ಮಂಗಳೂರು: ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಎಸ್ ರಾವ್ ರೋಡ್ ಬಳಿ ನಡೆದಿದೆ. ಅಲ್ಲಿನ ಕರುಣಾ ಲಾಡ್ಜ್ ನಲ್ಲಿ ಮೈಸೂರು ಮೂಲದ ದೇವೇಂದ್ರ(48) ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೆಂದ್ರ ಅವರು ಎರಡು ಹೆಣ್ಣು ಮಕ್ಕಳ ಸಹಿತ ಆತ್ಮಹತ್ಯೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವೇಂದ್ರ ಅವರು ಹೆಂಡತಿ ಮಕ್ಕಳಿಗೆ ವಿಷ ನೀಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವೆಂದ್ರ ಅವರು ಮೈ ಸೂರಿನ ವಾಣಿವಿಲಾಸ ಬಡಾವಣೆ ನಿವಾಸಿವಾಗಿದ್ದು, ಮಂಗಳೂರಿನ ಕೆಎಸ್ ರಾವ್ ರೋಡ್ ಬಳಿಯ ಕರುಣಾ ಲಾಡ್ಜ್ನಲ್ಲಿ ಕುಟುಂಬ ಸಮೇತ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.