ಮುಂಬೈ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ಅಜೆಕಾರು ಕಲಾಭಿಮಾನಿ ಬಳಗ (ರಿ) ಮುಂಬಯಿ ಇದರ 21ನೇ ವಾರ್ಷಿಕೋತ್ಸವ ಪ್ರಯುಕ್ತ ಏಕ ವಿಂಶತಿ ಕಲಾ ಸಂಭ್ರಮ ಕಾರ್ಯಕ್ರಮವು ಸೆ.11ರಂದು ಮುಂಬಯಿಯ ಶ್ರೀಮತಿ ರಾದಾಬಾಯಿ ತಿಮ್ಮಪ್ಪ ಭಂಡಾರಿ ಸಭಾ ಭವನದಲ್ಲಿ ನಡಯಿತು.
ಕಾರ್ಯಕ್ರಮದಲ್ಲಿ ಮುಂಬೈ ಮಹಾನಗರದಲ್ಲಿ ತಲಪಾಡಿಯ ಕೀರ್ತಿ ಪತಾಕೆಯನ್ನು ಹಾರಿಸಿದ ಪ್ರಸಿದ್ದ ಯಕ್ಷಗಾನ ಕಲಾವಿದ ಶ್ರೀ ದುರ್ಗಾ ಸೇವಾ ಸಮಿತಿ ತಲಪಾಡಿ ಇದರ ಸದಸ್ಯ, ತಲಪಾಡಿಯ ಸದಾಶಿವ ಆಳ್ವ ಇವರಿಗೆ ಹಲವಾರು ಗಣ್ಯರ ಸಮ್ಮುಖದಲ್ಲಿ ಕುಟುಂಬದ ಸದಸ್ಯರನ್ನು ಸೇರಿಸಿ ಅದ್ದೂರಿಯ ಸನ್ಮಾನ ಸಮಾರಂಭ ನಡೆಯಿತು.