- Nrithya Sudha (R) Presents Bharatanatyam Rangapravesha of Vidushi Shriya Rao Sannayya
- ಪುತ್ತೂರುದಲ್ಲಿ ಭಾರೀ ದಾಳಿ: ಕೋವಿ ಠೇವಣಾತಿ ಕೇಂದ್ರದಿಂದ 1500ಕ್ಕೂ ಅಧಿಕ ಬಂದೂಕು ಪತ್ತೆ
- ಪುತ್ತೂರು: ಹೈಕೋರ್ಟ್ ನಿರ್ದೇಶನದಂತೆ ಕೋವಿ ಠೇವಣಾತಿ ಕೇಂದ್ರದಲ್ಲಿ ಭಾರೀ ದಾಳಿ – 1500ಕ್ಕೂ ಅಧಿಕ ಬಂದೂಕು ಪತ್ತೆ
- ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ ಟ್ರಸ್ಟ್ (ರಿ ). ಬಿಕರ್ನಕಟ್ಟೆ. ಶ್ರೀ ಅಡ್ಯಾರ್ ಗುತ್ತು, ಮನೋಹರ್ ರೈ ಯವರನ್ನು ಅಧ್ಯಕ್ಷರಾಗಿ ನೇಮಕ
- ಮಂಗಳೂರು: ರೆಡ್ ಕ್ರಾಸ್ ಡಿ.ಕೆ. ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಫೆ. 22ರಂದು ಚುನಾವಣೆ
- ಹೆಕ್ಕಡ್ಕ–ಬೈಲೂರು ಭಾಗದ ಹಿರಿಯ ಶಿಕ್ಷಕ ಭುಜಬಲಿ ಅಧಿಕಾರಿ ವಿಧಿವಶ
- ಸೌಂದರ್ಯ ಸ್ಪರ್ಧೆ: ಮುಲ್ಕಿಯ ಶಿಖಾ ಸಿಶೀಲ್ ಗೆ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟ
- ಫೆಬ್ರವರಿ 22ರಂದು ಸಂಜೆ 5 ಗಂಟೆಗೆ ಕುಮಾರಿ ಶ್ರೇಯ ರಾವ್ ಸಣ್ಣಯ್ಯರ ಭರತನಾಟ್ಯ ರಂಗಪ್ರವೇಶ ಸಮಾರಂಭ
Author: Tulunada Surya
ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಟ್ಕಾ ಪ್ರಕರಣದಲ್ಲಿ ಬಂದಿತನಾದ ಮಟ್ಕಾ ಬುಕ್ಕಿಯ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದ್ದು, 12 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. 1) ಮಲ್ಪೆಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 66/2025ಕಲಂ: 112 BNS 2023 ಕಲಂ : 78(i) (iii) KP Act ರಲ್ಲಿ ಪ್ರಕಾಶ್ಮೂಲ್ಯ, ಪ್ರಾಯ: 43 ವರ್ಷತಂದೆ: ದಿ:ಕೃಷ್ಣಮೂಲ್ಯ, ವಾಸ: ಮನೆನಂಬ್ರ: 3-135-1, ಮಾತೃಛಾಯಾ, ಮೂಡಬೆಟ್ಟು, ಪಂಚನಬೆಟ್ಟು ಅಂಚೆ, ಹಿರಿಯಡ್ಕ, ಬೊಮ್ಮರಬೆಟ್ಟುಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. 2) ಮಲ್ಪೆಪೊಲೀಸ್ ಠಾಣೆ ಅಪರಾಧ ಕ್ರಮಾಂಕ ::66/2025 ಕಲಂ: 112 BNS 2023 & 78(i) (iii) KP Act ರಲ್ಲಿ ರತ್ನಾಕರ ಅಮೀನ್ ಪ್ರಾಯ 48 ವರ್ಷ ತಂದೆ : ದಿ : ರಾಜುಸನಿಲ್ , ವಾಸ : ಅಮೀನ ನಿವಾಸ , ನಾರಾಯಣ ಗುರು ಸಮುದಾಯ ಭವನ…
ಮಂಗಳೂರು: ಕರಾವಳಿ ಸಂಚಾರಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಮತ್ತು ಎಸ್ ಡಿ ಎಮ್ ಕಾನೂನು ಕಾಲೇಜಿನ ಜಂಟಿ ನೇತೃತ್ವದಲ್ಲಿ ಪೀಠ ಸ್ಥಾಪನೆಯ ಬೇಡಿಕೆಯನ್ನು ಈಡೇರಿಸಲು ಇಂದು ವಿದ್ಯಾರ್ಥಿಗಳ ಇ-ಮೇಲ್ ಚಳುವಳಿ ನಡೆಸಲಾಯಿತು. ವಿದ್ಯಾರ್ಥಿಗಳು ಇ-ಮೇಲ್ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಾಧೀಶರಿಗೆ ಈ- ಮೇಲ್ ಕಳುಹಿಸಿದರು. ಅಭಿಯಾನಕ್ಕೆ ಹೋರಾಟ ಸಮಿತಿಯ ಸಂಚಾಲಕರಾದ mlc ಶ್ರೀಮಾನ್ ಐವನ್ ಡಿಸೋಜ ಚಾಲನೆ ನೀಡಿ ಹೋರಾಟದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್ ವಿ ರಾಘವೇಂದ್ರ, ಹಿರಿಯ ವಕೀಲರಾದ ಶ್ರೀಮತಿ ಆಶಾ ನಾಯಕ್, ಶ್ರೀ ನರಸಿಂಹ ಹೆಗ್ಡೆ, ಡಾ. ದೇವರಾಜ್ ಕೆ , ಶ್ರೀ ದಿನಕರ್ ಶೆಟ್ಟಿ, ಶ್ರೀ ಗಿರೀಶ್ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಬಾಳಿಕಾ, ಹೆಚ್ಓಡಿ ಆದ ಸಾರಿಕಾ ಹರೀಶ್ ಕುಮಾರ್, ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಮಂಡಳಿ ಅಧ್ಯಕ್ಷ ಶ್ರೀ ಯೋಗೇಶ್ ಶೆಟ್ಟಿ ಜಪ್ಪು, ವಿದ್ಯಾರ್ಥಿ ನಾಯಕ ಸತ್ಯಾತ್ಮ ಭಟ್…
ಉಡುಪಿ : ಬಿ.ವಿ.ಹೆಗ್ಡೆ.ಅ.ಹಿ.ಪ್ರಾ.ಶಾಲೆ ಕೀಳಂಜೆಯಲ್ಲಿ ಹಾವಂಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀ ಮತಿ ಆಶಾ ಡಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೋತ್ಸವ ,ಉಚಿತ ನೋಟ್ ಬುಕ್ ಹಾಗೂ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವು ನೆರವೇರಿತು.ಅತಿಥಿಗಳು ಜೊತೆಗೂಡಿ ಅಕ್ಷರ ಜ್ಯೋತಿಯನ್ನು ಪ್ರಜ್ವಲಿಸಿದರು.ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಅತ್ಯಂತ ಗೌರವದಿಂದ ಆಹ್ವಾನಿಸಿ ,ದೀಪದಾರತಿಯನ್ನುಬೆಳಗಿದರು.ಉಚಿತ ನೋಟ್ ಬುಕ್ ಗಳ ದಾನಿಗಳಾದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ, ತುರವೇ ಉಪಾಧ್ಯಕ್ಷ ಶ್ರೀ ಉಮೇಶ್ ಹೆಗ್ಡೆ ಬಾಣಬೆಟ್ಟು , ತುರವೇ ಬ್ರಹ್ಮಾವರ ತಾಲೂಕು ಅಧ್ಯಕ್ಷ ಶ್ರೀ ಸತೀಶ್ ಪೂಜಾರಿ ಕೀಳಂಜೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿದರು. ಗ್ರಾ.ಪ. ಹಾವಂಜೆಯ ಸದಸ್ಯರಾದ ಶ್ರೀ ಉದಯ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ವಿಕ್ರಾಂತ್ ಶೆಟ್ಟಿ ಕೀಳಂಜೆ, ಹ.ವಿ.ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಬಾಣಬೆಟ್ಟು, ಹಿರಿಯ ಹಳೆ ವಿದ್ಯಾರ್ಥಿ ಗಳಾದ ಶ್ರೀ ಗಣಪತಿನಾಯಕ್, ಮಂಜಪ್ಪ ಸನಿಲ್, ಹಾಗೂ ಶಾಲಾಭಿವೃದ್ಧಿಯ ಉಪಾಧ್ಯಕ್ಷರಾದ ಶ್ರೀ…
ಕೀಳಂಜೆ ಶಾಲೆಯಲ್ಲಿ ಸಡಗರದ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ. ಬಿ.ವಿ.ಹೆಗ್ಡೆ.ಅ.ಹಿ.ಪ್ರಾ.ಶಾಲೆ ಕೀಳಂಜೆಯಲ್ಲಿ ಹಾವಂಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀ ಮತಿ ಆಶಾ ಡಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೋತ್ಸವ ,ಉಚಿತ ನೋಟ್ ಬುಕ್ ಹಾಗೂ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವು ನೆರವೇರಿತು.