ಬೆಳ್ತಂಗಡಿ: ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ವೇಣೂರು- ಪೆರ್ಮುಡ ಹೊನಲು ಬೆಳಕಿನ 29ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಗೌರವಾಧ್ಯಕ್ಷ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಧ್ಯಕ್ಷ ನಿತೀಶ್ ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ ಇವರ ನೇತೃತ್ವ ದಲ್ಲಿ ಹಾಗೂ ಸಮಿತಿಯ ಸರ್ವರ ಸಹಕಾರ ದೊಂದಿಗೆ ಎ. 9 ರಂದು ನಡೆಯಲಿದೆ.
ಕಂಬಳದ ಉದ್ಘಾಟನೆಯು ಬೆಳಿಗ್ಗೆ 8. 30 ಕ್ಕೆ ನಡೆಯಲಿದ್ದು ಸಭಾ ಕಾರ್ಯಕ್ರಮ ಸಂಜೆ 6. 30 ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಸಚಿವರುಗಳು, ಶಾಸಕರುಗಳು, ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಹುಮಾನಗಳು:
ಕನೆ ಹಲಗೆ: 71/2 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ 1 ಪವನು 61/2 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ 1/2 ಪವನು, ಹಗ್ಗ ಹಿರಿಯ ಪ್ರಥಮ 1 ಪವನು, ದ್ವಿತೀಯ 1/2 ಪವನು, ಹಗ್ಗ ಕಿರಿಯ ಪ್ರಥಮ 1/2 ಪವನು, ದ್ವಿತೀಯ 1/4 ಪವನು, ನೇಗಿಲು ಹಿರಿಯ ಪ್ರಥಮ 1 ಪವನು, ದ್ವಿತೀಯ 1/2 ಪವನು, ನೇಗಿಲು ಕಿರಿಯ ಪ್ರಥಮ 1/2 ಪವನು, ದ್ವಿತೀಯ 1/4 ಪವನು, ಅಡ್ಡ ಹಲಗೆ ಪ್ರಥಮ 1/2ಪವನು, ದ್ವಿತೀಯ 1/4 ಪವನು.
©2021 Tulunada Surya | Developed by CuriousLabs