ಮಂಗಳೂರು: ಕಾಲೇಜು ಬಳಿ ತಲ್ವಾರ್ ಹಿಡಿದು ದಾಂದಲೆ ನಡೆಸಿದ ಪ್ರಕರಣದ ಅರೋಪಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ವಿಶ್ವಾಸ್ (22) ಬಂಧಿತ ಆರೋಪಿ, ಬಂಧಿತನಿಂದ ತಲ್ವಾರ್ ವಶಕ್ಕೆಪಡಿಸಿಕೊಳ್ಳಲಾಗಿದೆ.
ನಗರದ ಶ್ರೀದೇವಿ ಕಾಲೇಜು ಆವರಣದಲ್ಲಿ ಕ್ಷುಲ್ಲಕ ವಿಚಾರದಲ್ಲಿ ತಲ್ವಾರ್ ಹಿಡಿದು ಕೇರಳ-ಕರ್ನಾಟಕ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು.ಸ್ಕೂಟರ್ ಗುದ್ದಿದ ವಿಚಾರದಲ್ಲಿ ಕೇರಳ ವಿದ್ಯಾರ್ಥಿಗಳೊಂದಿಗೆ ಯುವಕರ ತಂಡವೊಂದು ವಾಗ್ವಾದ ನಡೆದಿತ್ತು.
ಇದನ್ನೇ ನೆಪವಾಗಿರಿಸಿ ತಲ್ವಾರ್ ಹಿಡಿದು ಕ್ಯಾಂಪಸ್ ಪ್ರವೇಶಿಸಿದ್ದ ಯುವಕರ ತಂಡ ತಲಾವಾರು ಹಿಡಿದು ದಾಂಧಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.