ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗಿಶ್ ಶೆಟ್ಟಿ ಜೆಪ್ಪುರವರ ಹುಟ್ಟು ಹಬ್ಬದ ಆಚರಣೆ ಅಂಗವಾಗಿ ಅ.29 (ಶನಿವಾರ) ರಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಬ್ಲಡ್ ಬ್ಯಾಂಕ್,ಲೇಡಿಗೋಶನ್,ಮಹಿಳಾ ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಬ್ಲಡ್ ಬ್ಯಾಂಕ್ ಗಳಲ್ಲಿ 10.30 ಗಂಟೆಯಿಂದ ತುಳುನಾಡ ರಕ್ಷಣಾ ವೇದಿಕೆ ಯುವ ಘಟಕ ವತಿಯಿಂದ ರಕ್ತದಾನ ನಡೆಯಿತು. ಯೋಗೀಶ್ ಶೆಟ್ಟಿ ಜಪ್ಪು ರವರು ಸ್ವತಃ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರ ಕ್ಕೆ ಚಾಲನೆ ನೀಡಿದರು. ಬಳಿಕ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಂತರಾಷ್ಟ್ರೀಯ ಗೌರವಾಧ್ಯಕ್ಷರಾದ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡೀಸ್ ರವರು ರಕ್ತದಾನದ ಬಗ್ಗೆ ಹಿತನುಡಿಗಳನ್ನಾಡಿದರು. ಒಂದು ಯೂನಿಟ್ ರಕ್ತ ನೀಡುವುದರ ಮೂಲಕ ಮೂರು ಜೀವಗಳನ್ನು ಉಳಿಸಬಹುದು.ಅದ್ದರಿಂದ ಪ್ರತಿಯೊಬ್ಬರು ರಕ್ತದಾನ ನೀಡಬೇಕೆಂದು ಮನವಿ ಮಾಡಿದರು.
ಬಳಿಕ ಮಹಿಳಾ ಘಟಕದ ವತಿಯಿಂದ ಜಪ್ಪು ಮಾರ್ಕೆಟ್ ಬಳಿಯ ಭಗಿನಿ ಸಮಾಜ ಆಶ್ರಮಕ್ಕೆ ತೆರಳಿ ಹಣ್ಣು ಹಂಪಲು ಹಾಗೂ ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಬಳಿಕ ವಾಮದ ಪದವು ಘಟಕ ವತಿಯಿಂದ ವಾಮದಪದವು ಆರೋಗ್ಯ ಕೇಂದ್ರ, ಬಂಟ್ವಾಳ ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಆಶ್ರಮಗಳಲ್ಲಿ ಹಣ್ಣು ಹಂಪಲು ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು.
ಸಂಜೆ 8.00 ಗಂಟೆಗೆ ಮಂಗಳೂರು ನಗರ ಪಾಲಿಕೆ ವಸತಿ ರಹಿತರ ಆಶ್ರಯ ಕೇಂದ್ರ ಬಂದರುನಲ್ಲಿ ಕೇಕ್ ಕತ್ತರಿಸಿದರು. ಹಿರಿಯ ಕಾರ್ಮಿಕ ನಿರೀಕ್ಷಕಾರಾದ ಮೇರಿಯವರು ಕಾರ್ಮಿಕ ಕಾರ್ಡ್ ವಿತರಿಸಿ ಕಟ್ಟಡ ಕಾರ್ಮಿಕರ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಆಶ್ರಮ ವಾಸಿಗಳೊಂದಿಗೆ ಬೋಜನ ಸ್ವೀಕರಿಸಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಹುಭಾಷಾ ಚಲನಚಿತ್ರ ನಟ ಲ್ಯಾರಿ ಫೆರ್ನಾಂಡೀಸ್, ರೆಡ್ ಕ್ರಾಸ್ ಅಧಿಕಾರಿ ಪ್ರವೀಣ್,
ಹಿರಿಯ ಕಾರ್ಮಿಕ ನಿರೀಕ್ಷಕಾರಾದ ಮೇರಿ,ಮಂಗಳೂರು ನಗರ ಪಾಲಿಕೆ ವಸತಿ ರಹಿತರ ಕೇಂದ್ರದ ಆಡಳಿತಾಧಿಕಾರಿಯಾದ ಎಂ.ಪಿ.ಶೆಣೈ, ಮಹಿಳಾ ಅದ್ಯಕ್ಷೆ ಆಶಾ ಶೆಟ್ಟಿ ಅತ್ತಾವರ ,ಯುವ ಘಟಕ ಅದ್ಯಕ್ಷ ಹರೀಶ್ ಶೆಟ್ಟಿ ಶಕ್ತಿ ನಗರ, ಮುಖಂಡರು ಗಳಾದ ಜ್ಯೋತಿಕಾ ಜೈನ್, ಕಾವೇರಿ ರೈ ಬೋಳಾರ, ರಾದಿಕಾ ಕೂಳೂರು,ರೋಶನ್ ಡಿ ಸೋಜ, ಫಾರೂಕ್ ಗೋಲ್ಡನ್ ಬಂದರು, ಕ್ಲಿಟಸ್ ಲೋಬೊ,ಶಾರದಾ ಶೆಟ್ಟಿ ಕದ್ರಿ, ವೀಣಾ ಶೆಟ್ಟಿ ಕೊಟ್ಟಾರ, ನೀತಾ ಹರೀಶ್ ಶೆಟ್ಟಿ, ಪೇರಿ ಡಿ’ಸೋಜ ಉರ್ವ, ಗೈಟನ್ ಡಿ’ಸೋಜ ಬಿರ್ಕನಕಟ್ಟೆ, ಜನಾರ್ದನ್ ಬೇಂಗ್ರೆ,ಮೋಹನ್ ಶೆಟ್ಟಿ ಪಾವೂರು, ಅಕ್ಷಯ್ ಆಚಾರ್ಯ ಬಜ್ಜೊಡಿ, ರಾಕಿ ಅಲ್ಮೆಡಾ, ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಭಟ್ ಕಡಬ ಕಾರ್ಯಕ್ರಮ ನಿರೂಪಿಸಿದರು.