Friday, March 29, 2024
spot_img
More

    Latest Posts

    ಮಂಗಳೂರು: ವೀಕೆಂಡ್ ಕರ್ಫ್ಯೂಗೆ ವ್ಯಾಪಾರಸ್ಥರ ತೀವ್ರ ವಿರೋಧ, ಕರ್ಫ್ಯೂ ತೆರವುಗೊಳಿಸುವಂತೆ ಮನವಿ..!

    ಮಂಗಳೂರು: ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ದ.ಕ ಜಿಲ್ಲಾಡಳಿತ ವಾರಾಂತ್ಯ ವೀಕೆಂಡ್ ಕರ್ಫ್ಯೂ ಮುಂದುವರಿಸಿದೆ.

    ಅದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಫ್ಯಾನ್ಸಿ,ಜವಳಿ,ಪಾದರಕ್ಷೆ ಅಂಗಡಿಗಳ ವ್ಯಾಪಾರಸ್ಥರು ಸೇರಿದಂತೆ ಇತರರು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ.ದ.ಕ ಜಿಲ್ಲೆಯ ಪುತ್ತೂರು ನಗರದ ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೇಟೆಗಳಲ್ಲಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ಕೊರೋನಾ ಮಾರ್ಗಸೂಚಿ ಉಲ್ಲಂಘಿಸಲು ಸರ್ವ ವರ್ತಕರ ಸಂಘ ಮುಂದಾಗಿತ್ತು.

    ಇದೀಗ ಸ್ಥಳೀಯ ಜಿಲ್ಲಾಡಳಿತದ ಮನವಿ ಮೇರೆಗೆ ಒಂದು ವಾರದ ಮಟ್ಟಿಗೆ ತನ್ನ ನಿಲುವನ್ನು ಮುಂದೂಡಿಕೆ ಮಾಡಿದೆ.ಮಂಗಳೂರು ನಗರದಲ್ಲೂ ಕೂಡಾ ಇದೆ ರೀತಿಯ ವಿರೋಧ ವ್ಯಕ್ತವಾಗಿದ್ದು ಸರಕಾರದ ವಿರುದ್ಧ ವರ್ತಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಶನಿವಾರ ಹಾಗೂ ಭಾನುವಾರದ ವೀಕೆಂಡ್ ಕರ್ಫ್ಯೂ ನಿಂದ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯನಾ ಎಂಬ ಪ್ರಶ್ನೆ ಹಾಕ್ತಿದ್ದಾರೆ.ಅಲ್ಲದೆ ವೀಕೆಂಡ್ ಕರ್ಫ್ಯೂ ಮುಂದುವರಿಸದಂತೆ ಸರಕಾರವನ್ನು ಮನವಿ ಮಾಡಿಕೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss