ರಾಜ್ಯದಲ್ಲಿ ಕೋವಿಡ್ ಮೊದಲನೇ ಡೋಸ್ ಶೇ. 89ರಷ್ಟು ಜನರು ಪಡೆದಿದ್ದಾರೆ, ಆದ್ರೆ ಎರಡನೇ ಡೋಸ್ ಶೇ.48ರಷ್ಚು ಜನ ಮಾತ್ರ ಪಡೆದಿದ್ದಾರೆ.ನಿರ್ಲಕ್ಷ್ಯ ಮನೋಭಾವ ಜನರಲ್ಲಿ ಮೂಡಿದೆ ಅದರಿಂದ ಹೊರಗೆ ಬಂದು ಶೇಕಡ ನೂರರಷ್ಟು ಲಸಿಕಾಕರಣವಾಗಬೇಕಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಆರೋಗ್ಯ ನಂದನ ಕಾರ್ಯಕ್ರಮ ಅಡಿ ಡೇಟಾ ಕಲೆಕ್ಟ್ ಆಗಿದೆ ಜೈಡಸ್ ಲಸಿಕೆ ೧ ಕೋಟಿ ಬೇಡಿಕೆ ಇದೆ , ಮುಂದಿನ ವಾರದಿಂದ ಮಕ್ಕಳಿಗೆ ಲಸಿಕೆ ಶುರುವಾಗುವ ಸಾಧ್ಯತೆ ಇದೆ ಎಂದು ಸಚಿವರು ನುಡಿದರು.
ವೈದ್ಯಕೀಯ ಶಿಕ್ಷಣ ಶುಲ್ಕ ಸದ್ಯಕ್ಕೆ ಹೆಚ್ಚಳ ಇಲ್ಲ, ಪ್ರಸ್ತಾವನೆ ಬಂದಿರುವುದು ನಿಜ .ಶೇ. ೩೦ರಷ್ಟು ಹೆಚ್ಚಳಕ್ಕೆ ಮನವಿ ಮಾಡಿದ್ರು ಅದರ ಬಗ್ಗೆ ಇಂದು ಸಭೆ ಇದೆ. ಆದ್ರೆ ಪೋಷಕರ ಹಿತದೃಷ್ಟಿಯಿಂದ ಶುಲ್ಕ ಹೆಚ್ಚಳ ಇಲ್ಲ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.