ಅತಿಥಿಗಳು ಜೊತೆಗೂಡಿ ಅಕ್ಷರ ಜ್ಯೋತಿಯನ್ನು ಪ್ರಜ್ವಲಿಸಿದರು.ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಅತ್ಯಂತ ಗೌರವದಿಂದ ಆಹ್ವಾನಿಸಿ ,ದೀಪದಾರತಿಯನ್ನುಬೆಳಗಿದರು.ಉಚಿತ ನೋಟ್ ಬುಕ್ ಗಳ ದಾನಿಗಳಾದ ಫ್ರಾಂಕಿ ಡಿಸೋಜ-ಜಿಲ್ಲಾಧ್ಯಕ್ಷರು(,ತು.ರ.ವೇದಿಕೆ,) ಶ್ರೀ ಉಮೇಶ್ ಹೆಗ್ಡೆ ಬಾಣಬೆಟ್ಟು, ಜಿಲ್ಲಾ ಉಪಾಧ್ಯಕ್ಷರು( ತು.ರ.ವೇ.) ಶ್ರೀ ಸತೀಶ್ ಪೂಜಾರಿ ಬ್ರಹ್ಮಾವರ ತಾಲೂಕು ಅಧ್ಯಕ್ಷರು (ತು.ರ.ವೇ.) ಅತಿಥಿಗಳನ್ನೊಳಗೊಂಡು ಉಚಿತ ನೋಟ್ ಬುಕ್ ಗಳನ್ನು ವಿತರಿಸಿದರು.ಗ್ರಾ.ಪ. ಹಾವಂಜೆಯ ಸದಸ್ಯರಾದ ಶ್ರೀ ಉದಯ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ವಿಕ್ರಾಂತ್ ಶೆಟ್ಟಿ ಕೀಳಂಜೆ, ಹ.ವಿ.ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಬಾಣಬೆಟ್ಟು, ಹಿರಿಯ ಹಳೆ ವಿದ್ಯಾರ್ಥಿ ಗಳಾದ ಶ್ರೀ ಗಣಪತಿನಾಯಕ್, ಮಂಜಪ್ಪ ಸನಿಲ್, ಹಾಗೂ…
ಉಡುಪಿ:ದಿನಾಂಕ 01-06-2025 ರಂದು ಉಡುಪಿ ಅಕ್ಷಯ ಟವರ್ ನಲ್ಲಿ ಹಿರಿಯ ಸಾಹಿತಿ ನಾಟಕಕಾರ ಚಲನಚಿತ್ರ ನಿರ್ದೇಶಕ ನಿರ್ಮಾಪಕ ನಟ ಸುಧಾಕರ್ ಬನ್ನಂಜೆ ಯವರಿಗೆ ಉಡುಪಿ ಜಿಲ್ಲಾ ಘಟಕ ವತಿಯಿಂದಸನ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಮಂಡಳಿ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರು ಸುಧಾಕರ್ ಬನ್ನಂಜೆ ರವರ ತುಳು ಭಾಷೆ,ಸಾಹಿತ್ಯ, ನಾಟಕ, ಚಲನಚಿತ್ರ ನೀಡಿದ ಕೊಡುಗೆ ಅಪಾರ ಎಂದರು. ಗಂಟ್ ಕಲ್ವೆರ್ ತುಳು ಚಲನಚಿತ್ರ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ವೀಕ್ಷಿಸಿ ಪ್ರೋತ್ಸಾಹಿಸಲು ವಿನಂತಿಸಿದರು. ಸನ್ಮಾನ ಸ್ವೀಕರಿಸಿ ಸುಧಾಕರ್ ಬನ್ನಂಜೆ ಮಾತನಾಡುತ್ತಾ ತುಳು ಪಂಚ ದ್ರಾವಿಡ ಭಾಷೆಯಲ್ಲಿ ಹಿರಿಯ ಭಾಷೆಯಾಗಿದ್ದು ತಮಿಳು ಭಾಷೆಯು ತುಳು ಭಾಷೆಯಿಂದ ಉಗಮವಾದದ್ದು ಎಂದರು . ತುಳು ಭಾಷೆ ಸಾಹಿತ್ಯ ಮತ್ತು ತುಳುನಾಡಿನ ಸಾಮಾಜಿಕ ಅಭಿವೃದ್ಧಿಗಾಗಿ ಹೋರಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವನ್ನು ಕೊಂಡಾಡಿದರು. ಸಭೆಯ ಅಧ್ಯಕ್ಷತೆಯನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ…
ದಿನಾಂಕ 01-06- 2025 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಉಡುಪಿ ಬಸ್ ನಿಲ್ದಾಣ ಬಳಿಯ ಅಕ್ಷಯ ಟವರ್ ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ಉದ್ಘಾಟನೆಯನ್ನು ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ಆಗಮಿಸಿದರು. ಸುಧಾಕರ್ ಬನ್ನಂಜೆ ಮಾತನಾಡುತ್ತಾ ತುಳು ಪಂಚ ದ್ರಾವಿಡ ಭಾಷೆಯಲ್ಲಿ ಭಾಷೆಯಾಗಿದ್ದು ತಮಿಳು ಭಾಷೆಯು ತುಳು ಭಾಷೆಯಿಂದ ಉಗಮವಾದದ್ದು ಮತ್ತು ತುಳು ಭಾಷೆ ಸಾಹಿತ್ಯ ಮತ್ತು ತುಳುನಾಡಿನ ಸಾಮಾಜಿಕ ಹಿತಾಸಕ್ತಿಗಾಗಿ ಹೋರಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವನ್ನು ಕೊಂಡಾಡಿದರು. ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಗಂಟ್ ಕಲ್ವೆರ್ ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ರವರನ್ನು ಗೌರವಿಸಿ ಸನ್ಮಾನಿಸಲಾಯಿತು ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ , ಹಿರಿಯ ಉಪಾಧ್ಯಕ್ಷ…
ಮೂಡುಬಿದಿರೆ: ಶ್ರುತ ಪಂಚಮಿ ಜೈನರ ಪವಿತ್ರ ಹಬ್ಬವಾಗಿದೆ. ಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನವಾಗಿದೆ. ಆಚಾರ್ಯ ಧರಸೇನ ರು ತನ್ನ ಶಿಷ್ಯರಾದ ಭೂತಬಲಿ ಮತ್ತು ಪುಷ್ಪದಂತ ರಿoದ ಪ್ರಥಮ ಬಾರಿ ಗುಜರಾತ್ ಬಳಿ ಯ ಗಿರಿ ನಾರ್ ಸಿದ್ದ ಕ್ಷೇತ್ರ ದಲ್ಲಿ ಲಿಪಿ ಬದ್ದ ಗೊಳಿಸಿ ಅಂಕ ಲೇಶ್ವರ ದಲ್ಲಿ ಪೂರ್ತಿ ಗೊಳಿಸಿ ಪೂಜಿಸಿದ ದಂತಹ ಪವಿತ್ರ ದಿನ,ಷಟ್ ಖ oಡ ಆಗಮ ಪೂರ್ಣಗೊo ಡು ಅದರ ಏಕೈಕ ಟೀಕೆ ಕನ್ನಡ ದ ಪ್ರಸಿದ್ದ ಸಿದ್ದಾoಥ ಗ್ರಂಥ ಧವಲ ತ್ರಯ ಗ್ರಂಥ ರಾಣಿ ರವಿ ದೇವಿ ಯಕ್ಕ ಶುಭ ಚಂದ್ರ ಆಚಾರ್ಯ ರಿಗೆ ಶಾಸ್ತ್ರ ದಾನ ನೀಡಿದದಿನವೂ ಹೌದು ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ನುಡಿದರು.ಮೂಡುಬಿದಿರೆ ಜೈನಮಠದ ಭಟ್ಟಾರಕ ಸ್ವಾಮೀಜಿಯವರ ಪಾವನ ಉಪಸ್ಥಿತಿ ನೇತೃತ್ವದಲ್ಲಿ ಶನಿವಾರ ನಡೆದ ಶ್ರುತ ಪಂಚಮಿ ಪ್ರಯುಕ್ತ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿದರು. ಶ್ರೀಮತಿ…
ಮಂಗಳೂರು : ಮಂಗಳೂರಿಗೆ ಹೊಸದಾಗಿ ನೇಮಕಗೊಂಡ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕೊಲೆಯಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಮತ್ತು ಅಂತಹ ಆರೋಪಿಗಳನ್ನು ಬೆಂಬಲಿಸುವ ಅಥವಾ ಆಶ್ರಯ ನೀಡುವ ಯಾರಿಗಾದರೂ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಇದು ಸ್ಪಷ್ಟವಾಗಿರಲಿ: ಕೊಲೆ ಅಥವಾ ಅಪರಾಧ ಆರೋಪಿಗೆ ಆಶ್ರಯ, ಆಹಾರ, ತಪ್ಪಿಸಿಕೊಳ್ಳಲು ವಾಹನ, ಹಣ ಅಥವಾ ಸಂವಹನ ನಡೆಸಲು ಫೋನ್ ನೀಡುವ ಮೂಲಕ ಸಹಾಯ ಮಾಡುವ ಯಾರನ್ನಾದರೂ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಆರೋಪಿ ಎಂದು ಪರಿಗಣಿಸಲಾಗುತ್ತದೆ” ಎಂದು ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಈ ಎಚ್ಚರಿಕೆ ಆರೋಪಿಯ ಸ್ನೇಹಿತರು, ಸಂಬಂಧಿಕರು ಮತ್ತು ಅವರ ಮನೆಯ ಸದಸ್ಯರಿಗೂ ಅನ್ವಯಿಸುತ್ತದೆ ಎಂದು ಅವರು ಒತ್ತಿ ಹೇಳಿದರು. “ಅಪರಾಧಿಯನ್ನು ತಿಳಿದೂ ಬೆಂಬಲಿಸುವುದು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಅಜ್ಞಾನವು ಒಂದು ಕ್ಷಮಿಸಿರುವುದಿಲ್ಲ” ಎಂದು ಅವರು ಹೇಳಿದರು. “ಯಾರನ್ನಾದರೂ ಬಂಧಿಸಲಾಗಿಲ್ಲ ಎಂದು ನೀವು ಭಾವಿಸಿದರೆ, ನಮ್ಮನ್ನು ಪ್ರಶ್ನಿಸಿ, ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಬಿಡಲಾಗುವುದಿಲ್ಲ” ಎಂದು ಅವರು ಹೇಳಿದರು
