ದಿನಾಂಕ ಜೂನ್ 18-2025ರಂದು ಪ್ರವೀಣ ಎಂಬ 29 ವರ್ಷ ಪ್ರಾಯದ ಯುವಕನಿಗೆ ಬೆಳಿಗ್ಗೆ ಏಳು ಗಂಟೆಯಿಂದ ಫ್ಯಾಕ್ಟರಿಗೆ ಹೋದಾಗ ಅಲ್ಲಿನ
ಹೆಚ್ ಎ ಆರ್ ಚಂದ್ರಶೇಖರ್ ಎಂಬವರು ಪ್ರವೀಣನನ್ನು ಗೇಟಿನ ಒಳಗೆ ಬಾರದಂತೆ ತಡೆದು ಏರುದನಿಯಿಂದ ಬೆದರಿಸಿ ಬೈಕ್ ಅನ್ನು ತಡೆದು ನಿಲ್ಲಿಸಿ ಫ್ಯಾಕ್ಟರಿ ಮಾಲೀಕ ಸಂಪತ್ ಶೆಟ್ಟಿ ಬರುವವರೆಗೆ ನಿನ್ನನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ ಎಂದು ಗದರಿಸಿ ಅವನ ಬೈಕ್ ಮತ್ತು ಬೈಕ್ ಕೀಯನ್ನು ಕಸಿದುಕೊಂಡು ನಂತರ ಬೆಳಿಗ್ಗೆ 9.30 ಗಂಟೆಗೆ ಮಾಲೀಕರಾದ ಸಂಪತ್ ಶೆಟ್ಟಿ ರವರು ಬಂದು ಆತನನ್ನು ಉದ್ದೇಶಿಸಿ ಬೋಳಿ ಮಗನೆ ನಿನಗೆ ಬೂಟ್ ಕಾಲಲ್ಲಿ ಒದೆಯುತ್ತೇನೆ ಎಂದು ಬೆದರಿಸಿ 9 30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಒಂಟಿಕಾಲಲ್ಲಿ ನಿಲ್ಲು ಇಲ್ಲ ಅಂದ್ರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ನಿಲ್ಲಿಸಿ ಅಮಾನವೀಯ ಕೃತ್ಯವನ್ನು ಈ ಕೃಷ್ಣಪ್ರಸಾದ್ ಕ್ಯಾಶ್ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ, ಮತ್ತು ಚಂದ್ರಶೇಖರ್ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ( ಬಿಎನ್ಎಸ್)
2023 ಯುಎಸ್ 126. (2)352,351,(2)3,(5) ರಂತೆ ಪ್ರಕರಣದಾಲಾಗಿದೆ ಈ ಕೃಷ್ಣಪ್ರಸಾದ್ ಕ್ಯಾಶೂಇಂಡಸ್ಟ್ರೀಸ್ ಮಾಲಿಕ ಸಂಪತ್ ಶೆಟ್ಟಿ ಯನ್ನು ಮತ್ತು ಚಂದ್ರಶೇಖರ್ ರನ್ನು ಈ ಕೂಡಲೇ ಬಂಧಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರರವರು ಒತ್ತಾಯ ಹಾಗೂ ಈ ಅಮಾನವೀಯ ಕೃತ್ಯ ಎಸಗಿದ ಈ ಕಾರ್ಖಾನೆಯನ್ನು ಸರಕಾರ ಕೂಡಲೇ ಮುಟ್ಟುಗೋಲು. ಹಾಕಿಕೊಳ್ಳಬೇಕು ಮತ್ತು ಇದುವರೆಗೆ ಈ ಒಂದು ಫ್ಯಾಕ್ಟರಿಯಲ್ಲಿ ದೌರ್ಜನ್ಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ಸಂಪೂರ್ಣ ಪರಿಹಾರವನ್ನು ಫ್ಯಾಕ್ಟರಿ ಮಾಲಕನಿಂದ ವಸೂಲಿ ಮಾಡುವಂತೆ ಹಾಗೂ ಕಾರ್ಮಿಕ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ತಪ್ಪಿದಲ್ಲಿ ಮುಂದೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದೆಂದು ಜಯ ಪೂಜಾರಿ ಲಕ್ಷ್ಮಿನಗರ ಆಗ್ರಹಿಸಿದ್ದಾರೆ.
Trending
- ಡೊಂಕ ಬಂದರಿನಲ್ಲಿ ಭೀಕರ ಅಗ್ನಿ ಅವಘಡ: ಪರ್ಷಿಯನ್ ಮೀನುಗಾರಿಕಾ ಬೋಟ್ ಸಂಪೂರ್ಣ ಭಸ್ಮ – ₹30 ಲಕ್ಷಕ್ಕೂ ಅಧಿಕ ನಷ್ಟ
- ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್ ಖಂಡಿಸಿ ಪ್ರಧಾನಿ ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ – ರಾಹುಲ್, ಪ್ರಿಯಾಂಕಾ ಸೇರಿ ಹಲವು ನಾಯಕರು ವಶಕ್ಕೆ
- ಮೂಲ್ಕಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಭವ್ಯ ಸಭಾಭವನ ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆ: ಮುಂಬೈ ದಾನಿಗಳಿಂದ ಬಲಿಷ್ಠ ಭರವಸೆ
- ಬ್ರಹ್ಮಾವರದಲ್ಲಿ ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸ್ ದಾಳಿ: ಇಬ್ಬರ ಬಂಧನ, ₹6.41 ಲಕ್ಷ ಮೌಲ್ಯದ ವಸ್ತುಗಳ ವಶ
- ಲಾವಣ್ಯ ಹತ್ಯೆ ಪ್ರಕರಣಕ್ಕೆ ಕಠಿಣ ಶಿಕ್ಷೆ ವಿಧಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಮನವಿ
- ಭಾರೀ ಮಳೆಗೆ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದು ಆತಂಕ – ಚಾಲಕ ಅದೃಷ್ಟವಶಾತ್ ಪಾರು
- ಮಾತೃಸ್ವರೂಪಿ ಶ್ರೀಮತಿ ಚೆನ್ನಮ್ಮ ದೇವೇಗೌಡರವರ ನಿಧನಕ್ಕೆ ಸುಳ್ಯ ತಾಲೂಕು ಜನತಾದಳ (ಜಾತ್ಯತೀತ) ಘಟಕ ತೀವ್ರ ಸಂತಾಪ
- ಪರಮಜ್ಯೋತಿ ಭಜನಾ ಮಂಡಳಿ ವತಿಯಿಂದ ಸಂಭ್ರಮದಿಂದ ಆಟಿ ದೊಂಜಿ ದಿನ ಆಚರಣೆ,ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ: ಯೋಗಿಶ್ ಶೆಟ್ಟಿ ಜಪ್ಪು

