ಬಂಟ್ವಾಳ : ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವರೆಗೆ ನಡೆದ ಚುನಾವಣೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ಬೆಂಬಲಿತ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.
ನೆಲ್ಲಿಗುಡ್ಡೆ ಕಳಾಯಿ ಚಂದ್ರಮೌಳೀಶ್ವರ ಹಿ.ಪ್ರಾ.ಶಾಲೆಯಲ್ಲಿ ಮಾ.೩ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಇತರ ನಾಮ ಪತ್ರ ಸಲ್ಲಿಕೆಯಾಗದೆ ಯಾವುದೇ ಸ್ಪರ್ಧೆ ಇಲ್ಲದ ಕಾರಣ ಚುನಾವಣೆ ರದ್ದಾಗಿತ್ತು. ಇದರಿಂದಾಗಿ ಸ್ಪರ್ಧೆ ಇಲ್ಲದೆ ಎಲ್ಲ ೧೨ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ. ರಿಟರ್ನಿಂಗ್ ಆಫೀಸರ್ ಎನ್.ಜೆ. ಗೋಪಾಲ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಬಳಿಕ ಮಾ.೫ರಂದು ಸಂಘದ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಆಯ್ಕೆ ನಡೆಯಿತು. ಬಿ.ಪದ್ಮಶೇಖರ ಜೈನ್ ಅವರು ಅಧ್ಯಕ್ಷರಾಗಿ, ಸದಾಶಿವ ಪ್ರಭು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಮಾರಪ್ಪ ಪೂಜಾರಿ, ಲಿಂಗಪ್ಪ ಬಂಗೇರ, ಆನಂದ ಬಂಗೇರ, ಬಾಲಕೃಷ್ಣ ಶೆಟ್ಟಿ.ಪಿ., ಕಿಶೋರ್ಶೆಟ್ಟಿ, ಉಮೇಶ್ ನಾಯಕ್, ಜಯರಾಮ ನಾಕ, ನೀಲಯ್ಯ ಪೂಜಾರಿ, ಸುಜಾತಾ, ಮೋಹಿನಿ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ಸದಸ್ಯರ ವತಿಯಿಂದ ಅಭಿನಂದಿಸಲಾಯಿತು. ಸರ್ವಾನುಮತದಿಂದ ಅಧ್ಯಕ್ಷರಾನ್ನಾಗಿ ಆಯ್ಕೆ ಮಾಡಿದುದಕ್ಕೆ ಪದ್ಮಶೇಖರ ಜೈನ್ ಅವರು ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ವೇದಾವತಿ ಉಪಸ್ಥಿತರಿದ್ದರು.