ಮಂಗಳೂರು:ಸ್ನಾನಕ್ಕೆ ಇಳಿದಿದ್ದ ಯುವಕ ನೀರುಪಾಲಾಗಿರುವ ಘಟನೆ ತಣ್ಣೀರು ಬಾವಿ ಸಮುದ್ರದಲ್ಲಿ ನಡೆದಿದೆ.
ತಣ್ಣೀರುಬಾವಿ ನಿವಾಸಿ ಮುಹಮ್ಮದ್ ಕೈಫ್(19) ಮೃತ ಯುವಕ.ಮುಹಮ್ಮದ್ ಕೈಫ್ ನಿನ್ನೆ ಮನೆಯ ಸಮೀಪದ ತಣ್ಣೀರುಬಾವಿ ಕಡಲಿನಲ್ಲಿ ಸ್ನಾನಕ್ಕೆಂದು ಹೋಗಿದ್ದು, ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ. ಘಟನೆಯಿಂದ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದ್ದು, ಕೈಪ್ ಗೆ ಹುಡುಕಾಟ ನಡೆಯುತ್ತಿದೆ.