Friday, March 29, 2024
spot_img
More

    Latest Posts

    ಟೋಲ್ ಗೇಟ್ ಸಂಬಂಧಿಸಿ ಮಂಗಳವಾರ ಸಭೆ

    ಬಂಟ್ವಾಳ: ಟೋಲ್ ಗೇಟ್ ಸಮಸ್ಯೆಗೆ ಸಂಬಂಧಿಸಿ ಮಂಗಳವಾರ ಅಧಿಕಾರಿಗಳ ಸಭೆ ನಡೆಯಲಿದೆ. ಇದರಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಹ್ಮರಕೂಟ್ಲು ಮತ್ತು ಸುರತ್ಕಲ್ ಟೋಲ್ ಗೇಟ್ ತೆರವಿನ ಕುರಿತು ಈಗಾಗಲೇ ಜನರಿಗೆ ಆಕ್ಷೇಪಗಳಿವೆ. ತಲಪಾಡಿ, ಹೆಜಮಾಡಿಯಲ್ಲಿ ಎರಡು ಟೋಲ್‌ಗಳು ಹಾಗೂ ಬ್ರಹ್ಮರಕೂಟ್ಲು ಮತ್ತು ಎನ್.ಐ.ಟಿ.ಕೆ. (ಸುರತ್ಕಲ್)ನಲ್ಲಿ ಟೋಲ್‌ಗಳು ವಿವಿಧ ರಸ್ತೆ ನಿರ್ಮಾಣ ಕಂಪನಿಗಳು ಮಾಡಿವೆ. ಈ ಸಮಸ್ಯೆಗಳ ಕುರಿತು ಮಂಗಳೂರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಂದಾಗ ವಿವರಿಸಿದ್ದೆ. ಕಾನೂನಾತ್ಮಕ ತೊಡಕುಗಳು ಇಲ್ಲಿವೆ. ನವಯುಗ ಮತ್ತು ಇರ್ಕಾನ್ ಎರಡೂ ಕಂಪನಿಗಳು ಟೋಲ್ ಮಾಡಿವೆ. ಇದರ ನಿರ್ವಹಣೆ ಮತ್ತು ತೊಡಕುಗಳ ಪರಿಹಾರಕ್ಕಾಗಿ ಅಧಿಕಾರಿಗಳ ಸಭೆ ಮಂಗಳವಾರ ಮಧ್ಯಾಹ್ನ ನಡೆಯುತ್ತದೆ ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss