ತುಳುನಾಡ ರಕ್ಷಣಾ ವೇದಿಕೆ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಮನೋಜ್ ನಾಯರ್ ಅವರನ್ನು ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಕಛೇರಿ, ಸ್ಟೇಟ್ ಬ್ಯಾಂಕ್ ನಲ್ಲಿ ತು.ರ.ವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮನೋಜ್ ನಾಯರ್ ಮತ್ತು ಅವರ ನೂತನ ತಂಡಕ್ಕೆ ಶುಭ ಹಾರೈಸಿದರು. ತುಳುನಾಡ ರಕ್ಷಣಾ ವೇದಿಕೆ ಕಳೆದ 13 ವರ್ಷಗಳಿಂದ ತುಳುನಾಡಿನ ನೆಲ,ಜಲ ಹಾಗೂ ಭಾಷೆಗೆ ಅನ್ಯಾಯವಾದಾಗ ಗಟ್ಟಿ ದ್ವನಿಯಾಗಿ ನಿಂತು ಜಾತಿ ಮತ ಭೇದವಿಲ್ಲದೆ ತುಳುನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ದಿನ ಸಾಮಾಜಿಕವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿರುವುದಲ್ಲದೆ ವೈಯಕ್ತಿಕ ಬದುಕಿನಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಅನೇಕ ಸಮಸ್ಯೆಗಳಿದ್ದು, ಅಧ್ಯಕ್ಷರಾದ ಮನೋಜ್ ಹಾಗೂ ಅವರ ತಂಡವು ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಪುತ್ತೂರು ತು.ರ.ವೇ ಅಧ್ಯಕ್ಷರಾದ ಮನೋಜ್ ರವರು ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರಿಗೆ ಕೃತಜ್ಞತೆ ಸಲ್ಲಿಸಿ, ತಾವು ಪುತ್ತೂರಿನಲ್ಲಿ ಸಂಘಟನೆಯನ್ನು ಬಲಪಡಿಸಿ ಉತ್ತಮ ಸಮಾಜಮುಖ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ಹೇಳಿದರು.
ಪ್ರಜ್ವಲ್ ರೈ ಪನ್ನೂರು,ಸುಮೇಶ್ ಆಚಾರ್ಯ,ಶಿವ ಪನ್ನೂರು,ಅವಿನಾಶ್ ನಾಯಕ್ ನಗರ,ಮುಸ್ತಫ,ರೋವಿಯನ್,ಅಭಿಷೇಕ್,ಪೃಥ್ವಿ ಮೊದಲಾದ ಪದಾಧಿಕಾರಿಗಳನ್ನು ಯೋಗೀಶ್ ಶೆಟ್ಟಿ ಜಪ್ಪು ರವರು ಶಾಲು ಹೊದಿಸುವ ಮೂಲಕ ಪುತ್ತೂರು ಘಟಕಕ್ಕೆ ಸೇರ್ಪಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ಜೈನ್, ಅಜಯ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಶಾಂತ್ ಭಟ್ ಕಡಬ ಕಾರ್ಯಕ್ರಮ ನಿರೂಪಿಸಿದರು.
©2021 Tulunada Surya | Developed by CuriousLabs