ಮಂಗಳೂರು: ಶೇಡಿಗುರಿಯಿಂದ ಸ್ಟೇಟ್ ಬ್ಯಾಂಕ್ಗೆ ಬರುವ 31, 31ಎ, 31ಬಿ ಮತ್ತು 15 ನಂಬ್ರ ಬಸ್ಗಳ ಕಾರ್ಯ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಅಶೋಕನಗರ ಯುವಕ ಸಂಘವು ಉರ್ವ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದೆ.
ಬಸ್ಗಳು ಕ್ಲಪ್ತ ಸಮಯದಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳುವಂತೆ ಈ ವೇಳೆ ಆಗ್ರಹಿಸಲಾಯಿತು. ಈ ಬಗ್ಗೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸ್ ಮಾಲಕರನ್ನು ಕರೆದು ಪ್ರಯಾಣಿಕರಿಗೆ ಆಗುವ ತೊಂದರೆಗಳನ್ನು ನಿವಾರಿಸಲು ತಿಳಿಸಿದರು. ಬಸ್ತಂಗುದಾಣದಲ್ಲಿ ಬಸ್ ವೇಳಾಪಟ್ಟಿಯಿದ್ದರೂ ಅದರ ಪ್ರಕಾರ ಬಸ್ ಬರುವುದಿಲ್ಲ, ಬಸ್ಸಿನ ಸಿಬಂದಿ ಮನ
ಬಂದಂತೆ ಬಸ್ ಚಲಾಯಿಸುವುದು. ಮಾತ್ರವಲ್ಲದೆ ಅಸಭ್ಯವಾಗಿ ವರ್ತಿಸುತ್ತಾರೆ. ಟಿಕೆಟ್ ಕೊಡುವುದಿಲ್ಲ, ಚಿಲ್ಲರೆ ಹಣ ಹಿಂದಿರುಗಿಸಲು ಬಹಳಷ್ಟು ಸತಾಯಿಸುತ್ತಾರೆ. ರಾತ್ರಿ 7 ಗಂಟೆಯ ಅನಂತರ ಶೇಡಿಗುರಿಯಿಂದ ಪ್ರಯಾಣಿಕರಲ್ಲಿ ಅತ್ಯಂತ ಸ್ಟೇಟ್ ಬ್ಯಾಂಕಿಗೆ ಹೋಗಲು ಹಾಗೂ ಸ್ಟೇಟ್ ಬ್ಯಾಂಕಿನಿಂದ ಶೇಡಿಗುರಿಗೆ ಬರಲು ರಾತ್ರಿ 8 ಗಂಟೆಯ ಬಳಿಕ ಯಾವುದೇ ಬಸ್ ಗಳು ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಯಾಣಿಕರು ವಿಚಾರಿಸಿ ದಾಗ ಚಾಲಕರು, ನಿರ್ವಾಹಕರು ಉಡಾ ಫೆಯ ಮಾತನ್ನಾಡಿ ಬಸ್ ಚಲಾಯಿಸಿ ಹೋಗುತ್ತಾರೆ. ಸಬ್ಇನ್ ಈ ಬಗ್ಗೆ ಉರ್ವ ಸ್ಟೇಶನ್ ಸ್ಪೆಕ್ಟರ್ ಮಾಲಕರಿಗೆ ಎಚ್ಚರಿಕೆ ನೀಡಿ ಕ್ಲಪ್ತ ಸಮಯದಲ್ಲಿ ಬಸ್ಗಳನ್ನು ಓಡಿಸುವಂತೆ, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ, ಟಿಕೆಟ್ ನೀಡಿ ಸರಿಯಾದ ಚಿಲ್ಲರೆ ಯನ್ನು ಹಿಂದಿರುಗಿಸಬೇಕೆಂದು ತಿಳಿಸಿದರು. ಇದಕ್ಕೆ ಬಸ್ ಮಾಲಕರು ಒಪ್ಪಿ ಯಾವುದೇ ತೊಂದರೆಯಾಗದಂತೆ ನಾವು ನಮ್ಮ ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತೇವೆಂದು ತಿಳಿಸಿರುವರು. ಅಶೋಕ ನಗರ ಯುವಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ದಂಬೇಲ್ ಫ್ರೆಂಡ್ಸ್ನ ಸದಸ್ಯರು, ತುಳುನಾಡ ರಕ್ಷಣಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.