ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಕಚೇರಿಯ ವಿಳಾಸ ದುರ್ಬಳಕೆ ಮಾಡಿದ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಈಗಾಗಲೇ ಅಂಥವರ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ತುಳುನಾಡ ರಕ್ಷಣಾ ವೇದಿಕೆ ಸಾರ್ವಜನಿಕರಲ್ಲಿ ವಿನಂತಿಸುವುದೆನಂದರೆ, ಸಾರ್ವಜನಿಕರು ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು/ ಸದಸ್ಯರೊಂದಿಗೆ ನಡೆಸುವ ಹಣಕಾಸಿನ ವ್ಯವಹಾರ ಅಥವಾ ಇನ್ನಾವುದೇ ಕಾನೂನು ವಿರೋಧಿ ಚಟುವಟಿಕೆಗಳಿಗೆ ಸಂಘಟನೆಯು ಜವಾಬ್ದಾರಿ ಆಗಿರುವುದಿಲ್ಲ ಸಂಘಟನೆಯ ಹೆಸರು ಅಥವಾ ವಿಳಾಸ ದುರ್ಬಳಕೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ತುಳುನಾಡ ರಕ್ಷಣಾ ವೇದಿಕೆ ಕಳೆದ 13 ವರ್ಷಗಳಿಂದ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಜನಪರ ಕೆಲಸ ಮಾಡುತ್ತಿದ್ದು. 1910 ಸದಸ್ಯರಾಗಿದ್ದಾರೆ ಅವರಲ್ಲಿ .1810 ಸದಸ್ಯರು ಸಕ್ರಿಯವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತುಳುನಾಡ ರಕ್ಷಣಾ ವೇದಿಕೆ ಬೆಂಬಲಿಸುತ್ತಿದ್ದಾರೆ.
ದೇಶ ವಿದೇಶಗಳಲ್ಲಿ ಸಾವಿರಾರು ಕಾರ್ಯಕರ್ತರನ್ನು ಹೊಂದಿದ್ದು. ತುಳುನಾಡ ಸೂರ್ಯ ಪತ್ರಿಕೆ ವಿಭಾಗ ,
ವಕೀಲರ ಘಟಕ, ಯುವ ಘಟಕ,ಕಾರ್ಮಿಕ ಘಟಕ, ಮಹಿಳಾ ಘಟಕ, ಅಟೋ ಮಾಲಕ ಚಾಲಕರ ಘಟಕ, ಆಂಬುಲೆನ್ಸ್ ಘಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಾಲೂಕಿನ ಘಟಕಗಳನ್ನು ಹೊಂದಿದೆ.
ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯ ಚಟುವಟಿಕೆಗಳ ಮಾಹಿತಿ ಬೇಕಾದಲ್ಲಿ
ಪ್ರಶಾಂತ್ ಭಟ್ ಕಡಬ
ಕೇಂದ್ರೀಯ ಕಚೇರಿ ಕಾರ್ಯದರ್ಶಿಗಳ ದೂರವಾಣಿ ಸಂಖ್ಯೆ 6362876286 ಸಂಪರ್ಕಿಸಿ.