ಪುತ್ತೂರು:ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪುತ್ತೂರು ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿ ನಡೆದಿದೆ.
ಪ್ರತಿಭಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ರಂಜಿತ್ ಮೃತ ವಿದ್ಯಾರ್ಥಿ. ರಂಜಿತ್ ಕೃಷ್ಣ ನಾಯ್ಕ್ ಮತ್ತು ಸರಸ್ವತಿ ದಂಪತಿ ಪುತ್ರನಾಗಿದ್ದಾನೆ.
ಬಾಲಕನೋರ್ವ ಮನೆಯಲ್ಲಿ ಕರೆಂಟ್ ಸರಿ ಇಲ್ಲ ಎಂದು ರಂಜಿತ್ ಗೆ ಟ್ರಾನ್ಸ್ಫರ್ ಪೆಟ್ಟಿಗೆ ಬಳಿ ಕರೆದುಕೊಂಡು ಹೋಗಿದ್ದಾನೆ.ಬಾಲಕ ರಂಜಿತ್ ವಿದ್ಯುತ್ ಕಂಬವೇರಿ ವಿದ್ಯುತ್ ಸರಿ ಪಡಿಸುತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ.
ಸಂಪ್ಯಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನೋರ್ವ ಹೇಗೆ ವಿದ್ಯುತ್ ಕಂಬಕ್ಕೆ ಹತ್ತಿದ, ಸ್ಥಳೀಯರ ಯಾರೂ ಇದನ್ನು ಗಮನಿಸಲ್ವ ಎನ್ನುವುದು ಪ್ರಶ್ನೆಯಾಗಿದೆ.