ನಡ ದ ಪ್ರಸಿದ್ದ ಸಿದ್ದಾoಥ ಗ್ರಂಥ ಧವಲ ತ್ರಯ ಗ್ರಂಥ ರಾಣಿ ರವಿ ದೇವಿ ಯಕ್ಕ ಶುಭ ಚಂದ್ರ ಆಚಾರ್ಯ ರಿಗೆ ಶಾಸ್ತ್ರ ದಾನ ನೀಡಿದ
ದಿನವೂ ಹೌದು ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ನುಡಿದರು.
ಮೂಡುಬಿದಿರೆ ಜೈನಮಠದ ಭಟ್ಟಾರಕ ಸ್ವಾಮೀಜಿಯವರ ಪಾವನ ಉಪಸ್ಥಿತಿ ನೇತೃತ್ವದಲ್ಲಿ ಶನಿವಾರ ನಡೆದ ಶ್ರುತ ಪಂಚಮಿ ಪ್ರಯುಕ್ತ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿದರು.

ಶ್ರೀಮತಿ ವಾಣಿ ಅಭಯ ಕುಮಾರ್ ರಚಿಸಿದ ಜೈನ ಶೋಭಾನೆ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಇಪ್ಪತ್ತ ನಾಲ್ಕು ತೀರ್ಥಂಕರರ ನೆನಪಿಸುವಂತೆ
ಇಪ್ಪತ್ತ ನಾಲ್ಕು
ಬೆಳ್ಳಿಕಟ್ಟದಿಂದ ಹಾಕಿದ ತಾಳೆ ಬೀಜ ಹಾಗೂ ತಾಳೆ ಬೀಜದಲ್ಲಿ ಮಾಡಿದ ಲೇಖನಿಯನ್ನು ಇತಿಹಾಸ ತಜ್ಞ ಡಾ.ಎಸ್ ಎ ಕೃಷ್ಣಯ್ಯ ಅವರು ಭಟ್ಟಾರಕ ಸ್ವಾಮೀಜಿ ಯವರಿಗೆ ನೀಡಿದರು. ಸ್ವಾಮೀಜಿ ಶ್ರೀ ಯುತ ರಿಗೆ, ಶ್ರೀಮತಿ ವಾಣಿ ಯವರಿಗೆ ಶಾಲು ಸ್ಮರಣಿಕೆ ನೀಡಿ ಆಶೀರ್ವಾದ ಮಾಡಿದರು
ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಪ್ರಮುಖರಾದ ಬಾಹುಬಲಿ ಪ್ರಸಾದ್, ಉಷಾ ಜಯವೀರ್, ವೃಂದಾ ರಾಜೇಂದ್ರ, ಶ್ವೇತಾ ಜೈನ್, ಬೆಟ್ಕೇರಿ ವೀಣಾ ರಘುಚಂದ್ರ, ನಿರಂಜನ್ ಅಲಂಗಾರು, ಸನತ್ ಕುಮಾರ್, ಶಕುಂತಳಾ, ಡಾ.ಎಸ್.ಪಿ ವಿದ್ಯಾ ಕುಮಾರ್, ಶ್ರೀ ಮತಿ ದಿವ್ಯಾ, ಮಠದ ವ್ಯವಸ್ಥಾಪಕ ಸಂಜಯoತ ಕುಮಾರ್ ಶೆಟ್ಟಿ ಮತ್ತಿತರರಿದ್ದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವಾನ್ 1008 ಶ್ರೀಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ, ಪೂಜೆ, ನವ ದೇವತಾ ಪೂಜೆ, ಗಣಧರ ಪೂಜೆ, ಸರಸ್ವತಿ ಪೂಜೆ, ಶಾಸ್ತçದಾನ ನಡೆಯಿತು. ಧವಳತ್ರಯ ಜೈನಕಾಶಿ ಟ್ರಸ್ಟ್, ಜೈನಮಠ ಟ್ರಸ್ಟ್ ಜಂಟಿ ಸಹಯೋಗ ದಲ್ಲಿ ಅಪರಾಹ್ನ ಎರಡ ರಿಂದ ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
