ಉಳ್ಳಾಲ: ಇಂದು SKPA ಉಳ್ಳಾಲ ವಲಯದ ವತಿಯಿಂದ ಕುಂಪಲ ಶಾಲೆಯ ಬಳಿಯಲ್ಲಿ ತಿರುವು ಕನ್ನಡಿ ಅಳವಡಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಬಾಲಕೃಷ್ಣ ಮಂದಿರದ ಅಧ್ಯಕ್ಷರು ಶ್ರೀ ಸತೀಶ್ ಕುಂಪಲ ಹಾಗೂ SKPA ಜಿಲ್ಲಾಧ್ಯಕ್ಷರು ಶ್ರೀ ಆನಂದ್ ಬಂಟ್ವಾಳ ತಿರುವು ಕನ್ನಡಿಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಕೇಸರಿ ಮಿತ್ರ ಮಂಡಳಿಯ ಉಪಾಧ್ಯಕ್ಷರು ಶ್ರೀ ನವೀನ್ ಕುಜುಮ ಗದ್ದೆ, SKPA ಉಳ್ಳಾಲ ವಲಯದ ಅಧ್ಯಕ್ಷರು ಶ್ರೀ ತನುಂಜಯ ರಾವ್, ಉಪಾಧ್ಯಕ್ಷರು ಶ್ರೀ ಪ್ರವೀಣ್ ಬೀರಿ, ಕಾರ್ಯದರ್ಶಿ ನಾಗರಾಜ್, ಕೋಶಾಧಿಕಾರಿ ಕಿರಣ್ ಉಳ್ಳಾಲ್, ಜೊತೆ ಕಾರ್ಯದರ್ಶಿ ಸಿದ್ದೀಕ್,SKPA ಸಹಕಾರಿ ಸಂಘದ ನಿರ್ದೇಕರು ಶ್ರೀ ಸಂತೋಷ್ ಮಾರ್ಲ, SKPA ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಾಜೇಶ್ ತೊಕ್ಕೊಟ್ಟು, ಗೌರವ ಅಧ್ಯಕ್ಷರು ಚಿದಾನಂದ್, ಉಮೇಶ್ ಉಳ್ಳಾಲ್, ಅಶೋಕ್ ಉಳ್ಳಾಲ್, ಗಣೇಶ್ ಮುಂಡೋಲಿ, ಸುರೇಶ್ ಅಸೈಗೋಳಿ, ರಾಜೇಶ್ ಉಚ್ಚಿಲ್, ಮಹೇಶ್, ಮಿಥುನ್, ಅಕ್ಷಯ ಜನರಲ್ ಸ್ಟೋರ್ ಮಾಲಿಕರಾದ ಉಮೇಶ್ ಹಾಗೂ ಪರಿಸರದ ಹಿತೈಷಿಗಳು ಉಪಸ್ಥಿತರಿದ್ದರು.