ಮಂಗಳೂರು : ಸುಧೀರ್ ಕುಮಾರ್ ರೆಡ್ಡಿ ಅವರು ಶುಕ್ರವಾರ ಮೇ 30 ರಂದು ಮಂಗಳೂರಿನ ನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಿ ಆರ್ಥಿಕ ಅಪರಾಧಗಳ ಉಪ ನಿರೀಕ್ಷಕ ಜನರಲ್ ಆಗಿ ನೇಮಿಸಲಾಯಿತು. ರಾಜ್ಯ ಸರ್ಕಾರ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಆದೇಶಗಳನ್ನು ಅನುಸರಿಸಿ, ಇಂದು ಬೆಳಿಗ್ಗೆ, ಡಾ. ಅರುಣ್ ಕೆ, ಐಪಿಎಸ್, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಸುಧೇರ್ ಕುಮಾರ್ ರೆಡ್ಡಿ ಅವರು ಜೂನ್ 2017 ರಿಂದ ಜನವರಿ 2018 ರವರೆಗೆ ಸ್ವಲ್ಪ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಅಕ್ರಮ ಮರಳು ಮಾಫಿಯಾವನ್ನು ನಿಭಾಯಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಶರತ್ ಮಡಿವಾಳ ಅವರನ್ನು ಜುಲೈ 4, 2017 ರಂದು ಬಿ.ಸಿ. ರಸ್ತೆಯಲ್ಲಿ ನಡೆದ ಕೋಮು…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಗಾಡವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಒಟ್ಟು ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾತ್ತು ಆದರೆ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಂಜಾನಾಡಿ ಗ್ರಾಮದ ಮದಪಾಡಿಯ ಮೊಂಟೆಪದವು ಕೋಡಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತ ಪ್ರಕರಣದಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಮುಂದುವರೆದ ಕಾರ್ಯಾಚರಣೆಯಲ್ಲಿ ತಾಯಿ ಹಾಗೂ ಮಗುವನ್ನು ರಕ್ಷಿಸಿದ್ದರು ಆದರೆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ . ಅವಶೇಷದಡಿ ಸಿಲುಕಿ ಅಜ್ಜಿ ಪ್ರೇಮ (58) ಆರ್ಯನ್ (3) ರಕ್ಷಣಾ ಕಾರ್ಯಚರಣೆಯ ಬಳಿಕ ಆಸ್ಪತ್ರೆಯಲ್ಲಿ ಮಗು ಆಯುಷ್ (2) ಸಾವು. ಮಗುವಿನ ತಾಯಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಮಳೆ ಹಾಗೂ ಇಕ್ಕಟ್ಟಿನ ಜಾಗವಾದ ಹಿನ್ನೆಲೆ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು.ಆದರೆ ರಕ್ಷಣಾ ತಂಡ ಹರಸಾಹಸ ಪಟ್ಟು ಪುಟ್ಟ ಮಗುವನ್ನು ರಕ್ಷಿಸಿದರೂ ಮಗು ಬದುಕುಳಿಯಲಿಲ್ಲ.
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
