ಬೆಳ್ಳಾರೆಯ ಅಂಗಡಿಯೊಂದರಲ್ಲಿ ಉದ್ಯೋಗಿ ಯಾಗಿರುವ ಯುವತಿಯೊಬ್ಬರ ಮೊಬೈಲ್ ಸ್ಫೋಟಗೊಂಡ ಘಟನೆ ಗುರುವಾರ ನಡೆದಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ಅ್ಯಪ್ ನಿಂದ ಆನ್ ಲೈನ್ ಮೂಲಕ ರೆಡ್ ಮಿ ನೋಟ್ 8 ಎನ್ನುವ ಮೊಬೈಲ್ ಸೆಟ್ಟನ್ನು ಖರೀದಿಸಿ ಯುವತಿಗೆ ನೀಡಿದ್ದರು. ಕಳೆದ ಎರಡು ದಿನಗಳ ಹಿಂದೆ ಇವರ ಮೊಬೈಲ್ ನಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮೊಬೈಲ್ ಶಾಪ್ ನಲ್ಲಿ ದುರಸ್ತಿಗೆ ಮಾಡಿಸಿದ್ದರು. ಜೂ. 2 ರಂದು ಇವರು ಬೆಳ್ಳಾರೆಯ ಕೆಳಗಿನ ಪೇಟೆಯ ಹೊಟೇಲ್ ಉಲ್ಲಾಸ್ ಗೆ ಬಂದು ಟೇಬಲ್ ಮೇಲೆ ಮೊಬೈಲ್ ಇಟ್ಟು ಸ್ನೇಹಿತೆಯರ ಜೊತೆ ಮಾತನಾಡುತ್ತಿರುವಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ. ಹೋಟೆಲ್ ನಲ್ಲಿದ್ದ ಗ್ರಾಹಕರು ಮತ್ತು ಹೊಟೇಲ್ ಮಾಲಕರು, ಅಕ್ಕಪಕ್ಕದ ಅಂಗಡಿಯವರು ಅಲ್ಲಿಗೆ ಆಗಮಿಸಿದರೆನ್ನಲಾಗಿದೆ. ಹೊಟೇಲ್ ಮಾಲಕರಾದ ವಸಂತ ಉಲ್ಲಾಸ್ ರವರು ಉರಿಯುತ್ತಿದ್ದ ಮೊಬೈಲ್ ನ್ನು ಟೇಬಲ್ ನಿಂದ ನೆಲಕ್ಕೆ ದೂಡಿದರು. ಅಷ್ಟರಲ್ಲೇ ಟೇಬಲ್ ನ ಮೇಲ್ಬಾಗದ ಪ್ಲೈವುಡ್ ಕರಟಿ ಕಪ್ಪಾಗಿತ್ತು. ಒಂದು ವೇಳೆ ಯುವತಿ ಫೋನ್ ನಲ್ಲಿ ಮಾತನಾಡುತ್ತಿರುವಾಗ ಅಥವಾ ಕೈಯಲ್ಲಿ ಹಿಡಿದುಕೊಂಡಿರುವಾಗ ಈ ಘಟನೆ ನಡೆಯತ್ತಿದ್ದರೆ ಆಕೆಗೆ ತೀವ್ರ ಗಾಯವಾಗುತ್ತಿತ್ತು. ಮೊಬೈಲ್ ಬೆಂಕಿಗಾಹುತಿಯಾದರೂ ಅದರ ಕವರ್ ನಲ್ಲಿ ಇದ್ದ ಸ್ವಾಮಿ ಕೊರಗಜ್ಜನ ಫೊಟೊ ಮಾತ್ರ ಉರಿದಿರಲಿಲ್ಲಿಲ್ಲ ಮೊಬೈಲ್ ಧಿಡೀರನೆ ಸ್ಫೋಟಗೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.