Tuesday, April 16, 2024
spot_img
More

    Latest Posts

    ಫೆ.16 ರಂದು ಅರಿಯಪ್ಪಾಡಿ ತೆಮಾರ್ ಮೈದಾನದಲ್ಲಿ “ನಾಗತಂಬಿಲ” ಯಕ್ಷಗಾನ ಬಯಲಾಟ

    ತುಳುನಾಡಿನ ಗಂಡುಕಲೆಯೆಂದೇ ಪ್ರಸಿದ್ದಿ ಪಡೆದ ಯಕ್ಷಗಾನ ಕಲಾರೂಪವೂ ದಿನಾಂಕ 16-02-2022 ನೇ ಬುಧವಾರದಂದು ರಾತ್ರಿ 7.00 ಗಂಟೆಗೆ ಸರಿಯಾಗಿ ಅರಿಯಪ್ಪಾಡಿ ತೆಮಾರ್ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಕಳವಾರು ಬಾಳ ಮೇಳದಿಂದ ಶ್ರೀ ರವಿಕುಮಾರ್ ಸುರತ್ಕಲ್ ವಿರಚಿತ ನಾಗತಂಬಿಲ ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಗೆಜ್ಜೆದ ಪೂಜೆ ಖ್ಯಾತಿಯ ಡಿ ಮನೋಹರ್ ಕುಮಾರ್ ರವರು ಈ ಪ್ರಸಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ನೆರೆದ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.
    ಗ್ರಾಮ ವಿಕಾಸ ಸಮಿತಿ ಮುಗು ಅರಿಯಪ್ಪಾಡಿ ಮುಂಡಿತ್ತಡ್ಕ ಇವರ ನೇತೃತ್ವದಲ್ಲಿ ನಡೆಯುವ ಈ ಯಕ್ಷಗಾನ ಬಯಲಾಟವು ಕೊರೋನಾದ ಹಾವಳಿಯಿಂದ ಕಂಗೆಟ್ಟ ಕಲಾವಿದರಿಗೆ ಪುನಶ್ಚೇತನ ನೀಡುವ ಉದ್ದೇಶವನ್ನು ಹೊಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss