ದಿನಾಂಕ ಜೂನ್ 18-2025ರಂದು ಪ್ರವೀಣ ಎಂಬ 29 ವರ್ಷ ಪ್ರಾಯದ ಯುವಕನಿಗೆ ಬೆಳಿಗ್ಗೆ ಏಳು ಗಂಟೆಯಿಂದ ಫ್ಯಾಕ್ಟರಿಗೆ ಹೋದಾಗ ಅಲ್ಲಿನ
ಹೆಚ್ ಎ ಆರ್ ಚಂದ್ರಶೇಖರ್ ಎಂಬವರು ಪ್ರವೀಣನನ್ನು ಗೇಟಿನ ಒಳಗೆ ಬಾರದಂತೆ ತಡೆದು ಏರುದನಿಯಿಂದ ಬೆದರಿಸಿ ಬೈಕ್ ಅನ್ನು ತಡೆದು ನಿಲ್ಲಿಸಿ ಫ್ಯಾಕ್ಟರಿ ಮಾಲೀಕ ಸಂಪತ್ ಶೆಟ್ಟಿ ಬರುವವರೆಗೆ ನಿನ್ನನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ ಎಂದು ಗದರಿಸಿ ಅವನ ಬೈಕ್ ಮತ್ತು ಬೈಕ್ ಕೀಯನ್ನು ಕಸಿದುಕೊಂಡು ನಂತರ ಬೆಳಿಗ್ಗೆ 9.30 ಗಂಟೆಗೆ ಮಾಲೀಕರಾದ ಸಂಪತ್ ಶೆಟ್ಟಿ ರವರು ಬಂದು ಆತನನ್ನು ಉದ್ದೇಶಿಸಿ ಬೋಳಿ ಮಗನೆ ನಿನಗೆ ಬೂಟ್ ಕಾಲಲ್ಲಿ ಒದೆಯುತ್ತೇನೆ ಎಂದು ಬೆದರಿಸಿ 9 30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಒಂಟಿಕಾಲಲ್ಲಿ ನಿಲ್ಲು ಇಲ್ಲ ಅಂದ್ರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ನಿಲ್ಲಿಸಿ ಅಮಾನವೀಯ ಕೃತ್ಯವನ್ನು ಈ ಕೃಷ್ಣಪ್ರಸಾದ್ ಕ್ಯಾಶ್ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ, ಮತ್ತು ಚಂದ್ರಶೇಖರ್ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ( ಬಿಎನ್ಎಸ್)
2023 ಯುಎಸ್ 126. (2)352,351,(2)3,(5) ರಂತೆ ಪ್ರಕರಣದಾಲಾಗಿದೆ ಈ ಕೃಷ್ಣಪ್ರಸಾದ್ ಕ್ಯಾಶೂಇಂಡಸ್ಟ್ರೀಸ್ ಮಾಲಿಕ ಸಂಪತ್ ಶೆಟ್ಟಿ ಯನ್ನು ಮತ್ತು ಚಂದ್ರಶೇಖರ್ ರನ್ನು ಈ ಕೂಡಲೇ ಬಂಧಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರರವರು ಒತ್ತಾಯ ಹಾಗೂ ಈ ಅಮಾನವೀಯ ಕೃತ್ಯ ಎಸಗಿದ ಈ ಕಾರ್ಖಾನೆಯನ್ನು ಸರಕಾರ ಕೂಡಲೇ ಮುಟ್ಟುಗೋಲು. ಹಾಕಿಕೊಳ್ಳಬೇಕು ಮತ್ತು ಇದುವರೆಗೆ ಈ ಒಂದು ಫ್ಯಾಕ್ಟರಿಯಲ್ಲಿ ದೌರ್ಜನ್ಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ಸಂಪೂರ್ಣ ಪರಿಹಾರವನ್ನು ಫ್ಯಾಕ್ಟರಿ ಮಾಲಕನಿಂದ ವಸೂಲಿ ಮಾಡುವಂತೆ ಹಾಗೂ ಕಾರ್ಮಿಕ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ತಪ್ಪಿದಲ್ಲಿ ಮುಂದೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದೆಂದು ಜಯ ಪೂಜಾರಿ ಲಕ್ಷ್ಮಿನಗರ ಆಗ್ರಹಿಸಿದ್ದಾರೆ.
Trending
- ಬಂಟ ಕ್ರೀಡೋತ್ಸವದಿಂದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ: ಡಾ. ಶಿವಶರಣ್ ಶೆಟ್ಟಿ
- ಕರ್ತವ್ಯ ಲೋಪ, ನಿರ್ಲಕ್ಷ್ಯ ಆರೋಪ ಬಂಟ್ವಾಳ ಗ್ರಾಮಾಂತರ ಠಾಣೆಯ ಕಾನ್ಸ್ಟೇಬಲ್ ಅಮಾನತು
- ಜನರ ಕಾಲಬುಡಕ್ಕೆ ಸರ್ಕಾರಿ ಸೇವೆ ತಲುಪಬೇಕು ಮಧ್ಯವರ್ತಿಗಳ ಹಾವಳಿ ತಪ್ಪಿಸುವುದೇ ಪ್ರಜಾಸೇವೆ ಆಂದೋಲನದ ಗುರಿ: ಯು.ಟಿ. ಖಾದರ್
- ಅಮ್ಮುಂಜೆ ಸೆಕ್ರೇಡ್ ಹಾರ್ಟ್ ಶಾಲೆಯಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ
- ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಮಂಗಳೂರಿನಲ್ಲಿ ಸಂಚಾರ ಬದಲಾವಣೆ, ಮೊಸರುಕುಡಿಕೆ ಮೆರವಣಿಗೆ ಹಿನ್ನೆಲೆ; ಸೆ.5ರ ಸಂಜೆ 5ರಿಂದ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಸಾಧ್ಯತೆ
- ಮಹಿಳೆಯ ರಕ್ಷಣೆಗೆ ಧಾವಿಸಿದ ಬೀದಿ ನಾಯಿಗಳು! ಲೈಂಗಿಕ ದೌರ್ಜನ್ಯ ಯತ್ನಕ್ಕೆ ತಡೆ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ಆರೋಪಿ ಬಂಧನ
- ಬಿಪಿನ್ ರಾವತ್ ಸ್ವ ಸಹಾಯ ಸಂಘ ಹಾವಂಜೆ ಇದರ 5ನೇ ವರ್ಷದ ಕಾರ್ಯಕ್ರಮ
- ಮೊಟ್ಟೆಯಲ್ಲಿ ಹುಳ ಪತ್ತೆ ದೂರು: ಫಳ್ನೀರ್ನ ಬ್ಲಿಂಕಿಟ್ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

