ಮಂಗಳೂರು; ರಾತ್ರಿ ವೇಳೆ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಸಬಾ ಬೆಂಗ್ರೆಯ ನೌಶಾದ್ (30) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ರಾತ್ರಿ 1 ಗಂಟೆಯ ವೇಳೆಗೆ ಉತ್ತರ ಠಾಣಾ ಪೊಲೀಸರು ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ರೌಂಡ್ಸ್ ನಲ್ಲಿದ್ದಾಗ ನೌಶಾದ್ ಪೊಲೀಸ್ ವಾಹನವನ್ನು ಕಂಡು ಕತ್ತಲಿನಲ್ಲಿ ಓಡಲು ಪ್ರಯತ್ನಿಸಿದ್ದಾನ.ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಅಂಗಡಿ ಕಳ್ಳತನ ಅಥವಾ ಇನ್ಯಾವುದೋ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
©2021 Tulunada Surya | Developed by CuriousLabs