Friday, April 19, 2024
spot_img
More

    Latest Posts

    ಮಡಂತ್ಯಾರ್: ಲಕ್ಷ ದೀಪೋತ್ಸವದ ಪ್ರಯುಕ್ತ 10ನೇ ವರ್ಷದ ಪಾದಯಾತ್ರೆ ಪೂರ್ವ ತಯಾರಿ ಸಭೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ .ಟ್ರಸ್ಟ್ (ರಿ) ಗುರುವಾಯನಕೆರೆ ಮಡಂತ್ಯಾರ್ ವಲಯದ ಮಡಂತ್ಯಾರ್ ಶ್ರೀ ಗಣಪತಿ ಮಂಟಪದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ 10ನೇ ವರ್ಷದ ಪಾದಯಾತ್ರೆ ಪೂರ್ವ ತಯಾರಿ ಸಭೆಯನ್ನು ನಡೆಸಲಾಯಿತ್ತು .ಈ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷರು ಜಯಂತ್ ಶೆಟ್ಟಿ ವಹಿಸಿದ್ದರು ಕಾರ್ಯಕ್ರಮ ದ ಪ್ರಾಸ್ತಾವಿಕವನ್ನು ಪುಷ್ಪರಾಜ್ ಹೆಗ್ಡೆ ಮಾತಾನಾಡುತ್ತ ಮಡಂತ್ಯಾರ್ ವಲಯದಿಂದ1200ಮಂದಿ ಪಾದಯಾತ್ರೆಗೆ ಭಾಗವಹಿಸುತ್ತಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ಯಶವಂತ್.ಎಸ್ ಮಾತಾನಾಡುತ್ತ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದರು ,ಪಾರೆಂಕಿ ದೇವಸ್ಥಾನದ ಅರ್ಚಕರು ಶ್ರೀಧರ ಭಟ್. ವಲಯದ ಅಧ್ಯಕ್ಷ ರು ಸತೀಶ್ ಆಚಾರ್ಯ,ಮಡಂತ್ಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಸಂಗೀತ ಶೆಟ್ಟಿ, ಮಹಾವೀರ ಮೆಡಿಕಲ್ ಮಾಲಕರು ಉದಯಕುಮಾರ್ ಜೈನ್, ತಾಲ್ಲೂಕು ಜನಜಾಗೃತಿ ಸದಸ್ಯರಾದ ಪದ್ಮನಾಭ ಸಾಲ್ಯಾನ್ ಮತ್ತು,ಪದ್ಮನಾಭ ಆಟಲಾ,ಹಾಗೂ ಶ್ರೀಮತಿ ತುಳಸಿ ಹಾರಬೆ, ರತ್ನಕರ ಶೆಟ್ಟಿ ಹಂಸರಾಜ್ ಬುಣ್ಣು , ನೃಪರಾಜ್ ಬಂಗೇರ, ಪದ್ಮನಾಭ ಅರ್ಕಜೆ, ಮೇಲ್ವಿಚಾರಕರು ಶೇಖರ್, ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು,ಪದಾಧಿಕಾರಿಗಳು,ಗ್ರಾಮ ಸಮಿತಿ ಅಧ್ಯಕ್ಷರು,ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.ಕಾರ್ಯಕ್ರಮ ದ ಸ್ವಾಗತವನ್ನು ಮಡಂತ್ಯಾರ್ ವಲಯದ ಮೇಲ್ವಿಚಾರಕ ವಸಂತ ಕುಮಾರ್ ಮಾಡಿದರು. ಧನ್ಯವಾದ ಪಾರೆಂಕಿ ವಿಭಾಗದ ಸೇವಾಪ್ರತಿನಿಧಿ ಶ್ರೀಮತಿ ಶೋಭಾರವರು ಮಾಡಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss