ಮಂಗಳೂರು: ರೈಲಿಗೆ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಬೀಳುವ ವೇಳೆ ವಿದ್ಯಾರ್ಥಿನಿಯನ್ನು ಕಾಲೇಜು ವಿದ್ಯಾರ್ಥಿಯೊಬ್ಬ ರಕ್ಷಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ಕಾಲೇಜೊಂದರ ವಿದ್ಯಾರ್ಥಿನಿಯು ರೈಲು ಚಲಿಸುತ್ತಿದ್ದಾಗ ಹತ್ತಲು ಯತ್ನಿಸಿದರು. ಈ ವೇಳೆ ಕಾಲು ಜಾರಿ ವಿದ್ಯಾರ್ಥಿನಿ ಬೀಳುವ ಹಂತ ತಲುಪಿದಾಗ ಅಲ್ಲೇ ಇದ್ದ ರಥಬೀದಿಯ ಸರಕಾರಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ, ಮಂಜೇಶ್ವರ ಮೂಲದ ಮನೀಶ್ ಎಂಬ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾನೆ.
©2021 Tulunada Surya | Developed by CuriousLabs