ಅಜೆಕಾರು/ಉಡುಪಿ: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಉಡುಪಿ ಅಂಬಲಪಾಡಿ
ದೇವಾಲಯದ ಭವಾನಿಮಂಟಪದಲ್ಲಿ ಇಂದು (ಅಕ್ಟೋಬರ್ 16) ರಂದು ಆಯೋಜಿಸಿರುವ ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ 2022 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಮಂದಿಯನ್ನು ಐದು ಸಂಸ್ಥೆಗಳನ್ನು ಗುರುತಿಸಿ ತುಳುನಾಡ ರಜತ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರಲ್ಲಿ ಮುಖ್ಯವಾಗಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರಿಗೆ ತುಳುನಾಡ ರಜತ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೊವಾಯಿ ಕನ್ನಡ ಸೇವಾ ಸಂಘ ಮುಂಬಯಿ ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ.ತಲ್ಲೂರು ಶಿವರಾಮ ಶೆಟ್ಟಿ, ಎಂ.ಕೆ.ವಿಜಯಕುಮಾರ್ ಸಹಿತ ಗಣ್ಯರಿಂದ ಒಟ್ಟು 25 ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಈ ಸಂಧರ್ಬದಲ್ಲಿ ರಿಜಿಸ್ಟ್ರಾರ್ ,ಕನ್ನಡ ವಿಶ್ವವಿದ್ಯಾಲಯ ಹಂಪಿ ಡಾ. ಎ. ಸುಬ್ಬಣ್ಣ, ಡಾ.ನಿ.ಬೀ.ವಿಜಯ ಬಳ್ಳಾಲ್, ಬನ್ನಂಜೆ ಬಾಬು ಅಮೀನ್, ಡಾ.ತಾಳ್ತಜೆ ವಸಂತ ಕುಮಾರ್ , ಡಾ. ಶ್ರೀನಾಥ, ಉಡುಪಿ ವಿಶ್ವನಾಥ ಶೆಣೈ, ಡಾ. ಗಣನಾಥ ಎಕ್ಕಾರು, ಕರುಣಾಕರ ಬಂಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.