Thursday, April 25, 2024
spot_img
More

    Latest Posts

    ವಿವಾಹದ ದಿನದಂದೇ ಕೊರೊನಾಕ್ಕೆ ಮದುಮಗ ಸಾವು

    ಚಿಕ್ಕಮಗಳೂರು: ಮದುವೆ ದಿನದಂದೇ ಕೋವಿಡ್ ಸೋಂಕಿತ ವರ ಕೊರೊನಾಗೆ ಬಲಿಯಾಗಿರುವ ಘಟನೆ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

    ಪೃಥ್ವಿರಾಜ್ (32) ಮೃತ ಯುವಕ. ಈತ ಇಂದು ವಿವಾಹದ ಹಿನ್ನೆಲೆಯಲ್ಲಿ 10ದಿನದ ಮೊದಲು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿದ್ದ.

    ಬಳಿಕ ಆತನಿಗೆ ಅನಾರೋಗ್ಯವಾಗಿದ್ದು, ಪರೀಕ್ಷೆ ಮಾಡಿಸಿದಾಗ ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಇದರಿಂದಾಗಿ ವಿವಾಹ ನಡೆಯಬೇಕಿದ್ದ ಮನೆಯಲ್ಲಿ ಶೋಕ ಮುಡುಗಟ್ಟಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss