ಉಡುಪಿ: ಸ್ವಿಗ್ಗಿ ಡೆಲಿವೆರಿ ಬಾಯ್ಸ್ ರವರುಗಳ ಹಲವು ಬೇಡಿಕೆಗಳನ್ನು ಸ್ವಿಗ್ಗಿ ಸಂಸ್ಥೆಯ ವ್ಯವಸ್ಥಾಪಕರಿಂದ ಬಗೆಹರಿಸಲು ಮೀನಾಮೇಷ ಆದ ಕಾರಣ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರಿಗೆ ಬೆಂಬಲ ನೀಡವಂತೆ ಮನವಿ ನೀಡಿದ್ದರು ಮನವಿಗೆ ಸ್ಪಂದಿಸಿ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರೊಂದಿಗೆ ಚರ್ಚಿಸಿ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ನಡೆಸಿ ಮಣಿಪಾಲ ಠಾಣಾಧಿಕಾರಿಗೆ ಮನವಿಮಾಡಿ ಮನವಿಗೆ ಸ್ಪಂದಿಸಿ ಮಣಿಪಾಲ ಠಾಣಾಧಿಕಾರಿಯವರು ಸ್ವಿಗ್ಗಿ ಸಂಸ್ಥೆಯವರನ್ನ ಕರೆಸಿ ಕಾರ್ಮಿಕರ ಬೇಡಿಕೆಯನ್ನು ಬಗೆಹರಿಸಿವಂತೆ ಸ್ವಿಗ್ಗಿ ಸಂಸ್ಥೆಯವರೊಂದಿಗೆ ಹೇಳಿದಾಗ ಸ್ವಿಗ್ಗಿ ಸಂಸ್ಥೆಯ ವ್ಯವಸ್ಥಾಪಕರು 15 ದಿವಸದ ಕಾಲವಕಾಶ ಕೇಳಿ ಕಾರ್ಮಿಕರ ಬೇಡಿಕೆಯನ್ನು ಬಗೆಹರಿಸಿವ ಸಂಪೂರ್ಣ ಬರವಸೆ ನೀಡಿದರು.
ಇದು ತುಳುನಾಡ ರಕ್ಷಣಾ ವೇದಿಕೆಗೆ ಸಂದ ಜಯ. ಮುಂದಿನ ದಿನಗಳಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಸದಿದ್ದಲ್ಲಿ ಸ್ವಿಗ್ಗಿ ಸಂಸ್ಥೆಯ ವಿರುದ್ಧ ತುಳುನಾಡ ರಕ್ಷಣಾ ವೇದಿಕೆಯು ಉಗ್ರ ಹೋರಾಟ ನಡೆಸಲಿದೆ.