Friday, March 29, 2024
spot_img
More

    Latest Posts

    ರಾಷ್ಟ್ರಪತಿ ಮುರ್ಮು ವಿರುದ್ಧ ಅವಹೇಳನಕಾರಿ‌ ಬರಹ; ಕ್ಷಮೆಯಾಚಿಸಿದ ವಿಶ್ವೇಶ್ವರ ಭಟ್

    ಬೆಂಗಳೂರು:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಕಾರಿಯಾಗಿ ಬರಹ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ ದಿನಪತ್ರಿಕೆಯೊಂದರ ಸಂಪಾದಕ ವಿಶ್ವೇಶ್ವರ ಭಟ್‌ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಹಾಜರಾಗಿ ಕ್ಷಮೆ ಯಾಚಿಸಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಹಾಜರಾಗಿರುವ ವಿಶ್ವೇಶ್ವರ ಭಟ್‌ ಕ್ಷಮೆಯಾಚಿಸಿ,ರಾಷ್ಟ್ರಪತಿ ಅವರನ್ನು ಅವಮಾನಿಸುವ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.

    ಈ ಕುರಿತು ನೀಡಿದ ಕ್ಷಮಾಪನಾ ಪತ್ರವನ್ನು ರಾಷ್ಟ್ರೀಯ ಮಹಿಳಾ ಆಯೋಗವು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದೆ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.

    ಮುಹಮ್ಮದ್ ಮಫಾಝ್ ಎಂಬವರು ಅಕ್ಟೋಬರ್ 9ರಂದು ಈ ಕುರಿತು ಟ್ವೀಟ್ ಮಾಡಿದ್ದರು. ‘ವಿಶ್ವವಾಣಿ’ಯ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿದ್ದ ಲೇಖನದ ಎರಡು ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದರು. ಜತೆಗೆ ಟ್ವೀಟ್‌ ನ್ನು ರಾಷ್ಟ್ರಪತಿ ಭವನದ ಟ್ವಿಟರ್ ಖಾತೆಗೆ ಟ್ಯಾಗ್‌ ಮಾಡಿದ್ದರು.

    ಪೋಸ್ಟ್ ನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಅ. 26ರಂದು ಖುದ್ದಾಗಿ ಹಾಜರಾಗುವಂತೆ ವಿಶ್ವೇಶ್ವರ ಭಟ್ ಅವರಿಗೆ ನೋಟಿಸ್‌ ನೀಡಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss