ದಿನಾಂಕ ಜೂನ್ 18-2025ರಂದು ಪ್ರವೀಣ ಎಂಬ 29 ವರ್ಷ ಪ್ರಾಯದ ಯುವಕನಿಗೆ ಬೆಳಿಗ್ಗೆ ಏಳು ಗಂಟೆಯಿಂದ ಫ್ಯಾಕ್ಟರಿಗೆ ಹೋದಾಗ ಅಲ್ಲಿನ
ಹೆಚ್ ಎ ಆರ್ ಚಂದ್ರಶೇಖರ್ ಎಂಬವರು ಪ್ರವೀಣನನ್ನು ಗೇಟಿನ ಒಳಗೆ ಬಾರದಂತೆ ತಡೆದು ಏರುದನಿಯಿಂದ ಬೆದರಿಸಿ ಬೈಕ್ ಅನ್ನು ತಡೆದು ನಿಲ್ಲಿಸಿ ಫ್ಯಾಕ್ಟರಿ ಮಾಲೀಕ ಸಂಪತ್ ಶೆಟ್ಟಿ ಬರುವವರೆಗೆ ನಿನ್ನನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ ಎಂದು ಗದರಿಸಿ ಅವನ ಬೈಕ್ ಮತ್ತು ಬೈಕ್ ಕೀಯನ್ನು ಕಸಿದುಕೊಂಡು ನಂತರ ಬೆಳಿಗ್ಗೆ 9.30 ಗಂಟೆಗೆ ಮಾಲೀಕರಾದ ಸಂಪತ್ ಶೆಟ್ಟಿ ರವರು ಬಂದು ಆತನನ್ನು ಉದ್ದೇಶಿಸಿ ಬೋಳಿ ಮಗನೆ ನಿನಗೆ ಬೂಟ್ ಕಾಲಲ್ಲಿ ಒದೆಯುತ್ತೇನೆ ಎಂದು ಬೆದರಿಸಿ 9 30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಒಂಟಿಕಾಲಲ್ಲಿ ನಿಲ್ಲು ಇಲ್ಲ ಅಂದ್ರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ನಿಲ್ಲಿಸಿ ಅಮಾನವೀಯ ಕೃತ್ಯವನ್ನು ಈ ಕೃಷ್ಣಪ್ರಸಾದ್ ಕ್ಯಾಶ್ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ, ಮತ್ತು ಚಂದ್ರಶೇಖರ್ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ( ಬಿಎನ್ಎಸ್)
2023 ಯುಎಸ್ 126. (2)352,351,(2)3,(5) ರಂತೆ ಪ್ರಕರಣದಾಲಾಗಿದೆ ಈ ಕೃಷ್ಣಪ್ರಸಾದ್ ಕ್ಯಾಶೂಇಂಡಸ್ಟ್ರೀಸ್ ಮಾಲಿಕ ಸಂಪತ್ ಶೆಟ್ಟಿ ಯನ್ನು ಮತ್ತು ಚಂದ್ರಶೇಖರ್ ರನ್ನು ಈ ಕೂಡಲೇ ಬಂಧಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರರವರು ಒತ್ತಾಯ ಹಾಗೂ ಈ ಅಮಾನವೀಯ ಕೃತ್ಯ ಎಸಗಿದ ಈ ಕಾರ್ಖಾನೆಯನ್ನು ಸರಕಾರ ಕೂಡಲೇ ಮುಟ್ಟುಗೋಲು. ಹಾಕಿಕೊಳ್ಳಬೇಕು ಮತ್ತು ಇದುವರೆಗೆ ಈ ಒಂದು ಫ್ಯಾಕ್ಟರಿಯಲ್ಲಿ ದೌರ್ಜನ್ಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ಸಂಪೂರ್ಣ ಪರಿಹಾರವನ್ನು ಫ್ಯಾಕ್ಟರಿ ಮಾಲಕನಿಂದ ವಸೂಲಿ ಮಾಡುವಂತೆ ಹಾಗೂ ಕಾರ್ಮಿಕ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ತಪ್ಪಿದಲ್ಲಿ ಮುಂದೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದೆಂದು ಜಯ ಪೂಜಾರಿ ಲಕ್ಷ್ಮಿನಗರ ಆಗ್ರಹಿಸಿದ್ದಾರೆ.
Trending
- ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆ
- ಬಲೆ ತುಳು ಓದುಗ : (ಜೂನ್ 30) ; ಅಕಾಡೆಮಿಗೆ ಅಲೋಶಿಯಸ್ ವಿದ್ಯಾರ್ಥಿಗಳ ಭೇಟಿ
- ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ದ್ರೋಹ : ಸಂತ್ರಸ್ತ ಯುವತಿಯಿಂದ ಮಗುವಿಗೆ ಜನ್ಮ…!
- ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ
- ಎಮ್.ಸಿ.ಸಿ. ಬ್ಯಾಂಕಿನಿಂದ ನೋಟ್ ಪುಸ್ತಕ,ಕೊಡೆ ಮತ್ತು ಸ್ಕೂಲ್ ಬ್ಯಾಗ್ ವಿತರಣೆ
- ತುಳು ನಾಟಕ ಕಾರ್ಯಗಾರ ಉದ್ಘಾಟನೆ, ಕಾಲೇಜ್ ವಿದ್ಯಾರ್ಥಿಗಳಿಗೆ ತುಳು ನಾಟಕದ ಅಭಿರುಚಿ ಮೂಡಿಸುವುದು ಅಗತ್ಯ : ತಮ್ಮ ಲಕ್ಷ್ಮಣ
- ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಸ್ಥಳಗಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಭೇಟಿ
- ಬಿಜೈ ಮಸಾಜ್ ಪಾರ್ಲರಿನಲ್ಲಿ ಅಕ್ರಮ ಚಟುವಟಿಕೆ ; ದಾಳಿ ನಡೆಸಿ ಟ್ರೇಡ್ ಲೈಸನ್ಸ್ ರದ್ದುಪಡಿಸಿದ ಪೊಲೀಸರು