ಮಂಗಳೂರು: ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿಗೆ ಮರವೊಂದು ಬಿದ್ದಿದ್ದನ್ನ ಕಂಡು ಅನಾಹುತ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ವೃದ್ದೆಯ ಸಾಹಸ ಮೆರೆದಿದ್ದು, ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸುಮಾರು 2.10ರ ಸುಮಾರಿಗೆ ಆಯರಮನೆ ಸಮೀಪ ರೈಲು ಹಳಿಗೆ ಮರವೊಂದು ಬಿದ್ದಿದ್ದನು ಕಂಡು ಚಾಣಾಕ್ಷತನದಿಂದ 70 ವರ್ಷ ವೃದ್ದೆ ಚಂದ್ರವತಿ ಎಂಬಾಕೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಬರುವ ಸಮಯಕ್ಕೆ ಸರಿಯಾಗಿ ಮನೆಗೆ ಓಡಿ ಕೆಂಪು ಬಟ್ಟೆ ತಂದು ರೈಲು ನಿಲ್ಲಿಸಲು ಮುಂದಾಗಿದ್ದಲ್ಲದೇ, ಭಾರೀ ಅನಾಹುತವೊಂದು ತಪ್ಪಿಸಿದ್ದಾರೆ.
ಈಕೆಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಈ ವಿಚಾರ ತಿಳಿದು ಬಳಿಕ ಸುಮಾರು ಅರ್ಧ ತಾಸಿನ ಬಳಿಕ ಮರ ತೆರವು ಮಾಡಲಾಗಿದೆ ಎಂದು ವರದಿಯಾಗಿದೆ.