ಪುತ್ತೂರು: ಇಂದು ಕೆದಂಬಾಡಿ ಗಾಮಪಂಚಾಯತ್ ಹಾಗೂ ಆಸರೆ ಸಂಜೀವಿನಿ ಒಕ್ಕೂಟ ದ ಆಶ್ರಯದಲ್ಲಿ ಸಂಜೀವಿನಿ ಗ್ರಾಮೀಣ ರೈತ ಸಂತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ರತನ್ ರೈ ರವರು ಉದ್ಘಾಟಿಸಿ ಮಹಿಳೆಯರು ಸ್ವಾವಲಂಬಿಗಳಾಗಲು ಒಳ್ಳೆಯ ಅವಕಾಶ ಎಂದು ಶುಭ ಹಾರೈಸಿದರು.
ಪುತ್ತೂರು, ಕಡಬ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಜಗತ್ ರವರು ಮಾತಾಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಮ್ಮ ಮನೆಯಲ್ಲಿ ಬೆಳೆದ ತರಕಾರಿ,ಹಾಗೂ ಇತರ ಆಹಾರೋತ್ಪನ್ನ ಗಳನ್ನು ಮಾರಾಟ ಮಾಡಲು ಒಳ್ಳೆಯ ಅವಕಾಶ ಎಂದರು., ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಜಿತ್ , ಉಪಾಧ್ಯಕ್ಷರಾದ ಭಾಸ್ಕರ್ ರೈ ಮಿತ್ರಂಪಾಡಿ, ಪಂಚಾಯತ್ ಸದಸ್ಯರು ಆಸರೆ ಸಂಜೀವಿನಿ ಒಕ್ಕೂಟ ದ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ ವರ್ಗ, ಹಾಗೂ ಪಂಚಾಯತ್ ಕಾರ್ಯದರ್ಶಿ ಎ ಗ್ರೆಡ್ ಶ್ರೀಮತಿ ಸುನಂದಾ ರವರು ಕಾರ್ಯಕ್ರಮ ನಿರೂಪಿಸಿದರು, LCRP ಪೂರ್ಣಿಮಾ ವಂದನಾರ್ಪಣೆ ಮಾಡಿದರು. BRP-EP ಕಮಲಾಕ್ಷಿ, MBK ಶುಭ, lcrp ಜಯಲತಾ, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.