Friday, March 29, 2024
spot_img
More

    Latest Posts

    ಕಾರ್ಕಳ: ಸ್ನೇಹಿತನಿಂದಲೇ ಚೂರಿ ಇರಿತ,ಯುವಕ ಆಸ್ಪತ್ರೆಗೆ ದಾಖಲು

    ಕಾರ್ಕಳ: ಸ್ನೇಹಿತನೊಂದಿಗೆ ಮಾತಿಗೆ ಮಾತು ಬೆಳೆದು ಚೂರಿ ಇರಿದ ಘಟನೆ ಮಾಳದಲ್ಲಿ ನಡೆದಿದೆ. ನಾಗರಾಜ್ ಪೂಜಾರಿ ಇರಿತಕ್ಕೊಳಗಾದವರಾಗಿದ್ದು, ಭರತ್ ಚೂರಿ ಇರಿದ ಆರೋಪಿಯಾಗಿದ್ದಾರೆ.

    ನಾಗರಾಜ್ ಪೂಜಾರಿ ಹಾಗೂ ಭರತ್ ಆತ್ಮೀಯ ಸ್ನೇಹಿತರಾಗಿದ್ದು ಭರತ್ ನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದಕ್ಕೆ ನಾಗರಾಜ್ ಪೂಜಾರಿಯು ಚೂರಿಯನ್ನು ಕೈಯಲ್ಲಿ ಹಿಡಿದುಕೊಳ್ಳಬೇಡ ಎಂದು ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಭರತ್ ನು ಕೈಯಲ್ಲಿದ್ದ ಚೂರಿಯಿಂದ ನಾಗರಾಜ್ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ.ಕೂಡಲೇ ಗಾಯಗೊಂಡ ನಾಗರಾಜ್ ನನ್ನು ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಭರತ್ ನು ತನ್ನ ಸ್ನೇಹಿತ ಎಂಬ ಕಾರಣಕ್ಕೆ ಈ ಬಗ್ಗೆ ಠಾಣೆಗೆ ದೂರು ನೀಡದೇ ಮುಚ್ಚಿಟ್ಟಿದ್ದ.ನಿನ್ನೆ ದಿನ ಸಂಜೆ ನಾಗರಾಜ್ ಗೆ ನೋವು ಜಾಸ್ತಿಯಾಗಿದ್ದರಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ವೇಳೆ ವಿಚಾರ ಬೆಳಕಿಗೆ ಬಂದಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss