ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಯುವ ಮುಖಂಡರುಗಳಾದ ಅಂತರಾಷ್ಟ್ರೀಯ ಖ್ಯಾತಿಯ ಮಾರ್ಷಲ್ ಆರ್ಟ್ ಸಾಧಕ, ವಿಖಿತ್ ಮಂಜುನಾಥ್ ಹಾಗೂ ಚಲನಚಿತ್ರ ನಟ ಮತ್ತು ಕಂಬಳ ರೈಡರ್ ಶರಣ್ ಶೆಟ್ಟಿಯವರು ದೇಶಾದ್ಯಂತ ತುಳು ಭಾಷೆ ಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಹಿನ್ನಲೆಯಲ್ಲಿ ಜಾಥಾವನ್ನು ಕೈಗೊಂಡಿದ್ದರು.
ಸುಮಾರು 35 ದಿನಗಳ ಬಳಿಕ ದೇಶಾದ್ಯಂತ ತುಳುಬಾಷೆಯ ಬಗ್ಗೆ ಪ್ರಚಾರವನ್ನು ಮಾಡಿಕೊಂಡು ಕೇಂದ್ರ ಸಚಿವರನ್ನ ಭೇಟಿ ಮಾಡಿ ತುಳುನಾಡ ರಕ್ಷಣಾ ವೇದಿಕೆಯ ಮನವಿಯನ್ನ ನೀಡಿ ಮರಳಿ ಮಂಗಳೂರಿಗೆ ಆಗಮಿಸಿದವರನ್ನು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜೆಪ್ಪು ನೇತೃತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಮುಖಂಡರುಗಳಾದ ಜ್ಯೋತಿಕಾ ಜೈನ್,ಕ್ಲೈಟಸ್ ಲೋಬೋ,ಗೈಟನ್ ಡಿ’ಸೋಜ,ರಕ್ಷಿತ್ ಕುಡುಪು,ಹರೀಶ್ ಶೆಟ್ಟಿ ಶಕ್ತಿ ನಗರ,ಪ್ರಶಾಂತ್ ಅಂಚನ್ ಜೆಪ್ಪಿನಮೊಗರು,ಪೆಟ್ ಝೋನ್ ನ ಮಾಲಿಕರಾದ ಶಕೀಲ್ ಮತ್ತು ಅದಿಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರೀಯ ಮಂಡಳಿಯ ಕಛೇರಿ ಕಾರ್ಯದರ್ಶಿಯಾದ ಪ್ರಶಾಂತ್ ಭಟ್ ಕಡಬ ಕಾರ್ಯಕ್ರಮವನ್ನು ನಿರೂಪಿಸಿದರು.