ಇರ್ವತ್ತೂರು ಗ್ರಾಮ ಪಂಚಾಯತ್ ನ ನೂತನ ಆಟಲ್ ಜೀ ಸಭಾಂಗಣವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಆದಿತ್ಯವಾರ (ಮೇ-15) ದಂದು ಲೋಕಾರ್ಪಣೆಗೊಳಿಸಿದರು. ದೀಪ ಬೆಳಗಿಸಿ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಜೋಯಲ್ ಪ್ರಶಾಂತ್ ಅವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಶಾಸಕರು ಗ್ರಾಮ ಪಂಚಾಯತಿಯ ಬಗ್ಗೆ ಮೆಚ್ಚುಗೆ ಮಾತನಾಡಿ 2021-22 ನೇ ಸಾಲಿನ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೆಲಸದ ಆದೇಶವನ್ನು ನೀಡಿದರು. ಹಾಗೂ ನೂತನ ಸಭಾಂಗಣದ ಕೆಲಸವನ್ನು ನಿರ್ವಹಿಸಿದ ಗುತ್ತಿಗೆದಾರರಾದ ದಿನೇಶ್ ರೈ ಅವರನ್ನು ಸನ್ಮಾನಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಎಂ. ಪಿ. ಶೇಖರ್, ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಸದಸ್ಯರಾದ ಶ್ರೀ ಶುಭಕರ ಶೆಟ್ಟಿ, ಶ್ರೀ ಸುಧೀಂದ್ರ ಶೆಟ್ಟಿ, ಶ್ರೀಮತಿ ಮಾಲತಿ, ಶ್ರೀ ಪ್ರಶಾಂತ್ ಜೈನ್ , ಶ್ರೀಮತಿ ವಿಜಯ, ಕು. ಸುಚಿತ್ರ ಶೆಟ್ಟಿ, ಶ್ರೀ ದಯಾನಂದ ಎಸ್, ಶ್ರೀಮತಿ ಕಲ್ಯಾಣಿ, ಗ್ರಾ. ಪಂ ಕಾರ್ಯದರ್ಶಿ ನಾರಾಯಣ ನಾಯ್ಕ್, ಗ್ರಾ.ಪಂ ಸಿಬ್ಬಂದಿಗಳು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ತುಂಗಪ್ಪ ಬಂಗೇರ, ಮಾಜಿ ತಾ.ಪಂ ಸದಸ್ಯರಾದ ರಮೇಶ್ ಕುಡುಮೇರು, ಮಾಜಿ ಗ್ರಾ.ಪಂ ಉಪಾಧ್ಯಕ್ಷರಾದ ಶಂಕರ ಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದರು. ಭರತ್ ರಾಜ್ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.