ಮಂಗಳೂರು : ನಗರದ ಎ.ಜೆ.ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆಶೀಶ್ ಶೆಟ್ಟಿ ಹಾಗೂ ಕರಾವಳಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಜೀತ್ ಅವರು ಮಂಗಳೂರಿನಿಂದ ಲೇಹ್ ಲಡಾಕ್ ಗೆ ಬೈಕ್ ಯಾನ ಆರಂಭಿಸಿದ್ದಾರೆ .
ಆಶೀಶ್ ಶೆಟ್ಟಿ ಅವರು ಶಿವಾನಂದ ಶೆಟ್ಟಿ ಹಾಗೂ ಆಶಾ ಶೆಟ್ಟಿ ಅತ್ತಾವರ ಅವರ ಪುತ್ರನಾಗಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಜೀತ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದು , ಎಲೆಂಜಿನಾ ಪ್ರಭು ಹಾಗೂ ವೇದಾ ಟಿ.ಸಿ.ಪ್ರಭು ಅವರ ಪುತ್ರ .ಆಶೀಶ್ ಶೆಟ್ಟಿ ಹಾಗೂ ಜೀತ್ ಅವರು ಹವ್ಯಾಸಿ ಬೈಕ್ ರೈಡರ್ ಗಳಾಗಿದ್ದು , ಹಿಮಾಲಯನ್ ರಾಯಲ್ ಎನ್ ಫೀಲ್ಡ್ ಬುಲೆಟ್ ನಲ್ಲಿ ಲಡಾಕ್ ಗೆ ಪ್ರಯಾಣಿಸಿದ್ದಾರೆ.ಪ್ರಯಾಣ ಆರಂಭದ ವೇಳ ಇಬ್ಬರೂ ವಿದ್ಯಾರ್ಥಿಗಳ ಪೋಷಕರು ಶುಭ ಹಾರೈಸಿ ಬೀಳ್ಕೊಟ್ಟರು.
ವಿದ್ಯಾರ್ಥಿ ಯುವಜನರಲ್ಲಿ ಸಾಹಸ ಯಾನ ಮತ್ತು ಫಿಟ್ನೆಸ್ ಹಾಗೂ ದುಷ್ಚಟ ಮುಕ್ತ ಸಮಾಜದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಈ ಸಾಹಸ ಪ್ರಯಾಣದ ಆಶಯವಾಗಿದೆ ಎಂದು ಆಶೀಶ್ ಶೆಟ್ಟಿ ಹಾಗೂ ಜೀತ್ ಅವರು ತಿಳಿಸಿದರು .