Thursday, March 28, 2024
spot_img
More

    Latest Posts

    ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

    ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ ವಾಮದಪದವು ಬಂಟ್ವಾಳ ತಾಲೂಕು ಇದರ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ 11 /9/2022 ರಂದು ಚೆನ್ನೈ ತೋಡಿ ಶಾಲಾ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಚೌಟ ಅವರ ಅಧ್ಯಕ್ಷತೆಯಲ್ಲಿ ಜರಗಿಸಲಾಯಿತು. ಸಭೆಯಲ್ಲಿ ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಾರಾಯಣಶೆಟ್ಟಿಯವರು ಮಂಡಿಸಿದರು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀ ಜಗದೀಶ್ ರವರು ಲೆಕ್ಕಪತ್ರಗಳನ್ನು ಮಂಡಿಸಿದರು ಸಭೆಯಲ್ಲಿ ನಿವ್ವಳ ಲಾಭವನ್ನು ವಿಂಗಡಿಸಲಾಯಿತು. ಸದಸ್ಯರಿಗೆ ಶೇಕಡ 15 ಡಿವಿಡೆಂಡ್ ಘೋಷಿಸಲಾಯಿತು. ಈ ಮೊತ್ತವನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಸದಸ್ಯರು ಒಪ್ಪಿಗೆ ನೀಡಿದರು . ನಿವ್ವಳ ಲಾಭ ರೂಪಾಯಿ 20.66 ಲಕ್ಷ ಗಳಿಸಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.


    ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಶ್ರೀನಿವಾಸ್ ಇವರು ನಂದಿನಿ ಪಶು ಆಹಾರ ಮತ್ತು ಜಾನುವಾರುಗಳ ವಿಮೆ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು. ಸಂಘದ ಕೃತಕ ಗರ್ಭಧಾರಣ ಕಾರ್ಯಕರ್ತೆ ಶ್ರೀಮತಿ ಶೋಭಾ ಶೆಟ್ಟಿ ಇವರಿಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಜಿಲ್ಲಾಮಟ್ಟದ ಉತ್ತಮ ಕೃತಕ ಗರ್ಭಧಾರಣೆ ಕಾರ್ಯಕರ್ತೆ ಪ್ರಶಸ್ತಿ ಬಂದಿದ್ದು ಅವರನ್ನು ಸನ್ಮಾನಿಸಲಾಯಿತು.
    ನಿರ್ದೇಶಕರಾದ ಪ್ರಕಾಶ್ ಶೆಟ್ಟಿ, ಸುರೇಶ್ ಗಟ್ಟಿ, ದಿನೇಶ್ ಸಾಲಿಯಾನ್, ಧರಣಪ್ಪ ನಾಯಕ್, ಲೀಲಾವತಿ ರೈ, ಆನಂದಿ ಪೂಜಾರಿ ಹಾಜರಿದ್ದರು. ಸಂಘದ ನಿರ್ದೇಶಕರಾದ ಬೇಬಿ ಗೌಡ ಪ್ರಾರ್ಥಿಸಿ ನಿರ್ದೇಶಕರಾದ ಶ್ರೀ ಶ್ಯಾಮ ಪ್ರಸಾದ ಪೂಜಾ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ಸಿಬ್ಬಂದಿಗಳಾದ ಯಶೋಧರ, ಗುರುಪ್ರಸಾದ್, ಹರಿಶ್ಚಂದ್ರ,ಲೀಲಾಕ್ಷಿ, ರಾಕೇಶ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಶ್ರೀ ಅನಂತರಾಮ ನಾಯಕ ವಂದಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss