ಮಂಗಳೂರು : ಕೃಷಿ ಬದುಕಿಗೆ ಬೆಸೆದು ಕೊಂಡಿರುವ ದೀಪಾವಳಿ ಹಬ್ಬವು ಪ್ರೀತಿ ಮತ್ತು ಭಾವೈಕ್ಯತೆಯಿಂದ ಎಲ್ಲರನ್ನೂ ಜೊತೆಗೂಡಿಸುವ ಹಬ್ಬವಾಗಿದೆ ಎಂದು ತುಳು ಪರಿಷತ್ತು ಅಧ್ಯಕ್ಷ ಶುಭೋದಯ ಆಳ್ವ ಹೇಳಿದರು.
ಅವರು ಮಂಗಳೂರಿನ ಬಿಕರ್ಣಕಟ್ಟೆ ಕಲ್ಪನೆಯ ಐಕ್ಯಂ ವಿಶೇಷ ಮಕ್ಕಳ ತರಬೇತಿ ಕೇಂದ್ರದಲ್ಲಿ ತುಳು ಪರಿಷತ್ ವತಿಯಿಂದ ಆಯೋಜಿಸಲಾದ ದೀಪಾವಳಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ತುಳು ಪರಿಷತ್ತು ಉಪಾಧ್ಯಕ್ಷ ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಚಂದ್ರಕಲಾ ರಾವ್ ಶುಭಕೋರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಕ್ಯಂ ಸಂಸ್ಥೆಯ ಅಧ್ಯಕ್ಷೆ ಕಮಲಾಕ್ಷಿ ಕುಂದರ್, ಕಾರ್ಯದರ್ಶಿ ಸಂತೋಷ್ ಕುಮಾರ್ , ಟ್ರಸ್ಟಿ ಪದ್ಮನಾಭ ಕೆ .ಸಾಲಿಯಾನ್ , ಸಂಸ್ಥೆಯ ಹಿತೈಷಿ ಉಮನಾಥ ಕೊಟ್ಟಾರಿ ಅವರು ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ತುಳು ಪರಿಷತ್ ಸದಸ್ಯರಾದ ಸುಮತಿ ಹೆಗ್ಡೆ , ಅಮಿತಾ ಅಶ್ವಿನ್ , ದುರ್ಗಾ ಪ್ರಸಾದ್, ರಮೇಶ್ ಮಂಚಕಲ್, ರಾಕೇಶ್ ಕುಂದರ್, ಶಾಲಿನಿ ರೈ, ಶ್ರೀನಿವಾಸ್, ನ್ಯಾನ್ಸಿ ನೋರೋನ್ಹ, ಮೀರಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Trending
- ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ಗೆ ಇಬ್ಬರು ಪ್ರಮುಖ ಮುಖಂಡರ ಸೇರ್ಪಡೆ
- ಆಯಿಷತ್ ಲುತ್ಫಾ ನಜಾ ಕೆ.ಎ. ಅವರು ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್
- ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಓಬಿಸಿ ಮೋರ್ಚಾ ಜಿಲ್ಲಾ ಪದಾಧಿಕಾರಿಗಳನ್ನಾಗಿ ನಿಯುಕ್ತಿ.
- ತುಳುಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ: ಅಧ್ಯಯನ ಸಮಿತಿ ವರದಿ ಸಲ್ಲಿಕೆ
- ತುಳು ಕೂಟ (ರಿ.), ಕುಡ್ಲ ಸತ್ಯದಪ್ಪೆ ದೇಯಿ ಬೈದೆದಿ’ಎಂಬ ಕಿರು ರೂಪಕ ಪ್ರದರ್ಶನ
- ದಕ್ಷಿಣ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ
- ಮಲ್ಪೆಯಲ್ಲಿ ಚೂರಿ ಇರಿತ: ಹಿಂದೂ ಸಂಘಟನೆ ಮುಖಂಡ ಮಂಜು ಕೊಳ ಮೇಲೆ ಚೂರಿ ಇರಿತ
- ಮಂಗಳೂರು: ಡಿಸೆಂಬರ್ನಲ್ಲಿ “ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ” ಲೋಕಾರ್ಪಣೆ -ಐಕಳ ಹರೀಶ್ ಶೆಟ್ಟಿ

