ತಮ್ಮ ಸಂಘಟನೆ ವಿರುದ್ಧ ಅವಹೇಳನಕಾರಿ ವಿಚಾರ ಪ್ರಕಟಿಸಿದ ಸುದ್ದಿ ಸಂಸ್ಥೆ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ
ಸಂಘದ (RSS) ಸದಸ್ಯರು ನೀಡಿದ ದೂರನ್ನು IPC ಸೆಕ್ಷನ್ 499ರ ಅಡಿ ವಿಚಾರಣೆ ನಡೆಸಬಹುದು ಎಂದು ಕೇರಳ
ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಕೇರಳ ಹೈಕೋರ್ಟ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ನ ಮಧ್ಯಪ್ರವೇ ಮಾಡುವ ಯಾವುದೇ ಪ್ರಶ್ನೆ ಇಲ್ಲ ಎಂದು ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಹೇಳಿದ್ದು, ಮಾತೃಭೂಮಿ ಪ್ರಿಂಟಿಂಗ್ ಮತ್ತು
ಪಬ್ಲಿಷಿಂಗ್ ಕಂಪೆನಿಯ ಮನವಿಯನ್ನು ವಜಾಗೊಳಿಸಿದೆ. RSS ಒಂದು ನಿರ್ದಿಷ್ಟ ಮತ್ತು ಗುರುತಿಸಲ್ಪಡುವ ಸಂಸ್ಥೆ. ಈ
ಸಂಘಟನೆಯನ್ನು ದೂಷಿಸುವ ಲೇಖನಗಳ ವಿರುದ್ಧ ದೂರು ನೀಡಲು ಅದರ ಸದಸ್ಯರಿಗೆ ಕಾನೂನಾತ್ಮಕ ಅಧಿಕಾರ
(Locus Standy) ಇದೆ ಎಂದು ಪ್ರಕರಣದ ಕುರಿತು ತೀರ್ಪು ನೀಡಿದ್ದ ಕೇರಳ ಹೈಕೋರ್ಟ್ ಹೇಳಿತ್ತು.
ಈ ತೀರ್ಪು ಹಿನ್ನೆಲೆಯಲ್ಲಿ ಇನ್ನೂ ಮುಂದೆ ಸಂಘಟನೆಗಳ ಬಗ್ಗೆ ಯಾರಾದರೂ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದಲ್ಲಿ ಅಂತಹ ವಿರೋಧಿ ಬರಹದ ವಿರುದ್ಧ ಸಂಘಟನೆಯ ಸದಸ್ಯರು ಮಾನನಷ್ಟ ಮೊಕದ್ದಮೆ ಹೂಡಬಹುದು.
