Friday, April 19, 2024
spot_img
More

    Latest Posts

    ಮಂಗಳೂರು: ಬೆಂಗಳೂರಿನ ಯುವಕ ಪಣಂಬೂರು ಬೀಚ್ ನಲ್ಲಿ ಸಮುದ್ರಪಾಲು

    ಮಂಗಳೂರು: ಸಮುದ್ರ ವಿಹಾರಕ್ಕೆಂದು ಬಂದು ಪಣಂಬೂರಿನಲ್ಲಿ ಕಡಲಿಗಿಳಿದ ಬೆಂಗಳೂರಿನ ಯುವಕನೋರ್ವ ಸಮುದ್ರಪಾಲಾದ ಘಟನೆ ಇಂದು ನಡೆದಿದೆ. ಬೆಂಗಳೂರಿನ ದಿನೇಶ್(20) ನೀರು ಪಾಲಾಗಿರುವ ಯುವಕ.

    ನಿನ್ನೆ ರಾತ್ರಿ ಕಾರು ಮಾಡಿಕೊಂಡು 8 ಮಂದಿ ಯುವಕರ ತಂಡ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು. ಇಂದು ಮಧ್ಯಾಹ್ನ ಅವರು ಪಣಂಬೂರು ಬೀಚ್ ಗೆ ಆಗಮಿಸಿದ್ದರು. ಈ ವೇಳೆ ಮೋಜು ಮಾಡಲೆಂದು ಸಮುದ್ರಕ್ಕಿಳಿದ ದಿನೇಶ್ ಸಮುದ್ರದಲೆಗೆ ಕೊಚ್ಚಿಕೊಂಡು ಹೋಗಿದ್ದಾರೆ.

    ಅವರೊಂದಿಗೆ ಬಂದಿದ್ದ ತಂಡದ ಇತರರು ದಿನೇಶ್ ರಕ್ಷಣೆಗೆ ಯತ್ನಿಸಿದರೂ, ಅವರು ಸಮುದ್ರಪಾಲಾಗಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಮುಂದುವರಿದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss