ಮಂಗಳೂರು: ಮಂಗಳೂರಿನ ತಣ್ಣೀರು ಬಾವಿ ಬೀಚ್ನಲ್ಲಿ ಖ್ಯಾತ ಮರಳು ಶಿಲ್ಪ ಕಲಾವಿದ ಹರೀಶ್ ಅವರು ಕನ್ನಡದ ಖ್ಯಾತ ನಟ, ಪುನೀತ್ ರಾಜ್ ಕುಮಾರ್ ಅವರ ಮರಳು ಶಿಲ್ಪವನ್ನು ರಚಿಸುವ ಮೂಲಕ ಅಗಲಿದ ಅಪ್ಪು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಈ ವೇಳೆ ಮಾತನಾಡಿದ ಹರೀಶ್ ಆಚಾರ್ಯ ಅವರು, “ನಾನು ಹಾಗೂ ನನ್ನ ಸ್ನೇಹಿತರು ಸೇರಿ ಪುನೀತ್ ರಾಜ್ ಕುಮಾರ್ ಅವರ ಮರಳು ಶಿಲ್ಪವನ್ನು ರಚಿಸಿದ್ದೇವೆ. ಇದನ್ನು ರಚಿಸಲು ನಮಗೆ 4-5 ಗಂಟೆ ಬೇಕಾಯಿತು. ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲೇಂದೇ ನಾವು ಈ ಮರಳು ಶಿಲ್ಪವನ್ನು ರಚಿಸಿದ್ದೇವೆ” ಎಂದು ತಿಳಿಸಿದ್ದಾರೆ.