ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರೋಹಿತ್ ಕರಂಬಳ್ಳಿ ,ಪ್ರಧಾನ ಕಾರ್ಯದರ್ಶಿ ಆಝರುದ್ದೀನ್ ಸುಬ್ರಹ್ಮಣ್ಯ ನಗರ ಆಯ್ಕೆಯಾಗಿದ್ದರೆ.
ರೋಹಿತ್ ಕರಂಬಳ್ಳಿ ಈ ಹಿಂದೆ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದು ಈದೀಗ ನೂತನ ಜಿಲ್ಲಾಧ್ಯಕ್ಷರಾಗಿದ್ದು ಆಯ್ಕೆ ಯಾಗಿದ್ದು ತುಳು ಭಾಷೆ ಸಾಹಿತ್ಯ ಸಾಂಸ್ಕೃತಿಕ ಏಳಿಗೆ ಶ್ರಮಿಸಲು ಅವಕಾಶ ಸಿಕ್ಕಂತಾಗಿದೆ ಎಂದು ರೋಹಿತ್ ಕರಂಬಳ್ಳಿ ತಿಳಿಸಿದ್ದಾರೆ. ಹಾಗೂ ನನ್ನ ಸೇವೆ ಗುರುತಿಸಿ ಮಗದೊಮ್ಮೆ ಅವಕಾಶ ನೀಡಿದ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರಿಗೆ ಧನ್ಯವಾದ ಅರ್ಪಿಸಿದರು.