ಕೊಡಗು: ಮಹಿಳೆಯರಿಬ್ಬರು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಮೂರು ಲಕ್ಷ ರೂಪಾಯಿ ಸಬ್ಸಿಡಿ ಲೋನ್ ಮಾಡಿಸಿ ಕೊಡುತ್ತೇವೆ ಅಂತ ನೂರಾರು ಜನರಿಂದ ತಲಾ ಸಾವಿರ ರೂಪಾಯಿ ಹಣಪಡೆದು ಅಮಾಯಕ ಜನರಿಂದ ದೋಖಾ ಮಾಡಿದ್ದಾರೆ. ಹೌದು, ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಮಾದಾಪುರ, ಗುಮ್ಮನಕೊಲ್ಲಿ, ಏಳನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತ ಗ್ರಾಮಗಳ ನೂರಾರು ಜನರಿಗೆ ಮೋಸ ಮಾಡಿದ್ದಾರೆ.
ಸಂಕಷ್ಟದಲ್ಲಿರುವ ಎಷ್ಟೋ ಕುಟುಂಬಗಳು ಸಾಲ ಸಿಕ್ಕರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಮಹಿಳೆಯರು ಹೇಳಿದಂತೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡಿದ್ದಾರೆ.
ತಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದೇನೆ ಎಂದು ಜನರು ನಂಬಿಸಿ ದಾಖಲೆ ಪಡೆದುಕೊಂಡ ಮಹಿಳೆ ಕುಸುಮಾವತಿ ಇನ್ನೇನು ಲೋನ್ ಸ್ಯಾಂಕ್ಷನ್ ಆಗಿಬಿಡುತ್ತದೆ. ಹೀಗಾಗಿ ನಿಮಗೆ ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು ಅಂತ ಪ್ರತಿಯೊಬ್ಬರಿಂದ ಒಂದು ಸಾವಿರ ಹಣ ಪಡೆದುಕೊಂಡಿದ್ದಾಳೆ.
ಈಕೆಗೆ ಮಂಗಳೂರಿನಲ್ಲಿ ಕೆಲವರು ಪರಿಚಯವಾಗಿ ಈ ಕೆಲಸ ಮಾಡುವುಕ್ಕೆ ಪುಸಲಾಯಿಸಿದ್ದರು ಎನ್ನುವುದನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಸತ್ಯ ಕುಶಾಲನಗರ ಪೊಲೀಸರು ಕುಸುಮಾವತಿಯ ಹಿಂದೆ ಇರುವ ಗ್ಯಾಂಗ್ ಯಾವುದು ಅಂತ ಬಲೆ ಬೀಸಿ ತನಿಖೆ ಶುರು ಮಾಡಿದೆ.